ಈ ಪುಟವನ್ನು ಪರಿಶೀಲಿಸಲಾಗಿದೆ

22 ನಿರಂಜನ: ಕೆಲವು ಸಣ್ಣ ಕಥೆಗಳು ಹೇಗೆ?” “ಹೂಂ” ಎಂದರು ರಾಜರು. ಸುಸಜ್ಜಿತ ಸೇನೆಯೂ ಅವರ ರಕ್ಷಣೆಗೆ ಹೊರಟಿತು.

   ಕೆಲವೆಡೆ ಸ್ವಚ್ಛ ನೀರಿನ ಮೇಲೆ, ಬೇರೆ ಕೆಲವೆಡೆ ತಾವರೆಗಳ  ದಂಟು_

ದಳಗಳನ್ನು ಸರಿಸಿ, ದೋಣಿಗಳು ಸಾಗಿದುವು.ಆ ಎಪ್ಪತ್ತಾರು ಮಂದಿ ಉಸಿರು ಬಿಗಿ ಹಿಡಿದು ಕುಳಿತಿದ್ದರು. ಹುಟ್ಟಿನದೊಂದು ಏಕನಾದ, ನೀರಿನ ಸುಳು ಸುಳು ಸಪ್ಪಳ-ಇವೇ ಸಂಗೀತವಾಗಿತ್ತು.

    ಅವರೇನು ಮಾಡುವರು? ಆ ದಂಡೆಯನ್ನು ಸೇರಿ ಅವರೇನು ಮಾಡು

ವರು? ಒಬ್ಬನೆಂದಿದ್ದ:"ಆ ರಾಜನಿಗೆ ನಮ್ಮ ಕಷ್ಟಗಳನ್ನು ವಿವರಿಸಿ ಹೆಳೋಣ. ಅವನ ಮನಸ್ಸನ್ನು ಬದಲಿಸೋಣ" ಆ ಮಾತಿಗೆ ಹಲವರು ಥೂ_ಥೂ ಎಂದಿ ದ್ದರು, ಕಣ್ಣಲ್ಲಿ ನೆತ್ತರಿಲ್ಲದ, ಹೃದಯ ಕಲ್ಲಾಗಿದ್ದ, ಮಾನವಿಯತೆಯ ಅರಿವಿಲ್ಲದೆ ಮಹಾರಾಜನ ಮನಸ್ಸನು ಬದಲಿಸುವುದೆ?

   ಹಿಂದಿನ ದಿನ ನಗರದ ವಿದ್ಯಾಲಯದಿಂದ ಓದು ನಿಲ್ಲಿಸಿ  ಹಿಂದೆ  ತಮ್ಮ

ಹಳ್ಳಿಗೆ ಬಂದಿದ್ದು ಇಬ್ಬರು ತರುಣರಲ್ಲೊಬ್ಬ, “ಹೃದಯ ಪರಿವರ್ತನೆಯಂತೆ! ಅವನಿಗೆ ಹೃದಯವಿದ್ದರಲ್ಲವೆ ಪರಿವರ್ತನೆ?” ಎಂದಿದ್ದ. ಇನ್ನೊಬ್ಬ, “ಮಹಾ ರಾಜನನ್ನು ಸೆರೆ ಹಿಡಿಯೋಣ. 'ಕಾಶ್ಮೀರ ಸಿಂಹ'ನ ಬಿಡುಗಡೆಯಾಗುವವರೆಗೆ ಬಂದೀಖಾನೆಯಲ್ಲಿಡೋಣ. ಆಮೇಲೆ ಗಂಟುಮೂಟೆ ಸಹಿತ ಕಾಶ್ಮೀರದಿಂದ ಹೊರಕ್ಕಟ್ಟೋಣ" ಎಂದು ತೀರ್ಪು ಕೊಟ್ಟಿದ್ದ.

   ದೂರ  ದೂರ-ಒಂದು  ಯುಗವಾಗಿ  ತೋರುತ್ತಿದ್ದವು  ಆ  ಕೆಲವು

ಸಂದಿಗ್ಧ ನಿಮಿಷಗಳು. ನೂರುನೂರೇ ಗಜ ಮುಂದೆ ಮುಂದಕ್ಕೆ, ಅರಸು ಭವನದ ವಿದ್ಯುದ್ದೀಪಗಳಲ್ಲಿ ಆಗಲಿನ್ನೂ ಪ್ರಜ್ವಲಿಸುತ್ತಿದ್ದ ಕೆಲವು, ದೂರದ ಹತ್ತಾರು ನಕ್ಷತ್ರಗಳಂತೆ ಕಾಣುತ್ತಿದ್ದುವು.

   ಇನ್ನೆರಡು  ಫರ್ಲಾಂಗು  ಮುಂದೆ  ಹೋದರಾಯಿತು,  ಅವರ ಗುರಿ

ಸಮೀಪಿಸುವುದು. ದಂಡೆ ಸಿಗುವುದು. ಅನಂತರ ಅವರ ಕಾರ್ಯ ಕೈಗೂಡು 'ವುದು.

    ಅಲ್ಲಿ ಆಗಲೆ ಆಚೆ ದಂಡೆಯ ವಿದ್ಯುದ್ದೀಪಗಳು ಬೆಳಗಿ ಅನಂತ  ತಾರೆ

ಗಳಾದುವು. ಕಾವಲುಗಾರರಿಗೆ ಸುಳಿವು ಹತ್ತಿತೇನೋ. ಶಿಕಾರಿಯ ವಿದ್ಯುತ್ ಕಂದೀಲು ಸರೋವರದುದ್ದಕ್ಕೂ ಬೆಳಕು ಹಾಯಿಸಿತು. ಢಂ_ಎಂದೊಂದು ಗುಂಡು ದೋಣಿಗಳೆಡೆಯಿಂದ ಸುಂಯ್‍ಗುಟ್ಟ ಹಾದುಹೋಯಿತು. ನಗರದ ಆ ವಿದ್ಯಾರ್ಥಿ ಯುವಕ ಆರಂಭಿಸಿದ:

   "ಇಂಕ್ವಿಲಾಬ್!_"