ಈ ಪುಟವನ್ನು ಪ್ರಕಟಿಸಲಾಗಿದೆ
67

ಈ ಬಗೆಯಾಗಿ ಅವರು ಕುಲಮದವನ್ನು ಅಳಿಸಲು ಯತ್ನಿಸಿದರಲ್ಲದೆ, ಸಮಾಜದಲ್ಲಿ ಬಹುಕಾಲದಿಂದ ಬೇರೂರಿದ ಅಸ್ಪೃಶ್ಯತೆಯನ್ನಳಿಸಲು ಯತ್ನಿಸಿದರು. ಅದಕ್ಕಾಗಿ ಶಿವಭಕ್ತನಾದ ಅಸ್ಪೃಶ್ಯರಲ್ಲಿ ಹೋಗಿ ಪ್ರಸಾದವನ್ನು ಸೇವಿಸಲು ಕೂಡ ಅವರು ಹಿಂಜರಿಯಲಿಲ್ಲ. "ಡೋಹರ ಕಕ್ಕೆಯ್ಯ, ಮಾದರ ಚೆನ್ನಯ್ಯ - ಎನ್ನ ಆಪ್ತ ಬಂಧುಗಳು' ಎಂದು ಸಾರತೊಡಗಿದರು. ಇದನ್ನು ಕಂಡು ಬಿಜ್ಜಳರಾಯನ ಓಲಗದಲ್ಲಿಯ ಕೆಲ ಉಚ್ಚವರ್ಣದ ಅಧಿಕಾರಿಗಳು ಈ ಸಂಗತಿಯನ್ನು ಆತನಿಗೆ ಅರುಹಿದರು. ಅದನ್ನು ತಡೆಯಲು ಆತನನ್ನು ಬಿನ್ನವಿಸಿದರು.

ಇದು ಬಸವಣ್ಣನವರ ಸ್ನೇಹಿತರಿಗೆ ತಿಳಿದಾಗ ಅವರು ಇಂಥ ವಿಷಯದಲ್ಲಿ ಅವಸರಪಡದಿರಲು, ಮೇಲಿನ ವರ್ಣದವರನ್ನು ಕೆರಳಿಸದಿರಲು, ಅವರನ್ನು ಬೇಡಿಕೊಂಡರು. ಅದರಿಂದ ಬಿಜ್ಜಳನ ಕ್ರೋಧವು ಕೆರಳಿ ತಮ್ಮ ಕಾರ್ಯಹಾನಿ ಆದೀತು, ಎಂದ ಬಸವಣ್ಣನವರನ್ನು ಎಚ್ಚರಿಸಲು ಯತ್ನಿಸಿದರು. ಆದರೆ ಬಸವಣ್ಣನವರು ಅವರ ಮಾತಿಗೆ ಕಿವಿ ಕೊಡಲಿಲ್ಲ. ಅವರು ತಮ್ಮ ಈ ಕಾರ್ಯವನ್ನು ನಿರ್ಭೀತಿಯಿಂದ ಹಾಗೆಯೇ ಮುಂದುವರಿಸಿದರು. ಅವರು ತಮ್ಮ ಸ್ನೇಹಿತರಿಗೆ ಹೇಳಿದುದೇನೆಂದರೆ :
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವದು ?
ನಮ್ಮ ಕುನ್ನಿಗೆ ಕೂಸು ಕೊಡಬೇಡ
ನಮ್ಮ ಸೊಣಗಂಗೆ ತಳಿಗೆಯನಿಕ್ಕಬೇಡ.
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲದೇ ?
ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ ?
ಅದೇ ಮೇರೆಗೆ ಬಸವಣ್ಣನವರು ತಮ್ಮ ಹೃದಯಸ್ಥ ಸಂಗನಿಗೂ ಈ ರೀತಿ ಅರಿಕೆ ಮಾಡಿಕೊಂಡರು :
ಆನೆ ಅಂಕುಶಕ್ಕಂಜುವದೇ, ಅಯ್ಯಾ
ಮಾಣದೆ ಸಿಂಹನ ನಖವೆಂದು ಅಂಜುವದಲ್ಲದೆ ?