ಈ ಪುಟವನ್ನು ಪ್ರಕಟಿಸಲಾಗಿದೆ
4]
ಸುಶೀಲೆ
೨೫

!!ಶ್ರೀಃ!!

ಚತುರ್ಥ ಹರಿಚ್ಛೇದ

(ಅಂತರಂಗದ ಅಭಿಸಂಧಿ.)

ಧ್ಯಾಹ್ನ ಮೂರು ಘಂಟೆಯ ಸಮಯ; ಸಕಲ ಚರಾಚರಾತ್ಮಕ ಪ್ರಪಂಚವನ್ನು ಸಮತಾದೃಷ್ಟಿಯಿಂದ ನೋಡುತ್ತಿರುವ ಸೂರ್ಯದೇವನು ತನ್ನ ಪೂರ್ಣತೇಜಸ್ಸಿನಿಂದ ಪ್ರಕಾಶಿಸುತ್ತಿದ್ದನು. ಸಮಸ್ತ ಪ್ರಾಣಿಗಳು ಕೃತಾಕೃತ್ಯಗಳಿಗೂ ಸಾಕ್ಷೀಭೂತನಾದ ಜಗಚ್ಚಕ್ಷುವೇ ಸರ್ವರಕ್ಷಕನು. ಆದರೂ, ಕ್ಷುದ್ರಮಾನವನು ಅತನನ್ನೇ ದೂರುವನು. (ಇದಲ್ಲವೇ ಸ್ವಕಾರ್ಯಧುರಂಧರರ ಸ್ವಭಾವವೆಂಬುದು?) ಅದಿರಲಿ, ನಮ್ಮ ಪಾಠಕರ ಪೂರ್ವಪರಿಚಿತೆಯಾದೆ ಗಿರಿಯಮ್ಮನು ತನ್ನ ಮನೆಯ ಮುಂಗಡೆ ಜಗಲಿಯ ಮೇಲೆ ಕುಳಿತು, ತಾಂಬೂಲಚರ್ವಣದಿಂದ ನಲಿದು, ಹಾಡುತ್ತ ಕುಳಿತಿದ್ದಳು. ಅಲ್ಲಿಗೇ ತಂತ್ರನಾಥನೂ ಬಂದು ಅವಳಿದಿರೆ ಹತ್ತಿರದಲ್ಲಿಯೇ ಕುಳಿತನು.

ಗಿರಿ - ಹಾಡನ್ನು ನಿಲ್ಲಿಸಿ - ತಂತ್ರನಾಥ! ಮನೆಯಲ್ಲಿ ಎಲ್ಲರೂ ಸೌಖ್ಯವಷ್ಟೆ?

ತಂತ್ರ - ಎಲ್ಲರೂ ಸೌಖ್ಯವೇ.

ಗಿರಿ - ಇಂದೇಕೆ ಹೀಗಿರುವೆ? ದೇಹಸ್ಥಿತಿ ಆರೋಗ್ಯವಿಲ್ಲವೇನು?

ತಂತ್ರ - ಆರೋಗ್ಯವಾಗಿಯೇ ಇದೆ; ಆದರೆ ನಿನ್ನೆಯಿಂದ ಮನಸ್ಸಮಾಧಾನವಿಲ್ಲ.

ಗಿರಿ - ಅದೇಕೆ?