ಈ ಪುಟವನ್ನು ಪ್ರಕಟಿಸಲಾಗಿದೆ

88

ನಿರಂಜನ:ಕೆಲವು ಸಣ್ಣ ಕಥೆಗಳು

ನೀರೂ....ನೀರೂ....
ಪರಕೀಯ ಕಪಟಿಗಳೂ ಸ್ವಕೀಯ ಧೂರ್ತರೂ ಸೇರಿ ಮೈಸೂರಿಗೆ ಮುಳಿ
ವಾದರು. ಟಿಪ್ಪು ಹೋರಾಡುತ್ತ ಮಡಿದ....'ನನ್ನ ಸ್ನೇಹಿತನಲ್ಲವಾದರೂ
ಒಪ್ಪಬೇಕಾದ್ದೆ-ಗಂಡುಮಗು.'
ತನ್ನನ್ನು ಬಿಟ್ಟರು. ತಮ್ಮನ್ನು ಸೇರಿಕೊಳ್ಳುತ್ತಾನೆ ಎಂದುಕೊಂಡಿರ
ಬೇಕು!
ತಾನು ಹಕ್ಕಿಯಾದೆ, ಗಿಡುಗನಾದೆ, ಪಕ್ಷಿ ಸಂಕುಲದ ರಾಜನಾದೆ.
ಯಾವ ವಂಶದವನು ಧೊಂಡಿಯಾ?
ಅಹ್ಹ! ಯಾವ ವಂಶದವರು ಹೈದರ್-ಟಿಪ್ಪು?
ಅವರು ರಾಜ್ಯ ಕಟ್ಟಬಹುದಾದರೆ ತಾನು ಕಟ್ಟಬಾರದೆ?
ಗೆಲುವು, ಸೋಲು-ಗೆಲುವು, ಸೋಲು....
ಅಂತಿಮ ವಿಜಯ ನಮ್ಮದಾಗಬೇಕು.
ಬಿಳಿದೊಗಲ ಸುಲಿಗೆಗಾರರನ್ನು ಸಪ್ತ ಸಾಗರಗಳ ಆಚೆಗೆ ಅಟ್ಟಬೇಕು.
-'ಅರರೆ ಎನ್ನಯ ಸಮಾನರ್‍ಯಾರು?'
-'ನಾನು ಅಸಮಾನ. ಎರಡು ಲೋಕಗಳ ಅರಸ ಈ ಧೊಂಡಿಯಾ.'
ಪಂತ ಗೋಖಲೆ ತನ್ನನ್ನು ಸೋಲಿಸಿದ್ದ. ತಾನು ಅವನನ್ನು ಸೋಲಿಸಿದೆ.
ಆಂಗ್ಲರ ಹಸ್ತಕರಾಗುವವರಿಗೆಲ್ಲ ಮರಾಠರದೇ ದುರ್ಗತಿ! ಗೋಖಲೆಯ
ಗುಂಡಿಗೆ ಬಗೆದು ಆ ನೆತ್ತರನ್ನು ಮೀಸೆಗೆ ಮುಟ್ಟಿಸಿ, ಪ್ರತೀಕಾರದ ಪ್ರತಿಜ್ಞೆ
ಯನ್ನು ಈಡೇರಿಸಿಕೊಂಡೆ.
ದುಶ್ಯಾಸನರು.
ತಾನೋ ಭೀಮ, ಬಲಭೀಮ.
ಕೊಲ್ಲಾಪುರದ, ಸುರಪುರದ ಅರಸರು ತನಗೆ ನೆರವಾಗಬೇಕು. ಕಿತ್ತೂರಿನ
ದೊರೆ ತನ್ನನ್ನು ಸೇರಬೇಕು. ಎಲ್ಲರೊಂದಾದರೆ ಆಂಗ್ಲರ ಕತೆ ಮುಗಿದಂತೆ.
ಶಿರಹಟ್ಟಿಯ ಕಾಳಗ... ಕನಕಗಿರಿಗೆ ದೇವದುರ್ಗಕ್ಕೆ... ನಿಜಾಮನ ಆಧಿ
ಪತ್ಯದಲ್ಲಿ...ಊಹೂಂ, ಹೇಗಾದರೂ ಮಾಡಿ ತಾನು ಮೈಸೂರಿಗೆ ಮರಳ
ಬೇಕು. ಫರಂಗಿಯವರು ದಣಿದು ಬೇಸತ್ತು, ಬೆನ್ನಟ್ಟುವ ಕೆಲಸವನ್ನು ಬಿಟ್ಟು
ಬಿಡುವಂತೆ ಮಾಡಬೇಕು...
ಇದು ಕೋಣಗಲ್. ಇಲ್ಲಿ ಈ ಇರುಳಿಗೆ ವಿಶ್ರಾಂತಿ.
ಕಣ್ಣುಗಳು ಭಾರವಾಗುತ್ತಿವೆ. ಇದು ನಿದ್ರೆಯ ಆರಂಭವೊ? ವಿಶ್ರಾಂತಿಯ
ಕೊನೆಯೊ?