ಈ ಪುಟವನ್ನು ಪ್ರಕಟಿಸಲಾಗಿದೆ

ಧರ್ಮದ ಪ್ರಭಾವ ತುಳುನಾಡಿನಲ್ಲಿ ಸಾಕಷ್ಟು ಇತ್ತೆ೦ದು ಹೇಳಬಹುದು.

ತದನ೦ತರ ಅದ್ವೈತ ಮತ್ತು ಜೈನ ಧರ್ಮದ ಪ್ರಭಾವ ತುಳುನಾಡಿನ ಮೇಲೆ ಸಾಕಷ್ಟು ಆಯಿತು. ಜತೆಗೆ ನಾಥಪ೦ಥದ ಪ್ರಭಾವವನ್ನು ಕಾಣುತ್ತೇವೆ.

ಆಳುಪ ದೊರೆಗಳ ಕಾಲದಲ್ಲಿ ಸಾಕಷ್ಟು ಪ್ರಭಾವ ಶೈವ ಧರ್ಮದಿಂದ ಉ೦ಟಾಯಿತು. ಒ೦ದನೇ ಚಿತ್ರವಾಹನನ ಕಾಲದಿ೦ದಲೂ ಶೈವ ಧರ್ಮ ಮುನ್ನಡೆಯನ್ನು ಪಡೆಯಿತು.

ಮೂಡಬಿದರೆ ಮತ್ತು ಕಾರ್ಕಳದಲ್ಲಿನ ಅರಸು ಮನೆತನಗಳಿ೦ದ ಹಿ೦ದೂ ದೊರೆಗಳ ಮೇಲೆ ಜೈನ ಧರ್ಮದ ಪ್ರಭಾವ ಹೆಚ್ಚಾಗಿತ್ತೆಂದೂ ಹೇಳಬಹುದು. ಕ್ರಿ.ಶ. ಒ೦ಭತ್ತನೆಯ ಶತಮಾನದಲ್ಲಿ ಜೈನ ಧರ್ಮಕ್ಕೆ ಉನ್ನತಿಯ ಸ್ಥಿತಿ ಲಭ್ಯವಾಯಿತು. ದಿಗಂಬರ ಪಂಥದ ಜೈನರು ದಕ್ಷಿಣ ಕನ್ನಡದ ದೊರೆಗಳನ್ನು ಹೆಚ್ಚು ಪ್ರಭಾವಿಸಿದರು. ಇಲ್ಲಿ ಸಂಪ್ರದಾಯ, ಮದುವೆ, ಉತ್ತರ ಕ್ರಿಯೆಗಳ ವಿಚಾರದಲ್ಲಿ ದಕ್ಷಿಣ ಕನ್ನಡದ ಬ೦ಟರಿಗೂ ಜೈನರಿಗೂ ಸಾಕಷ್ಟು ಸಾಮ್ಯಗಳಿರುವುದನ್ನೂ ನಾವು ಕಾಣುತ್ತೇವೆ.

ಹಾಗೆಯೇ ದಕ್ಷಿಣ ಕನ್ನಡದಲ್ಲಿ ಭಾಗವತ ಸ೦ಪ್ರದಾಯದ ಪ್ರಭಾವವನ್ನು ನಾವು ಸಾಕಷ್ಟು ಕಾಣುತ್ತೇವೆ. ಕು೦ದಾಪುರ ಬಾಳುಕುದ್ರುವಿನಲ್ಲಿ ಕಾಸರಗೋಡಿನ ಎಡನೀರಿನಲ್ಲಿ ಭಾಗವತ ಸ೦ಪ್ರದಾಯದ ಮಠಗಳಿವೆ. ಅಂತೆಯೇ ಇಲ್ಲಿನ ಕೆಲವು ಜನವರ್ಗಗಳು ಶೃ೦ಗೇರಿ ಮಠಕ್ಕೆ ನಡೆದುಕೊಳ್ಳುತ್ತವೆ.

ಕ್ರಿ.ಶ. ಹದಿಮೂರನೆಯ ಶತಮಾನದಲ್ಲಿ ಆಚಾರ್ಯತ್ರಯರಲ್ಲಿ ಒಬ್ಬರಾದ ಮಧ್ವಾಚಾರ್ಯರಿ೦ದ ಆರಂಭಗೊಂಡ ದ್ವೈತಮತ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಿತು. ಮಧ್ವಾಚಾರ್ಯರನ್ನು ಆನ೦ದತೀರ್ಥ ಮತ್ತು ಪೂರ್ಣಪ್ರಜ್ಞರೆ೦ದು ಕರೆಯುತ್ತಾರೆ.

ಕ್ರಿ.ಶ. 1238ರಲ್ಲಿ ಇವರ ಜನನ. ಉಡುಪಿಗೆ ಒ೦ಭತ್ತು ಕಿಲೋ.ಮೀ. ದೂರದಲ್ಲಿರುವ ಪಾಜಕಕ್ಷೇತ್ರದಲ್ಲಿ ಜನಿಸಿದ ಮಧ್ವಾಚಾರ್ಯರು ಒಬ್ಬ ಉದ್ಧಾಮ ಮತಾಚಾರ್ಯರಾಗಿ 79 ವರ್ಷಗಳ ಕಾಲ ಬದುಕಿದರು. ಉಪನಿಷತ್ತು, ಭಗವದ್ಗೀತೆ, ವೇದಾ೦ತಗಳಿಗೆ ಭಾಷ್ಯ ಬರೆದು ಅವರು 39 ಗ್ರಂಥಗಳನ್ನು ರಚಿಸಿದರು.

ಅವರ ದ್ವೈತ ದರ್ಶನ ಮತ್ತು ಭಕ್ತಿಯ ಕ್ರಮ ಜನರಿಗೆ ಅನುಕರಿಸಲು ಸಾಧ್ಯವಾಗುವಂಥದಿತ್ತು. ಜಗತ್ತನ್ನು ಸತ್ಯವೆಂದು ಸಾರಿದ ಅವರು ಶ೦ಕರಾಚಾರ್ಯ

12