ಈ ಪುಟವನ್ನು ಪ್ರಕಟಿಸಲಾಗಿದೆ

40
ಪಶುವಂ ಕೊಲುವರೆ? ಎನ್ನಂ ಬಿಡುವರೆ? ಕರುಣಿ, ಕರುಣಿ!... ಇನ್ನೇನು, ಇನ್ನೇನು?”

ಬಸವಣ್ಣನು ಅತಿಯಾಗಿ ಹಲುಬಿದನು. ಸಂಗನನ್ನು ಆಲಿಂಗಿಸಿ ಆತನನ್ನು ತನ್ನ ಆಶ್ರುಗಳಿಂದ ಎರೆದನು. ಅಂದು ಅವನಿಗೆ ಅಗ್ಗವಣೆ ಹೂಗಳಿಗಾಗಿ ಹೋಗಲು ಕೂಡ ಮನಸ್ಸಾಗಲೊಲ್ಲದು ಆದರೂ ಅದನ್ನು ಕೆಲಕಾಲದ ತರುವಾಯ ತಂದು, ಆತನು ಸಂಗನನ್ನು ಪೂಜಿಸಿದನು. ಆದರೆ ಮೋಹದ ಮುನಿಸಿನಿಂದ ಪ್ರಸಾದವನ್ನು ಸ್ವೀಕರಿಸದೆ, ಆಶ್ರಮಕ್ಕೆಯೂ ತೆರಳಲಾರದೆ, ಬಸವಣ್ಣನು ಸಂಗನ ಪಾದದ ಬಳಿ ಹಾಗೆಯೇ ಮಲಗಿಬಿಟ್ಟನು. ರಾತ್ರಿಯಲ್ಲಿ ಭಕ್ತನ ಈ ಸ್ಥಿತಿಯನ್ನು ನೋಡಿ, ಸಂಗಮನಾಥನು ಕೌತುಕಗೊಂಡು, ಆತನ ಕನಸಿನಲ್ಲಿ ಬಂದು ಆತನನ್ನು ಈ ಬಗೆಯಾಗಿ ಸಂತೈಸಿದನು :

“ಎಲೆ ಕಂದ, ಬಸವ! ನಿನ್ನನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ? ಬೇಡಯ್ಯ ಬೇಡೆನ್ನರಸ! ಬೇಡೆನ್ನ ಭಕ್ತನಿಧಿಯೆ! ನಿನ್ನೊಡನೆ ಬಿಡದೆ ಬಪ್ಪೆಂ೧೪

ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೆ !
ನೆನೆಯೆ ಮಂದಿರ್ದಪಂ ಕರೆದೊಡೋ ಎಂದಪೆಂ
ಮನದೊಳಗೆ ಕರದೊಳಗೆ ತನುವಿನೊಳಗಿರ್ದಪೆಂ
ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪಂ
ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ !

“ನಾಳೆ ಮಧ್ಯಾಹ್ನದೊಳು ಶುದ್ಧಾಂಗನಾಗಿ ಬಂದು, ನಂದಿಕೇಶ್ವರನ ಮುಂದೆ ಎನ್ನಂ ನೆನೆವುತ್ತ ಕುಳ್ಳಿರೆ, ವೃಷಭನ ಮುಖಾಂತರ ಆವೆ ಬಂದಪೆವು... ಅಲ್ಲಿಂ ಬಳಿಕ್ಕಂ ಎಮ್ಮನರ್ಚಿಸುತ್ತೆ ಭಕ್ತರ ಬಂಧುವಾಗಿ,

೧೩. ಬ. ರ. ಪು. ೨೧
೧೪. ಬ. ರ. ಪು. ೨೨
೧೫. ಬ. ರ. ಪು. ೨೬