ಈ ಪುಟವನ್ನು ಪ್ರಕಟಿಸಲಾಗಿದೆ

58

ನಿಜದರುಶನರುಹಿಕೊಟ್ಟ ಗುರುವೇ !
ನಿರ್ಮಳಪ್ರತಿಭೆಯ ತೋರಿಕೊಟ್ಟ ಗುರುವೇ !
ನಿಮ್ಮ ಘನವ ಕಾಂಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ
ಬಸವಯ್ಯನ ಪ್ರಭೆಯಲ್ಲಿ ಅಡಗಿತ್ತು.

ಬಸವಣ್ಣನವರು ತ್ರಿವಿಧ ದಾಸೋಹದಲ್ಲಿ ಸದೈವ ನಿರತರು. ಅವರು ತಮ್ಮ ತನುವನ್ನು ಗುರುವಿನ ಸೇವೆಯಲ್ಲಿಯೂ ಮನವನ್ನು ಲಿಂಗದ ಧ್ಯಾನದಲ್ಲಿಯೂ ಧನವನ್ನು ಜಂಗಮರ ಸೇವೆಯಲ್ಲಿಯೂ ಸವೆಯಿಸಿದರು. ಗುರುವಿನ ಆಜ್ಞೆಯ ಮೇರೆಗೆ ನಡೆಯುವದೇ ಆತನ ಸೇವೆ. ಧರ್ಮಪ್ರಸಾರಕ್ಕಾಗಿ ಗುರುಗಳು, ರಾಜರ ಹಾಗೂ ಪ್ರಜೆಗಳ ಸೇವೆಯ ಕಾಯಕವನ್ನು ಕೈಕೊಳ್ಳಲು ಅವರನ್ನು ಆಜ್ಞಾಪಿಸಿದರು. ಆ ಕಾರ್ಯವನ್ನು ಬಸವಣ್ಣನವರು ದಕ್ಷತೆಯಿಂದ ನೆರವೇರಿಸಿದರು. ಅದಕ್ಕಾಗಿ ಅವರನ್ನು ಕೆಲ ಪ್ರಮಥರು ಹಳಿದಾಗ ಬಸವಣ್ಣನವರು ಅವರಿಗೆ ತಮ್ಮ ಕಾಯಕದ ಉದ್ದೇಶವನ್ನು ಈ ಬಗೆಯಾಗಿ ಅರುಹಿದರು.

ಹೊತ್ತಾರೆ ಎದ್ದು, ಕಣ್ಣ ಹೊಸೆಯುತ್ತ
ಎನ್ನೊಡಲಿಂಗೆ, ಎನ್ನೊಡವಲಗೆ,
ಎನ್ನ ಮಡದಿಮಕ್ಕಳಿಗೆಂದು,
ಕುದಿದೆನಾದರೆ ಎನ್ನ ಮನಕ್ಕೆ ಮನವೇ ಸಾಕ್ಷಿ.
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನುತ್ತರವನವರಿಗೆ ಕೊಡಲ (ಮ್ಮುವೆ) :
ಹೊಲೆಯ ಹೊಲೆಯರ ಮನೆಯ ಹೊಕ್ಕು
ಸಲೆ ಕೈಕೂಲಿಯ ಮಾಡಿದರೆಯೂ,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನೊಡಲವಸರಕ್ಕೆ ಕುದಿದೆನಾದರೆ,
ತಲೆದಂಡ ! ಕೂಡಲಸಂಗಮದೇವಾ.