ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಚಿರಸ್ಮರಣೆ

 ಬಳಲಿಕೆಯಿಂದ ಬತ್ತಿಹೋಗಿದ್ದ ಮುಖಗಳು ಅವರು ಬಂದ ರೀತಿ
 ಎಂಥದೆಂಬುದನ್ನು ಸಾರಿ ಹೇಳಿದವು.
    "ನಾವು ಮಾಸ್ತರನ್ನು ಈಗ್ಲೇ ನೋಡಬೇಕಾಗಿದೆ" ಎಂದು ಅಪ್ಪು.
    ನೀನು ಯಾರು?--ಎಂದು ಆತ ಕೇಳಲಿಲ್ಲ. ತಲೆಯಾಲ್ಲಾಡಿಸಿ ಆತನೆಂದ:
    "ನೀವು ಬಂದದ್ದು ಒಂದು ದಿನ ತಡವಾಯಿತು. ನಿನ್ನೆಯೇ ಮಾಸ್ತರು ಇಲ್ಲಿಂದ 
 ಹೋದ್ರು."
    "ಎಲ್ಲಿಗೆ?"
    ಹೇಳಬೇಕೋ ಬೇಡವೋ ಎಂದು ಅರೆಕ್ಷಣ ಸುಮ್ಮನಿದ್ದು ಆತ ಉತ್ತರವಿತ್ತ:
    "ಭೂಗತರಾದ್ರು. ನಿಮ್ಮೂರಿನ ಗಲಾಟೆಗೆ ಸಂಬಂಧಿಸಿಯೇ ಅವರ ಮೇಲೆ 
 ವಾರಂಟು ಹೊರಟಿದೇಂತ ತೋರ್ತದೆ."
    ಅಪ್ಪು, ನೆಲ ನೋಡಿ ತಲೆ ಎತ್ತಿದ.
   "ಅವರು ನಮಗೆ ಸಿಗೋದು ಸಾಧ್ಯವೇ ಇಲ್ಲ ಅಂತೀರಾ?"
   "ಅವರು ಈ ಊರಲ್ಲಿಲ್ಲ. ನಿಮ್ಮ ಕಡೆಗೆ ಹೋಗಿರ್ತಾರೆ."
   ಧೃಢವಾದ ಧ್ವನಿಯಲ್ಲಿ ಉತ್ತರ ಬಂತು:
   "ಇಲ್ಲ, ಈಗ ಊರಲ್ಲಿ ಯಾರೂ ಇಲ್ಲ ಸಂಗಾತಿ."
   ಅಪ್ಪು ಅಬೂಬಕರನತ್ತ ನೋಡಿ ಹೇಳಿದ.
   "ಹಾಗಾದರೆ ಇಲ್ಲೇನೂ ನಮಗಿನ್ನು ಕೆಲಸವಿಲ್ಲ ಹೊರಡೋಣ." 
   ಅಬೂಬಕರನ ಸ್ನೇಹಿತನೆಂದ:
   "ರಕ್ಷಣೆ ಬೇಕಾದರೆ ಹೇಳಿ. ನೀವಿಬ್ಬರೂ ಇರೋದಕ್ಕೆ ಏರ್ಪಾಟು ಮಾಡ್ತೇವೆ."
   ಅಪ್ಪು ಕೊಟ್ಟದು ನಿರ್ಧಾರದ ಉತ್ತರ :
   "ಇಲ್ಲ, ನಾವು ಊರಿಗೆ ಹೋಗ್ಬೇಕು."
   ಹಾಗೆ ಹೇಳಿದೊಡನೆಯೇ ಏನೋ ಯೋಚಿಸಿ ಆತ ಅಬೂಬಕರನತ್ತ ತಿರುಗಿ
 ಹೇಳಿದ:
   "ನೀನು ಬೇಕಾದರೆ ಇಲ್ಲಿರು, ಸಂಗಾತಿ."
   ಆ ಯೋಚನೆಯ ಅಗತ್ಯವೇ ಇಲ್ಲವೆನ್ನುವಂತೆ ಅಬೂಬಕರ್ ತಕ್ಷಣ 
 ಉತ್ತರವಿತ್ತ:
   "ಇಲ್ಲ, ನಾನೂ ಜತೆಯಲ್ಲೇ ಬರ್ತೇನೆ. ನಡಿ."
   ..............
   ಹಾದಿ ವೆಚ್ಚಕ್ಕೆಂದು ಸ್ವಲ್ಪ ಹಣ ಪಡೆದು ನಡುರಾತ್ರೆಯ ರೈಲಿನಲ್ಲಿ ಅವರು,