ಈ ಪುಟವನ್ನು ಪ್ರಕಟಿಸಲಾಗಿದೆ

ಚಳವಳಿಯ ಚಟುವಟಿಕೆಗಳು ಆರ೦ಭವಾದವು. ಕಾರ್ನಾಡರು ಬ್ರಹ್ಮ ಸಮಾಜದ ಕನಸಿನಲ್ಲಿದ್ದವರು. ಆಧುನಿಕ ಸಮಾಜದ ನಿರ್ಮಾಣಕ್ಕೆ ಆವರು ಪ್ರಯತ್ನಿಸಿದ್ದವರು.

ಉಡುಪಿಯಲ್ಲಿ 1921ರ ಎಪ್ರಿಲ್‌ ತಿ೦ಗಳಲ್ಲಿ ಜಲಿಯನ್‌ ವಾಲಾಬಾಗ್‌ ದಿನಾಚರಣೆಯ ಆರ೦ಭದೊಂದಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸ್ಥಾಪನೆಗೊಂಡಿತು. 1920ರಲ್ಲಿ ಕಾರ್ನಾಡರು ಕಲ್ಕತ್ತದ ವಿಶೇಷ ಅಧಿವೇಶನಕ್ಕೆ ಹೋಗಿ ಬ೦ದರು. 1922ರಲ್ಲಿ ಎರಡನೆಯ ಕರ್ನಾಟಕ ಪ್ರಾ೦ತೀಯ ರಾಜಕೀಯ ಪರಿಷತ್ತು ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 1930ರ ಕಾನೂನು ಭ೦ಗ ಚಳುವಳಿ ಕಾಲಕ್ಕೆ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಅನೇಕ ಚಟುವಟಿಕೆಗಳು ನಡೆದವು. ಉಪ್ಪಿನ ಸತ್ಕಾಗ್ರದಲ್ಲಿ ನೂರಾರು ಜನರು ಪಾಲ್ಗೊಂಡರು. ಅದೇ ಕಾಲದಲ್ಲಿ ಇಸವಿ 1930-31 ರಲ್ಲಿ ಗಾಂಧಿ — ಇರ್ವಿನ್‌ ಒಪ್ಪ೦ದದ ತನಕ ಜಿಲ್ಲೆಯಲ್ಲಿ ನೂರಾರು ಜನ ಸೆರೆಮನೆ ವಾಸ ಅನುಭವಿಸಿದರು.

ಇದೇ ರೀತಿಯಲ್ಲಿ ಆರಂಭವಾದ ಹೋರಾಟವು ಮುಂದೆ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿಯೂ ಉತ್ಸಾಹದಿ೦ದ ಬೆಳೆಯಿತು. ಭಾರತ ಸ್ವತಂತ್ರವಾಗುವ ವರೆಗೂ ದಕ್ಷಿಣ ಕನ್ನಡ ಜಿಲ್ಲೆ ಕೂಡಾ ಸ್ವಾತ೦ತ್ರ್ಯ ಸಮರದ ಚಟುವಟಿಕೆಗಳಲ್ಲಿ ಅನೇಕ ನಾಯಕರಿ೦ದ ಮಾರ್ಗದರ್ಶನ ಪಡೆಯಿತು.

ಈವರೆಗೆ ದಕ್ಷಿಣ ಕನ್ನಡ ಐತಿಹಾಸಿಕ ನೋಟವೊ೦ದರಲ್ಲಿ ದೊರೆಗಳ ಕಾಲದಿ೦ದ ಪ್ರಜಾಪ್ರಭುತ್ವ ದೊರಕುವವರೆಗಿನ ಹೋರಾಟವೊಂದನ್ನು ನಾವು ಗಮನಿಸಿದೆವು. ಒಂದು ದೃಷ್ಟಿಯಿ೦ದ ದಕ್ಷಿಣ ಕನ್ನಡ ಈ ಶತಮಾನದ ಆದಿಯಿ೦ದಲೇ ನೂರಾರು ಅನ್ಯಪ್ರದೇಶಗಳ ಜನರ ಸ೦ಬ೦ಧದಿಂದ ತನ್ನನ್ನು ಬೆಳೆಸಿಕೊಳ್ಳುತ್ತಾ ಬಂದಿದೆ. ಆ ದೃಷ್ಟಿಯಲ್ಲಿ ದಕ್ಷಿಣ ಕನ್ನಡಕ್ಕೆ ತನ್ನನ್ನು ಇತರ ಪ್ರದೇಶಗಳ ಜನರ ಪ್ರಭಾವಕ್ಕೆ ಒಡ್ಡಿಕೊಳ್ಳುವುದು ತನ್ನ ಪ್ರಭಾವವನ್ನು ಇತರರ ಮೇಲೆ ಬೀರುವ ಒ೦ದು ವಿಶೇಷವಾದ ಕೊಳು-ಕೊಡುಗೆಯ ಸಂಸ್ಕೃತಿಯ ಆಭ್ಯಾಸವಾಗಿದೆ.

ದಕ್ಷಿಣ ಕನ್ನಡದ ಪ್ರಾಗೈತಿಹಾಸಿಕ ಶಿಲಾಸ೦ಸ್ಕೃತಿ ಮತ್ತು ಇತಿಹಾಸ ಪೂರ್ವ ಕಾಲದ ದಾಖಲೆಗಳಿ೦ದ ಇನ್ನೂ ಅನೇಕ ಅಂಶಗಳು ಪ್ರಕಟಗೊಳ್ಳುತ್ತವೆ. ಅದರಲ್ಲಿ ಸ್ಪಷ್ಟವಾಗುವುದೆ೦ದರೆ ದಕ್ಷಿಣ ಕನ್ನಡದಲ್ಲಿ ವಾಸವಾಗಿರುವ ಎಲ್ಲಾ ಜನಾ೦ಗಗಳು ಬೇರೆ ಬೇರೆ ಕಡೆಯಿ೦ದ ವಲಸೆಬ೦ದವರೆಂಬುದು ತಿಳಿಯುತ್ತದೆ. ಈ ಜಿಲ್ಲೆಯನ್ನು

23