ಈ ಪುಟವನ್ನು ಪ್ರಕಟಿಸಲಾಗಿದೆ
೧೮ | ನಾವೂ ಮನುಷ್ಯರು!
ಚೂರು ಸಾ ಇಲ್ಲ, ಕಿಟು ತಂದ ಕಟ್ಟಿಗೆ ಚೂರಿಂದ ಬೆ೦ಕಿಯಾಗಬೇಕು;ಗ೦ಜಿ ಬೇಯಬೇಕು. ರಾಮಣ್ಣ : ಹೌದೊ ರುಕ್ಕು,ಪೊರ್ಬುಗಳು ನಿನ್ನನ್ನು ಕೇಳಿ ಬಂದದ್ದು. ಬಾಯಿಯವರಿಗೆ - ರುಕ್ಕು :ಗೊತ್ತು೦ಟು,ಗೊತ್ತು೦ಟು.ನೀವಿಬ್ಬರೂ ಇಲ್ಲಿರುವಾಗ, ಕಟ್ಟಿಗೆಗೆ ಹೋದ ನಾನು ಬಾಯಿಯವರನ್ನು ಕಂಡಿದ್ದೆ. ರಾಮಣ್ಣ : ಹಾ೦. ನೋಡಿ, ನನಗೆ ಗೊತ್ತಿತ್ತು....ಆದರೆ ಕಟ್ಟಿಗೆ ಕೇಳಾಲಿಲ್ಲವಷ್ಟೆ ಅಲ್ಲಿ? ಲಸ್ರಾಜೋ:(ಹಲ್ಲು ಗಳನೆಲ್ಲ ತೋರಿಸುತ್ತ) ಕಟ್ಟಿಗೆ ಅಲ್ಲಿ ಇದ್ದ ರಲ್ಲವೊ? (ಎಲ್ಲರೂ ನಗುವರು) ರುಕ್ಕು : ನಾನು ಗಂಜಿ ಕುಡಿದು ರಾತ್ರೆಯೇ ಬರ್ರೇನೆ ಪೊರ್ಬುಗಳೆ- . (ಲಸ್ರಾದೋ ಹೊರಡುವನು. ರುಕ್ಕು ಒಳಹೋಗುವಳು... ರಾಮಣ್ಣ ಎದ್ದುನಿ೦ತು, ಕುಂಟುತ್ತ ಬೀಲಳ್ಕೊಡಲು ಹೊರಬಾಗಿಲವರೆಗೆ ಬರುವನು.....) ರಾಮಣ್ಣ : ನೋಡಿ. ಇಲ್ಲವಾದ್ರೆ ಅವರಿಗೇನು ಕಡಿಮೆಯೋ?ಇ೦ಗ್ಲೀಷು ಗೊತ್ತು೦ಟು,ಎಲ್ಲ ಉ೦ಟು.ಬಿ.ಎ. ಕಲ್ತವರಿಗೆ ಒ೦ದು ಮೂವತ್ತು ರೂಪಾಯಿ ಕೆಲಸ ಎಲ್ಲಿಯೂ ಸಿಕ್ಕ ಲಿಕ್ಕಿಲ್ಲವೊ? ಈ ಯೂನಿಯನ್ ಗೀನಿಯನ್ ಯಾಕೆ ನಮ್ಮ ಕಾರ್ಯದರ್ಶಿಗೆ? ಲಸ್ರಾದೋ : ಹೌದು,ಹೌದು, ರಾಮಣ್ಣ : ಹಾ೦ - ಅದೇ, ಕಾಲ ಬದಲಾಗಿದೆ...ನಮ್ಮ ಜನಕ್ಕೆ ಸಹಾಯ ಉ೦ಟು;ನಮ್ಮ ಜನ ಎದ್ದಿದ್ದಾರೆ.