ಈ ಪುಟವನ್ನು ಪ್ರಕಟಿಸಲಾಗಿದೆ

ii

ಕೆಲವೆಡೆಗಳಲ್ಲಿ ತೋರಿ ಬರುತ್ತಿರುವ ದಷ್ಯ ವಚನಗಳಿಗೆ ಆಯಾ ದೂಷ್ಯ ಪಾತ್ರಗಳೇ ಕಾರಣಗಳು, ಹಾಗೂ ಅಂತಹ ಕೆಟ್ಟ ಬಯ್ಗು ಳಿಂದಾಗುವ ಕೇಡಾವುದೆಂಬುದನ್ನು ಸೂಚಿಸಲಿಕ್ಕೆಂದರೂ ಸಾಕು.

ಈ ಚಿಕ್ಕ ಕಾದಂಬರಿಯಲ್ಲಿ ದೋಷಗಳೇನಾದರೂ ಇದ್ದರೆ ಅವೆಲ್ಲವೂ ನನ್ನವೆಂದೂ ಗುಣಗಳೆಲ್ಲವೂ ನನ್ನ ಸ್ವಾಮಿಗೆ ಸೇರಿವೆಂದೂ ಭಾವಿಸಬೇಕಾಗಿ ಪ್ರಾರ್ಥಿಸುವೆನು. ಮತ್ತು ದೋಷಗಳನ್ನು ತೋರಿಸಿ ಕೊಟ್ಟವರಿಗೆ ವಂದನೆಗಳನ್ನು ಸಮರ್ಪಿಸಿ ಚಿರಕೃತಜ್ಞಳಾಗಿರುವೆನಲ್ಲದೆ, ದೋಷಗಳನ್ನು ಸರಿಪಡಿಸಿ, ಮತ್ತೆ ಆಂತಹ ದೋಷಗಳುಂಟಾಗದಂತೆ ಎಚ್ಚತ್ತುಕೊಳ್ಳುವೆನು.

ಈ ಗ್ರಂಥವು ಪ್ರೋತ್ಸಾಹಾರ್ಹವಾದುದಾಗಿದ್ದರೆ, ಪ್ರೋತ್ಸಾಹವಿತ್ತು. ನನ್ನ ಇತರ-ಇದಕ್ಕೂ ಉತ್ತಮವಾದ-ಗ್ರಂಥಗಳು ಜಾಗ್ರತೆ ಯಾಗಿ ಪ್ರಕಟವಾಗಲು ಅವಕಾಶವನ್ನು ಕಲ್ಪಿಸಿ, ತನ್ಮೂಲಕ ದೇಶ ಭಾಷಾಸೇವೆಯಿಂದ ಧನ್ಯಳನ್ನಾಗಿ ಮಾಡಬೇಕೆಂದು ವಿನಯಪೂರ್ವಕ ವಾಗಿ ಪ್ರಾರ್ಥಿಸುತ್ತಿರುವೆನು.


1-10-1913

ದೇಶೀಯಸೋದರಿ
ನಂಜನಗೂಡು