ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - - - - ಏಾಷಣ. ಏಕನಾಥವ೦ತನ ನಮಸ್ಕರಿಸಲು ಕಲ್ಯಾಣಸ್ವಾಮಿಯು ಏಕನಾಥಪಂತನ ಪೂರ್ವೋ ತರವನ್ನು ಸಮರ್ಥರಿಗೆ ನಿವೇದನ ಮಾಡಿದನು, ಅದನ್ನೆಲ್ಲ ಸಮರ್ಥರು ಕೇಳಿಕೊ ಡಿ “ ಈಗಂತೂ ಮಧ್ಯಾಹ್ನ ವಾಯಿತು, ಸ್ನಾನಸಂಧ್ಯಾದಿಗಳನ್ನು ತೀರಿಸಿ ರಘಪ ಶಿಯ ಪ್ರಸಾದ ತೆಗೆದುಕೊಂಡ ತbಎ.ಯ ಕೂಗಬಹುದು” ಎಂದು ಏಕನಾಥ ಸಂತನಿಗೆ ಅಪ್ಪಣತೆಯನ್ನು ಮಾಡಿದರು. ಆಗ ಏಕನಾಥಸ೦ತನು ತನ್ನ ಮನಸ್ಸಿನಲ್ಲಿ« ಇದಂತೂ ನಿಬಿಡಾರಣ್ಯವೂ, ಇಲ್ಲಿ ನೈವೇದ್ಯವು ಎಲ್ಲಿಂದ ಬರಬೇಕು ? ಏನಾಗುವ ದು ನೋಡೋಣ” ಎಂದು ಆಲೋಚಿಸಿ ಸ್ನಾನ ಮಾಡುವ ಸಿದ್ಧತೆಯನ್ನು ನಡಿಸಿದ ನು, ಇತ್ತಲಾ ಸಮರ್ಥರು ಕಲ್ಯಾಣಸ್ವಾಮಿಗೆ- ಆ ಗಿಡಗಂಟಿಗಳ ಹಿಂಭಾಗಕ್ಕೆ ಸರ್ವ ಸಾಹಿತ್ಯವಿರುತ್ತದೆ ಅದನ್ನು ತಕ್ಕೊಂಡು ಅಡಿಗೆ ಮಾಡಿರಿ ” ಎಂದು ಆಜ್ಞಾ ಪಿಸಿದರು, ಆಗ ಕಲೆ "ಣಸಾಮಿಯೂ ಏಕನಾಥಪಂತನೂ ಅಲ್ಲಿಗೆ ಹೋಗಿ ನೋ ಡಲು ಮೂರು ಮಂದಿಗೆ ಸಆ»ಗುವಷ: ಸಾಹಿತ್ಯವು ಇಡಲ್ಪಟ್ಟಿತ್ತು. ಮೂರು ಎಲೆಗಳೂ ಅರು ದೊನ್ನೆಗಳೂ ಸಹ ಅಲ್ಲಿದ್ದವು ! ಅವ್ರಗಳನ್ನು ತಕ್ಕೊಂಡು ಕಲ್ಯಾ ಸ್ವಾಮಿಯು ಅಡಿಗೆಯನ್ನು ಮಾಡಲಾರಂಭಿಸಿದನು, ಇಷ್ಟರಲ್ಲಿ ರಾಜಾಪುರದಿಂದ ೬೦ ಮಂದಿ ಬ್ರಾಹ್ಮಣರು ಸಮರ್ಥರ ದರ್ಶನಕ್ಕೆ ಬಂದರು, ಅವರಿಗೂ ಪ್ರಸಾದ ತೆಗೆದು ಕೊಂಡು ಹೋಗಿರೆಂದು ಸಮರ್ಥ ರು ಆಗ್ರಹ ಮಾಡಿದರೆ ಅವರು “ ನ ಮ್ಮ ಪರಿವಾರವು ದೊಡ್ಡದಿರುತ್ತದೆ, ನಿಮ್ಮ ದರ್ಶನವಾದದ್ದೇ ನಮಗೆ ಪ್ರಸಾ ದವಾದಂತಾಯಿತು, ನಿರೋಪ ಕೊಡಬೇಕು ಎಂದು ಪ್ರಾರ್ಥಿಸಿದರು ಆದ ಸಮರ್ಥರು ಅವರಿಗೆ ಅಪ್ಪಣತೆಯನ್ನು ಕೊಡಲಿಲ್ಲ. ಆಗ ಆ ಬ್ರಾಹ್ಮಣರು ಸಮರ್ಥರ ನುಡಿಯನ್ನು ವಿರಲಾರದೆ ತಮ್ಮ ತಮ್ಮ ಮನಸ್ಸಿನಲ್ಲಿ “ ಇಲ್ಲೆಂತೂ ಮೂರೇ ಎಲೆಗಳ ಮಟ್ಟಿಗೆ ಅಡಿಗೆಯಾದಂತೆ ಕಾಣುತ್ತದೆ, ಅಂದಮೇಲೆ ನಾನು ೬೦ ಮಂದಿ ಅಲ್ಲಿ ಉಣ್ಣನ ಬಗೆ ಹ್ಯಾಗೆ ? ಹೊಟ್ಟೆ ತುಂಬ ಉಣ್ಣದಿದ್ದರೂ ಅಡ್ಡಿ ಇಲ್ಲ. ಸ್ವಾಮಿಗಳನ್ನು ಪ್ರೀತಿಪಡಿಸುವದಕ್ಕಾಗಿ ಒಂದೊಂದು ತುತ್ತು ಉಂಡು ದಾರಿಯನ್ನು ಹಿಡಿಯೋಣ' ಎಂದು ವಿಚಾರ ಮಾಡುತ್ತ ಸ್ಥಾನವನ್ನು ಮಾಡಿ ತಮ್ಮ ತಮ್ಮ ಧೋತರಗಳನ್ನು ಹಿಂಡಿ ಒಣಗಿಸಿಕೊಂಡು ಮಡಿಯನ್ನು ಟ್ಟು ಊಟ ಕೈ ಕೊಡಲು ಸಿದ್ಧರಾದರು, ಆಗ ಏಕನಾಥಪಂತನು ಸಮರ್ಥರ ಬಳಿಗೆ ಬಂದು-ಮೂರು ಎಲೆಗಳೂ ಆರು ದೊನ್ನಿಗಳೂ ಮಾತ್ರ ಉಂಟು, ಇದಕ್ಕೆ ನಪಾಯವ!” ಎದು ಬಹಳ ಚಿಂತಾತುರನಾಗಿ ಕೇಳಿದನು, ಅದಕ್ಕೆ ಸಮರ್ಥರು "ಅಡ್ಡಿ ಇಲ್ಲ. ಇದ್ದ ಎಲೆಗಳನ್ನೇ ಹಾಕುತ್ತಾನಡಿಯರಿ, ಅಂದರೆ ಅವು ಸಾಕಾಗು ವವು” ಎಂದು ನುಡಿದರು, ಏಕನಾಧೆಪೆಂತನು ಮೂರು ಎಲೆಗಳನ್ನು ಕೈಯಲ್ಲಿ ತಕ್ಕೊಂಡು ಹಾಗೇ ಮಾಡಲು, ಅರವತ್ತು ಮಂದಿಗೆ ಸಾಕಾಗಿ ಮೂರು