ಈ ಪುಟವನ್ನು ಪರಿಶೀಲಿಸಲಾಗಿದೆ
ರಕ್ತ ಸರೋವರ 23
ಎಪ್ಪತ್ತಾರು ಕಂಠಗಳೂ ಒಮ್ಮೆಲೆ ಘೋಷಿಸಿದುವು "ಜಿಂದಾಬಾದ್!" "ಕಶ್ಮೀರ್ ಬಾಗಿ_" "ಜಿಂದಾ ಹೈ!" "ಛೋಡ್ದೋ" "ಇಂಕ್ವಿಲಾಬ್!_" "ಜಿಂದಾಬಾದ್" ಢಂ_ಢಂ_ಢಂ_ಎಂದು ಹತ್ತಾರು ಬಂದೂಕುಗಳಿಂದ ಗುಂಡು ಹಾರಿ
ಬಂತು. ಮುಂದಿದ್ದ ದೋಣಿಯಿಂದೋಬ್ಬ ಕಾಶ್ಮೀರದ ರಾಷ್ಟ್ರೀಯ ಗೀತೆಯನ್ನು ಹಾಡತೊಡಗಿದ. ಢಂ-ಢಂ-ತಾಳ ಮೇಳದೊಡನೆ ಆ ಗೀತ ಮಹಾ ಸಂಗೀತ ವಾಯಿತು. ಶೇಕ ಪಲ್ಲವಿ ಹಾಡಿದ; ಕಿಶನ್ ಪಲ್ಲವಿ ಹಾಡಿದ. ಎಲ್ಲರೂ ಹಾಡಿದರು. "ಸ್ವಾತಂತ್ರ್ಯ ಸಮತೆಯ ನೂತನ ಕಾಶ್ಮೀರವನ್ನು ಕಟ್ಟುವ ವೀರರು ನಾವ್! ವೀರರು ನಾವ್! ಸೋಲನರಿಯದ ಸಿಂಹಹೃದಯದ ವೀರರು ನಾವ್ ವೀರರು ನಾವ್!"
ಮತ್ತೆ ಅದೇ ಎಪ್ಪತ್ತಾರು ಕಂಠಗಳಿಂದ ರಣ ಗರ್ಜನೆ “ಇಂಕ್ವಿಲಾಬ್-
ಜಿಂದಾಬಾದ್!"
ಎಪ್ಪತ್ತಾರೂ, ಎಪ್ಪತ್ನನಾಲ್ಕೊ,ಎಪ್ಪತ್ತೆರಡೊ! ಬಲಿದಾನಕ್ಕೆ ಆರಂಬ
ವಾಗಿತ್ತು. ಆಚೆ ದಡದ ಸಿಪಾಯಿಗಳೆಲ್ಲ ಎಚ್ಚತ್ತಿದ್ದರು. ರಾಜರ ಸುಖ ಸ್ವಪ್ನ ಕಡಿದು ಹೋಯಿತು. ಬಾಹುಬಲದ ವಜ್ರಹೃದಯದ ಸ್ವಾತಂತ್ರ್ಯಯೋಧ ರೆಡೆಗೆ ಮರ್ದನದ ಶೋಷಣೆಯ ಕ್ರೂರ ಗುಂಡುಗಳು ಧಾವಿಸಿಬಂದವು.
ದೋಣಿಗಳು ಮುಂದೆ ಸಾಗುತ್ತಲೆ ಹೋದುವು. ಜಯಘೋಷ ನಡೆ
ಯುತ್ತಲೇ ಇತ್ತು. ಆ ಯುವಕ ಹಾಡುತ್ತಲೇ ಇದ್ದ. ಶೇಕ-ಕಿಶನರು ಪಲ್ಲವಿಗೆ ದನಿ ಕೂಡಿಸುತ್ತಲೆ ಇದ್ದರು.
ಒಂದು ದೋಣಿಗೆ ಗುಂಡು ತಗಲಿ ತೂತು ಬಿದ್ದು ಜನ ನೀರುಪಾಲಾ
ದರು. ಸರೋವರಕ್ಕೆ ಬಿದ್ದ ಜನ ಈಸಾಡಿದರು. ಇನ್ನೊಂದು ದೋಣಿ ದಡದ ತೀರಕ್ಕೆ ಬಂತು. ಆ ಇರುಳಲ್ಲಿ ಬಯನೆಟುಗಳು ಬೇಟೆ ಸಿಗದೆ ಒಂದಕ್ಕೊಂದು ತಗಲಿದುವು.
ದೋಣಿಗಳಲ್ಲಿದ್ದ ಜನ ನೋಡುತ್ತಲೇ ಇದ್ದರು. ವಿದ್ಯುದ್ದೀಪದ