68
ಆನೀ ಬಿಜ್ಜಳಂಗಂಜುವೆನೆ, ಅಯ್ಯಾ
ಕೂಡಲಸಂಗಮದೇವಾ !
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ ?
ಬಸವಣ್ಣನವರು ಸಮತೆಯನ್ನು ಸಮಾಜದಲ್ಲಿ ನಿರ್ಮಿಸಲು
ಯತ್ನಿಸಿದಂತೆ, ಸತ್ಯ-ಸದಾಚಾರಗಳನ್ನೂ ಕಾಯಕ- ಪ್ರೀತಿಯನ್ನೂ ಅದರಲ್ಲಿ
ಹುಟ್ಟಿಸಲು ತುಂಬ ಹೆಣಗಿದರು. ಅವುಗಳ ಹಿರಿಮೆಯನ್ನು ಜನರಿಗೆ
ಪರಿಪರಿಯಾಗಿ ತಿಳಿಹೇಳಿದರು. 'ದಿಟವ ನುಡಿಯಿರಿ ! ನುಡಿದಂತೆ
ನಡೆ ಯಿರಿ ! ಅದರಿಂದ ಅಂತರಂಗ- ಬಹಿರಂಗಗಳನ್ನು
ಪರಿಶುದ್ಧಗೊಳಿಸಿರಿ ! ದುಡಿದು ಪಡೆಯಿರಿ, ಪಡೆಯಲು ದುಡಿಯಿರಿ,
ನೀಡಲು ಪಡೆಯಿರಿ. ಬರಿ ಇಡಬಲ್ಲ, 'ಆದಾನಂ ಹಿ ವಿಸರ್ಗಾಯ ಸತಾಂ
ವಾರಿಮುಚಾಮಿವ.' 'ಹಿರಿಯರು ಮೋಡದಂತೆ, ನೀಡಲು
ಪಡೆಯುವರು' ಎಂಬುದನ್ನು ಮರೆಯದಿರಿ.
ಆಯುಷ್ಯವುಂಟು, ಪ್ರಳಯವಿಲ್ಲೆಂದು, ಅರ್ಥವ ಮಡಗುವಿರಿ.
ಆಯುಷ್ಯವು ತೀರಿ, ಪ್ರಳಯ ಬಂದರೆ, ಅರ್ಥವನುಂಬುವರಿಲ್ಲ.
ನೆಲನನಗಿದು ಮಡುಗದಿರಾ ! ನೆಲ ನುಂಗಿದೊಡುಗುಳುವದೇ?
ಕಣ್ಣಲ್ಲಿ ನೋಡಿ, ಮಣ್ಣಿನಲ್ಲಿ ನರಹಿ, ಉಣ್ಣದೆ ಹೋಗದಿರಾ!
ಕೂಡಲಸಂಗನ ಶರಣರಿಗೊಡನೆ ಸವೆಸುವದು.
ದುಡಿದು ನೀಡಲು ಪಡೆಯುವದೆ ಕಾಯಕದ ಹಿರಿಯ ಗುರಿ, ಅಂಥ
ಕಾಯಕದಿಂದಲೇ ಕೈಲಾಸದ ವೈಭವ, ಅದರಲ್ಲಿಯೇ ಕೈಲಾಸವ ದಿವ್ಯ
ಆನಂದ ! ಎಂಬುದು ಬಸವಣ್ಣನವರ ಬೋಧೆ. ಈ ಬಗೆಯಾಗಿ
ಕಾಯಕದಲ್ಲಿ ಅವರು ಸ್ವಾವಲಂಬನ ಸಮರ್ಪಣಗಳ ಸಮನ್ವಯ
ಮಾಡಲು ಕಲಿಸಿದರು. ಅದರ ಜತೆಯಲ್ಲಿ 'ಹಿರಿಮೆಯು ಧನದ
ರಾಶಿಯಲ್ಲಿರುವುದಿಲ್ಲ ಮನದ ಘನತೆಯಲ್ಲಿ ಇರುವುದು' ಎಂಬುದನ್ನು
ಅರುಹಲು ಕೂಡ ಬಸವಣ್ಣನವರು ಮರೆಯಲಿಲ್ಲ. ಅವರ ಆದರ್ಶ
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೭
ಈ ಪುಟವನ್ನು ಪ್ರಕಟಿಸಲಾಗಿದೆ