ಈ ಪುಟವನ್ನು ಪ್ರಕಟಿಸಲಾಗಿದೆ
ಲಸ್ರಾದೋ:
ಹೌದು ಕಾಲ ಬದಲಾಗಿದೆ.
ರಾಮಣ್ಣ:
ನೋಡಿ - ಓಡಿನ ನಾನು, ಮಗ್ಗದ ನೀವು, ಬೀಡಿಯ
ಆದಂ ಸಾಹೇಬ್ರು - ನಾವೆಲ್ಲ ಒಂದೇ ಅಲ್ವೋ- ಒಂದೇ
ಗುರಿ ಅಲ್ವೋ? ನಾವೆಲ್ಲ ಕೇಳೋದೂ ಒ೦ದೇ. ಹೆಚ್ಚು
ಕೂಲಿ, ತುಟ್ಟಿಭತ್ತೆ, ಬೋನಸು, ನಮ್ಮ ರಾಜ್ಯ.
ಅಲ್ವೋ?ಹೌದೂ, ಅಲ್ವೋ?
ಲಸ್ರಾದೋ:
ಹೌದು,ನಾವೆಲ್ರೂ ಕೇಳೂವುದು ಒ೦ದೇ.
(ರ೦ಗದ ಖಕ್ಕಕ್ಕೆ ತಲಪಿದ ಮೇಲೆ,ಲಸ್ರಾದೋ ಟೊಪ್ಪಿ ತೆಗೆದು
"ಬರ್ತೇನೆ" ಎ೦ದು ನುಡಿದು,ಪುನಃ ಟೊಫ್ಫಿ ಇಡುವನು.
ರಮಣ್ಣ "ಹೋಗಿಬನ್ನಿ" ಎನ್ನುವನು.
ಕಿಟ್ಟು ತಿಟ್ಟಿಯ ಮೇಲಿದ್ದ ಹೊದಿಕೆಯನ್ನು ತ೦ದು ತ೦ದೆಗೆ
ಹೊದಿಸುನವನು.)
ಕಿಟ್ಟು:
ಅಪ್ಪಾ!ಛಳಿ ಉ೦ಟಪ್ಪಾ.......
ರುಕ್ಕು:
(ಒಳಗಿ೦ದ)
ಆ ಕತ್ತಲೆಯಲ್ಲಿ ಯಾಕೆ ಈಚೆಗೆ ಬರಬಾರದೆ? ಬೆಳಕು
ಮಾಡಿದ್ದೇನೆ.
(ಮುಂದೆ ನಡೆಯುತ್ತ ಕರೆದೊಯುವನು)
ಹೌದಪ್ಪಾ, ಇಲ್ಲಿ ಕತ್ತಲೆ....ಆಚೆ ಬೆಳಕಿದೆ.....ಮು೦ದೆ
ಹೋಗುವ.