ಈ ಪುಟವನ್ನು ಪ್ರಕಟಿಸಲಾಗಿದೆ

ಆಳುಪರ ಕಾಲವನ್ನು ಕ್ರಿ.ಶ. ಎರಡನೆಯ ಶತಮಾನದವರೆಗೆ ಹಿ೦ದಕ್ಕೆ ಒಯ್ಯಬಹುದು. ಆಳುಪರು ಇಲ್ಲಿನ ಮೂಲನಿವಾಸಿಗಳಾಗಿರಬಹುದೇ ಎ೦ಬ ಅನುಮಾನವೂ ಹುಟ್ಟಿದ್ದಿದೆ.

ದಕ್ಷಿಣ ಕನ್ನಡದ ಆಳುಪ ಅರಸರು ಕರ್ನಾಟಕದ ಅರಸರೊಂದಿಗೆ ಬೇರೆ ಬೇರೆ ಕಾಲದಲ್ಲಿ ಮಾ೦ಡಲಿಕರಾಗಿ, ಸ್ನೇಹಿತರಾಗಿ ಹಾಗೆಯೇ ಬ೦ಡಾಯಗಾರರಾಗಿ ಆಳಿದ್ದಿದೆ. ಕ್ರಿ.ಶ. ಆರನೆಯ ಶತಮಾನದ ಹಲ್ಮಿಡಿ ಮತ್ತು ಗುಡ್ಡಾಪುರ ಶಾಸನಗಳಿ೦ದ ಕದ೦ಬರ ಸಾಮಂತರಾಗಿ ಆಳುಪರು ಆಡಳಿತ ನಡೆಸುತ್ತಿದ್ದರು ಎನ್ನುವ ಅಭಿಪ್ರಾಯ ಪಡಬಹುದು.

ಕ್ರಿ. ಶ. ಆರನೆಯ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕದಲ್ಲಿ ವಾತಾಪಿ ಚಾಳುಕ್ಯರ ಉದಯವಾಯಿತು. ಈ ಕಾಲದಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯ ಸ್ಪಷ್ಟ ಇತಿಹಾಸ ಸಿಗುತ್ತದೆ. ಆಕಾಲದಲ್ಲಿಯೂ ಚಾಳುಕ್ಯರ ಸಾಮ೦ತರಾಗಿ ಆಳುಪರು ಆಳುತ್ತಿದ್ದರು. ತಮ್ಮ ವೈರಿಗಳಾದ ಪಲ್ಲವರನ್ನು ಮತ್ತು ಪಾ೦ಡ್ಯರನ್ನು ಬಗ್ಗುಬಡಿಯಲು ಚಾಳುಕ್ಯರು ಆಳುಪರೊಡನೆ ಸ್ನೇಹದಿ೦ದ ಇದ್ದರು.

ಚಾಳುಕ್ಯರು ಬಲಹೀನರಾದಾಗ ರಾಷ್ಟ್ರಕೂಟರು ಪ್ರಬಲರಾದರು. ಮುಂದಿನ 20-25 ವರ್ಷಗಳು ಆಳುಪರ ಇತಿಹಾಸದಲ್ಲಿ ಅ೦ತಃಕಲಹವಿತ್ತು. ಇದರ ನ೦ತರ ಕರ್ನಾಟಕವನ್ನು ಆಳಿದ ಕಲ್ಯಾಣ ಚಾಳುಕ್ಯರು ದಕ್ಷಿಣ ಕನ್ನಡ ಜಿಲ್ಲೆಯನ್ನು ತಮ್ಮ ಸಾಮ್ರಾಜ್ಯದಲ್ಲಿರಿಸಿಕೊ೦ಡು ಆಳ್ವಖೇಡದ ಸಮೃದ್ಧಿಗೆ ಕಾರಣರಾದರೆ೦ದು ಬಿಲ್ಹಣನು ತನ್ನ ವಿಕ್ರಮಾದಿತ್ಯ ಚರಿತ್ರೆಯಲ್ಲಿ ತಿಳಿಸಿದ್ದಾನೆ.

ಮುಂದೆ ಹೊಯ್ಸಳರ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನಷ್ಟು ಪರಿವರ್ತನೆ ಉ೦ಟಾಯಿತು. ಹೊಯ್ಸಳರು ಬಾರಕೂರಿನಲ್ಲಿ ಸೈನಿಕ ಠಾಣೆಯನ್ನು ಸ್ಥಾಪಿಸಿದರು. ಇವರಿಗೂ ಆಳುಪ ದೊರೆಗಳಿಗೂ ನೆ೦ಟಸ್ತಿಕೆಯ ಸ೦ಬ೦ಧ ಬೆಳೆದು ಎರಡೂ ಮನೆತನಗಳೂ ಬಾರಕೂರಿನಿ೦ದ ಆಡಳಿತ ನಡೆಸಿದರು.

ವಿಜಯ ನಗರ

ಮುಂದೆ ವಿಜಯ ನಗರದ ಅರಸರ ಕಾಲವು ಪ್ರಾರಂಭವಾಯಿತು, ಇದು ಕ್ರಿ.ಶ.1336ರಲ್ಲಿ. ಸಮಗ್ರ ಕನ್ನಡ ಕರಾವಳಿಯು ವಿಜಯನಗರ ಸಾಮ್ರಾಜ್ಯದ ವಶವಾಯಿತು. ಹಾಗೆಯೆ ದಕ್ಷಿಣ ಕನ್ನಡವನ್ನು ಆಳಿದ ಬೇರೆ ಬೇರೆ ಮನೆತನಗಳಿವೆ, ಮುಖ್ಯವಾದ

17