ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ನ್ಯಾಯಮೂರ್ತಿ ಒಸೈರಿಸೆನಲ್ಲ, ಆಮೆರಬ್. ನಾನು ವಿದೇಶೀಯನಲ್ಲ-ಇದೇ ಮಣ್ಣಿನ ಸಂತಾನ')ಪೆರೋ ಒಬ್ಬನ ಶಿರಚ್ಛೀದನ ಮಾಡುತ್ತಿದ್ದಾನೆ. ನಡು ಹಗಲಿನಲ್ಲಿ ಈ ಬಣ್ಣಗಳು ಜೀವ ತಳೆದಿವೆ. ಕರಗಿ ಹರಿಯುವಂತೆ ಕಾಣುತ್ತಿದೆ ಯಲ್ಲ ಆ ಕೆಂಪು ? ಇಷ್ಟಿದ್ದರೂ ಈ ನ್ಯಾಯಸ್ಥಾನವೀಗ ಬರಿಯ ಪೀಠಗಳ, ನೆಲಹಾಸುಗಳ, ಪರದೆಯ ಸಭಾಭವನ.

  ಊಟ ಮುಗಿಸಿ ಬಂದ ಒಬ್ಬ ಕಾವಲುಭಟನೆಂದ :
  "ದಳಪತಿಗೆ ಭಯ. ಪ್ರಾಕಾರ ದ್ವಾರಗಳನ್ನೆಲ್ಲ ಈಗಲೇ ಮುಚ್ಚಿಸಿಬಿಟ್ರು. ಮಹಾದ್ವಾರಕ್ಕೆ ವಿಶೇಷ ಕಾವಲು ಹಾಕಿದ್ದಾರೆ!”
  ಇನ್ನೊಬ್ಬ ಪಿಸುದನಿಯಲ್ಲಿ ಅಂದ:
  "ಇವರು ತಪ್ಪಿಸ್ಕೊಂಡು ಹೋಗ್ಬೌದು ಅಂತಲಾ?"
  “ ಹೂಂ..”
  ಒಂದು ಮಗ್ಗುಲು ಬಾಗಿಲು ತುಸು ತೆರೆದುಕೊಂಡಿತು. ಅರಮನೆಯ ಪರಿಚಾರಿಕೆ ಶೀಬಾ ಒಳಬಂದಳು. ('ಪರಿಚಿತ ಮುಖ.')
  “ ಏನಕ್ಕ?” ಎಂದು ಕೇಳಿದ ಅವಳ ಪರಿಚಯವಿದ್ದ ఒಬ್ಬ ಯೋಧ.
  ಅವಳು ಮಂದಹಾಸ ಬೀರಿದಳು.
  " ನಿಮ್ಮದೆಲ್ಲ ಊಟ ಆಯ್ತಾ?"
  "ಓಹೋ."
  ಹತ್ತಿರ ಬಂದು ಮೆಲ್ಲನೆ ಕೇಳಿದಳು :
  "ಇವರಿಗೇನಾದರೂ ಕೊಟ್ಟರಾ?"
  ಆ ಯೋಚನೆ ಒಬ್ಬಿಬ್ಬರಿಗೆ ಬಂದಿತ್ತು. ಆದರೆ ? ಆದರೆ? ಒಬ್ಬ ನುಡಿದ :
  "ಹ್ಯಾಗಕ್ಕ ಕೊಡೋದು ?"
  "ಹೀಗೆ," ಎಂದಳು ಶೀಬಾ, ತನ್ನ ನಡುವಸ್ತ್ರ ಮಡಚಿದ್ದಲ್ಲಿಂದ ಬಾಡಿದ ಹಸುರು ಪೆವೈರಸ್ ಎಲೆಗಳಲ್ಲಿ ಸುತ್ತಿದ್ದೊಂದು ಸುರುಳಿಯನ್ನು ಹೊರತೆಗೆದು. "ಒಂದೇ ರೊಟ್ಟ,ತಿಂದ್ಬಿಡಿ ಅಣ್ಣ. ನನ್ನ ಗುರುತು ಸಿಗಲಿಲ್ಲವಾ, ನಾನು ಮಹಾತಾಯಿ, ಅಣ್ಣ,” ಎಂದು ಹೇಳಿ, “ ಆ ಮೇಲೆ ಆಎಲೆಗಳನ್ನು ಹೊರಕ್ಕೆ ಎಸೆದ್ಬಿಡು," ಎಂದೊಬ್ಬ ಯೋಧನಿಗೆ ನಿದ್ರೇಶವಿತ್ತು, ಅವಳು ಹೊರಟು