ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೨೪೧
"ಅದು ನಿಜ." "ಚವತ್ತೂರಿನಿಂದ ನಡೆದುಕೊಂಡು ಹೋಗಬೇಕು,ಅಲ್ಲವೂ?" "ಹೌದು.ಆದರೆ ಬೇರೆ ಅನು ಕೊಲವೆಲ್ಲ ನಮ್ಮವರು ಮಾಡ್ತಾರೆ." "ಆಗಲಿ,ಆಗಲಿ.ನನ್ನ ಅನುಕೊಲದ ವಿಷಯ ಆಮೇಲೆ ಮಾತಾಡೋಣ. ಮೊದಲು ಈ ಕೇಸು ನಾವು ಗೆಲ್ಬೇಕು." ಚಿರುಕಂಡ ಕೇಳಿದ: "ಈ ಕೋಟಿ೯ನಲ್ಲಿ ಕೇಸು ಎಷ್ಟು ತಿಂಗಳು ನಡೀಬಹುದು?" ವಕೀಲರು ಚಿರುಕಂಡನತ್ತ ಆಸಕ್ತಿಯಿಂದ ನೋಡಿ ಹೇಳಿದರು: "ಕಡೇ ಪಕ್ಷ ನಾಲ್ಕು ತಿಂಗಳಾದರೂ ಆದೀತು.ಸ್ವಷಲ್ ಕೋಟು೯ ನ್ಯಾಯಾಧೀಶರು ಬೇಗನೆ ಯಾಕೆಮುಗಿಸ್ತಾರೆ ಹೇಳಿ?" "ಈ ಕೋಟು೯ ಅದ್ಮೇಲೆ?"ಎಂದ ಅಪ್ಪು. ಈತನಿಗೆ ನ್ಯಾಯ ವ್ಯವಹರಣೆಯ ವಿಷಯ ಹೆಚ್ಚು ತಿಳಿಯದೆಂದು ಖಚಿತವಾಗಿ ವಕೀಲರೆಂದರು: "ಈ ನ್ಯಾಯಾಧೀಶರು ಆರೋಪ ನಿದಿ೯ಷ್ಟಪಡಿಸಿ ಸೆಷನ್ಸ್ ಗೆ ಹಾಕ್ತಾರೆ.ಸೆಷನ್ಸ್ ವ್ಯವಹರಣೆಗೆ ನಮ್ಮ ಕಡೆಗೆ ಮದರಾಸಿನಿಂದ ಪಿಳ್ಳೆಯೂ ಬರ್ತಾರಂತೆ.ಪಿಳ್ಳೆ ಹೆಸರು ಕೇಳದ್ದೀರೋ?" ಅದು ಯಾರೋ,ಅಪ್ಪು-ಚಿರುಕಂಡರಿಗೆ ಗೊತ್ತಿರಲಿಲ್ಲ.ಮಾಸ್ತರೆಂದರು: "ಹೊಂ.ಅವರು ಪ್ರಖ್ಯಾತ ವಕೀಲರೂಂತ ಗೊತ್ತು." "ಸರಿ.ನೀವೇನೂ ಹೆದರ್ಬೇಡಿ." ವಕೀಲರು ಹೆದರಿಕೆಯ ಪ್ರಸ್ತಾಪಮಾಡಿದರೆಂದು ಅಪ್ಪುವಿಗೆ ನಗು ಬಂತು. ಆದರೆ ನಗುವುದು ಅಭಾಸವೆನಿಸೀತೆಂದು ಆತ ತುಟಿಗಳನ್ನು ಬಿಗಿಹಿಡಿದ. ತಾವು ಚಿತ್ರಿಸಿಕೊಂಡಿದ್ದ ಮೊಕದ್ದಮೆಯ ಬೆಳೆವಣಿಗೆಯ ಸೊಕ್ಷ್ಮ ರೂಪವನ್ನು ಆ ಮೂವರು ಮುಂದಿಡುತ್ತ,ವಕೀಲ ರಾಜಾರಾಯರೆಂದರು: "ಆ ಪೋಲೀಸಿನವರು-ಏನು ಅವನ ಹೆಸರು? ಸುಡುಗಾಡಿಂದು.....ಹಾಂ.... ಸುಬ್ಬಯ್ಯ-ಅವನು ಸತ್ತದ್ದು ಆಕಸ್ಮಿಕ ಅಂತಲೇ ನಮ್ಮ ಡಿಫೆನ್ಸ್ ವಾದ.ಅದೇ ಸರಿಯಾದದ್ದು...." ಇವರ ಮಾತುಕತೆ ಇನ್ನೂ ಮುಗಿದಿಲ್ಲವೇನೋ ಎಂದು ನೋಡುತ್ತ ಅತ್ತ ಸುಳಿದ ಜೇಲರನ್ನು ಕಂಡು,ತಗ್ಗಿದ ಸ್ವ್ರರದಲ್ಲಿ ವಕೀಲರು ಕೇಳಿದರು: "ಇಲ್ಲಿ ನಿಮಗೆಲ್ಲ ಅನುಕೊಲವಾಗಿದೆಯೋ?ನೀವು ರಾಜಕೀಯ ಕೈದಿಗಳಲ್ಲ, .'
16