ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಗ್ಯೂಹ ಬಿಟ್ಟನು. ಸ್ವಲ್ಪ ಹೊತ್ತಿನ ತರುವಾಯ ಅವನು ಮಹಾರಾಜರ ಬಳಿಗೆ ತಿರಿಗಿ ಹೋಗಿ ರಂಗನಾಥ ಸ್ವಾಮಿಗಳು ಕೋಣವನ್ನು ಕೊಂದು ಮಾಂಸವನ್ನು ಅಡಿಗೆ ಮಾಡುಸುತ್ತಿದ್ದ ವರ್ತಮಾನವನ್ನು ತಿಳಿಸಿ “ಸಮರ್ಥರು ರಂಗನಾಥ ಸ್ವಾಮಿಗೆ ಭ್ರಷ್ಟನೆಂದದ್ದು ಯಥಾರ್ಧವದೆ” ಎಂದು ಹೇಳಿದನು, ಅದು ಮಹಾರಾಜರಿಗೆ ನಿಜ ಎಂದು ತರಲಿಲ್ಲ. ಅವರು ಬಹಳ ವಿಚಾರ ಮಾಡುವಲ್ಲಿ ತೊಡಗಿದರು, ಕೆಲವು ಹೊತ್ತಿನ ತರುವಾಯ ಮಹಾರಾಜರು ತಮ್ಮ ವಿಶ್ವಾಸಿಳನದ ಪಾರುಪತ್ಯmರನ ನ್ನುಅಲ್ಲಿಗೆ ಹೋಗಿ ನಿಜವಾದ ಸಂಗತಿಯನ್ನು ನೋಡಿಕೊಂಡು ಬಾ” ಎಂದು ಕೇಳಿ ಸಿದರು. ಅವನೂ ಆದನ್ನೆಲ್ಲ ಪರೀಕ್ಷಿಸಿ ನೋಡಿ ಮಹಾರಾಜರಿಗೆ ತಿಳಿಸಿದನು, ಆಗ ಮಹಾರಾಜರು ಅದನ್ನೆಲ್ಲ ಕೇಳಿ ಸಖೇದಾಶ್ಚಯಪಟ್ಟರು. ಇತ್ತಲಾ ಆರಮನೆಯಲ್ಲಿ ಎಲೆಗಳನ್ನು ಬಡಿಸಿರಲಾಗಿ ಸಮರ್ಥರು ಮಹಾರ ಜರಿಗೆ “ ಉಳಿದವರೆಲ್ಲರು ಊಟಕ್ಕೆ ಕೂಡಲಿ, ನೀವು ಸಹಾ ಊಟಕ್ಕೆ ಕೂತು ಕೊಳಿರಿ, ನಮ್ಮ ರಂಗನಾಥನು ಭ್ರಷ್ಟನಾಗಿದ್ದರೂ, ಅವನು ಉಂಡನೋ ಉಪ ವಾಸ ಬಿದ್ದನೋ ಎಂಬದನ್ನು ನಾನು ನೋಡಿಕೊಂಡು ಬರಲಿಕ್ಕೇಬೇಕು, ಅವನು ಊಟಮಾಡುವ ಹೊರತು ನಾನು ಊಟಕ್ಕೆ ಕೂಡ್ರಲಾರೆನು” ಎಂದು ಹೇಳಿದರು. ಆಗ ಮಹಾರಾಜರು ಎಲ್ಲರನ್ನು ಊಟಕ್ಕೆ ಕೂಡ್ರಿಸಿ ನಾನೂ ನಿಮ್ಮ ಸಂಗಡ ಬರುವನು ” ಎಂದು ನುಡಿದು ಸಮರ್ಥರ ಬೆನ್ನುಹು ಹೋದರು, ಉಭಯತ ರೂ ರಂಗನಾಥ ಸ್ವಾಮಿಗಳು ಉಳಿದ ಸ್ಥಳಕ್ಕೆ ಹೋದರು, ಸ್ವಾಮಿಗಳ ಬಿಡಾರದ ಬಾಗಿಲವು ಇಕ್ಕಿತ್ತು. ಸಮರ್ಥರು ಒದರಿ ಅದನ್ನು ತಗಿಸಿದರು, ಉಭಯತರು ಮನೆಯೊಳಗೆ ಪ್ರವೇಶಿಸಿ ನೋಡಲು ಒಳಂಗಳದಲ್ಲಿ ಕೋಣದ ಎಲವ ತೊಗಲು ಗಳು ಬಿದ್ದಿದ್ದವು; ರಮಾಂಸಗಳು ಅಲ್ಲಲ್ಲಿ ಹರವಿದ್ದವು, ಜನಾರ್ದನ ಗೋಸಾವಿ ಯು ಅಡಗಿಯನ್ನು ಮಾಡುತ್ತ ಕುಳಿತಿದ್ದನು. ಅವನನ್ನು ನೋಡಿ ಸಮರ್ಥರು“ ನೀನೂ ಭ್ರಷ್ಟನು ನಿನ್ನ ಗುರುವೂ ಭ್ರಷ್ಟನು ಕೋಣವನ್ನು ಕೊಟ್ಟು ಏನು ತಿನ್ನು ತೀರಿ?” ಅಂದರು, ಅದನ್ನು ರಂಗನಾಥ ಸ್ವಾಮಿಯು ಈಳಿ-“ ನಾವು ಭ್ರಷ್ಟರಾಗಿರುವದನ್ನು ಬಲ್ಲವರು ಸಹಾ ಇಲ್ಲಿಯೇ ಸಮೀಪದಲ್ಲಿರಬಹುದು ” ಎಂ ದು ನುಡಿದನು, ಅದಕ್ಕೆ ಸಮರ್ಥ ರು-“ ರಂಗನಾಥಾ, ಎಷ್ಟೋ ಜನರು ಭ್ರಷ್ಟಕ ದದ್ದನ್ನು ನೋಡಿದ್ದೇನೆ, ಆದರೆ ಕೋಣವನ್ನು ಕೊಂದು ತಿಂದು ಭ್ರಷ್ಟರಾದವರನ್ನು ನಾನು ಇನ್ನೂ ವರೆಗೆ ನೋಡಿಲ್ಲ' ಎಂತ ಉತ್ತರಕೊಟ್ಟರು, ತರುವಾಯ ರಂಗನಾಥ ಸ್ವಾಮಿಯು-“ ನಾನು ಇಂಥಾ ಭ್ರಷ್ಟನೆಂಬುವದು ಸತ್ಯ, ಆದರೆ ನಾನು ಯಾರ ಶಿಷ್ಯನು ” ಎಂದು ವಿಚಾರಿಸಿದನು, ಅದನ್ನು ಕೇಳಿ ಸಮರ್ಥರು ಶಿವಾಜಿ ಮಹಾ ರಾಜರನ್ನುದ್ದೇಶಿಸಿ-• ಶಿವರಾಯ! ಅದೆಂಥಾ ಚಮತ್ಕಾರ! ಪ್ರತ್ಯಕ್ಷ ಕೋಣ