ಈ ಪುಟವನ್ನು ಪ್ರಕಟಿಸಲಾಗಿದೆ

1836ರ ವೇಳೆ ಚಿಕ್ಕವೀರ ರಾಜನ ದೊಡ್ಡಪ್ಪನ ಪ್ರಥಮ ಪುತ್ರ ತನ್ನ ಅರಸೊತ್ತಿಗೆಯನ್ನು ತನಗೆ ಮರಳಿಸುವಂತೆ ಕೇಳಿದಾಗ ದಿವಾನರ ಬೆ೦ಬಲವಿದ್ದ ಬ್ರಿಟಿಷರ ಸರಕಾರ ಅವನನ್ನು ಸೆರೆಯಲ್ಲಿಟ್ಟಿತು.

ಈ ಘಟನೆಗೂ ಕನ್ನಡ ಜಿಲ್ಲೆಗೂ ಸ೦ಂಬಂಧವಿದೆಯೆ೦ದು ಆ ವಿಚಾರವನ್ನು ಪ್ರಸ್ತಾಪಿಸಲಾಗುತ್ತಿದೆ. ಯಾಕೆ೦ದರೆ ಆಕಾಲದಲ್ಲಿ ಬ್ರಿಟಿಷರನ್ನು ಒದ್ದೋಡಿಸಬೇಕೆ೦ಬ ಗುಪ್ತ ಸ೦ಘಟನೆ ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿ ನಡೆಯುತ್ತಲೇ ಇತ್ತು. ಈ ಕೆಲಸದಲ್ಲಿ ದಿವಾನರೂ ಇತರ ಆಢ್ಯರೂ ಸೇರಿಕೊ೦ಡಿದ್ದರು. 1845ರ ವರೆಗೆ ದಕ್ಷಿಣ ಕನ್ನಡದ ಧರ್ಮಾಧಿಕಾರಿಗಳಾಗಿ ಸ್ಥಾನಿಕ ಬ್ರಾಹ್ಮಣರು ನಿಯುಕ್ತರಾಗಿ ಕೊ೦ಡಿರುತ್ತಿದ್ದರು. ದಿವಾನ ಲಕ್ಷ್ಮೀನಾರಾಯಣಯ್ಕನ ಊರು ಸುಳ್ಳದ ಬಳಿ ಅಜ್ಜಾವರವಾಗಿತ್ತು. ಕೊಡಗಿನ ಬ್ರಿಟಿಷರ ರಾಜಕೀಯದ ವಿರುದ್ದ ಬ೦ಡೇಳುವ ಪ್ರಸ೦ಗದಲ್ಲಿ ಕಲ್ಯಾಣಸ್ವಾಮಿ ಮತ್ತು ಇತರ ಮುಖ೦ಡರು ತೊಡಗಿಕೊಂಡು ಹದಿನೆ೦ಟನೆಯ ಶತಮಾನದಲ್ಲಿ ಬ್ರಿಟಿಷರ ವಿರುದ್ದ ಪ್ರಥಮ ಬ೦ಡಾಯ ದಕ್ಷಿಣ ಕನ್ನಡದಲ್ಲಿ ನಡೆಯಿತು. ಇದೇ 'ಕಲ್ಯಾಣಪ್ಪನ ಕಾಟಕಾಯ' ಎ೦ದು ಪ್ರಸಿದ್ಧವಾಗಿದೆ.

1834ರ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಸೆಲ್‌ ಮಿಶನ್‌ನವರು ಪ್ರಚಾರ ಶಿಕ್ಷಣ, ಮುದ್ರಣ, ಸಮಾಜಸೇವೆಗಳ ಒಲವು ದಕ್ಷಿಣ ಕನ್ನಡಕ್ಕೆ ತನ್ನತನವನ್ನು ಗುರುತಿಸಿಕೊಳ್ಳಲು ಸಹಾಯ ಮಾಡಿತು. ಟಿಪ್ಪುವಿನ ಕಾಲದಲ್ಲಿ ಆಘಾತಗೊಂಡಿದ್ದ ಜಿಲ್ಲೆಯ ಕ್ಕಾಥೋಲಿಕ್‌ ಸಮಾಜಕ್ಕೆ ಪ್ರೊಟೆಸ್ಟೆ೦ಟರ ಚಟುವಟಿಕೆ ಉತ್ಸಾಹ ತಂದಿತ್ತು. ಪ್ರಾಶ್ಚಾತ್ಯ ಶಿಕ್ಷಣದ ವ್ಯಾಪ್ತಿ, ಕ್ರೈಸ್ತ ಮಿಶನರಿಗಳ ಚಟುವಟಿಕೆ ದಕ್ಷಿಣ ಕನ್ನಡಕ್ಕೆ ಪ್ರೇರಣೆಯನ್ನು ಇತ್ತವು. 1870ರಲ್ಲಿ ಮಂಗಳೂರಲ್ಲಿ ಬ್ರಹ್ಮಸಮಾಜ ಚಟುವಟಿಕೆ ಆರ೦ಭಗೊಂಡಿತು. ಹತ್ತೊ೦ಬತ್ತನೇ ಶತಮಾನದ ಹೊತ್ತಿಗೆ ಥಿಯೋಸೊಫಿಕಲ್‌ ಸೊಸೈಟಿ ಉದಯವಾಗಿ 1901ರ ವೇಳೆಗೆ ಆದು ಕೇಂದ್ರ ಸ೦ಸ್ಥೆಯಿ೦ದ ಮಾನ್ಯತೆ ಪಡೆಯಿತು. 1919ರಲ್ಲಿ ಆರ್ಯಸಮಾಜದ ಚಟುವಟಿಕೆಗಳು ಆರಂಭಗೊಂವು. ಈ ಎಲ್ಲಾ ಚಟುವಟಿಕೆಗಳು ರಾಷ್ಟ್ರೀಯ ಜಾಗೃತಿಗೆ ಹಿನ್ನೆಲೆ ಒದಗಿಸಿದವು.

ಆದರೆ ಈ ಶತಮಾನದ ಆರ೦ಭದ ಬ೦ಗಾಳದಲ್ಲಿನ ಚಟುವಟಿಕೆಗಳು ದಕ್ಷಿಣ ಕನ್ನಡಕ್ಕೆ ಅ೦ತಹ ಪ್ರೇರಣೆಯನ್ನು ನೀಡಲಿಲ್ಲ. ಇಲ್ಲಿಯ ರಾಷ್ಟ್ರೀಯ ಜಾಗೃತಿಯ ಜನಕರಾದ ಕಾರ್ನಾಡ ಸದಾಶಿವರಾಯರಿಂದ ಮಂಗಳೂರಿನಲ್ಲಿ ಹೋ೦ ರೂಲ್‌

22