ಈ ಪುಟವನ್ನು ಪ್ರಕಟಿಸಲಾಗಿದೆ

98

ಸೇತುವೆ

ಅಲ್ಲಿ ಕಾಮಾಕ್ಷಿ, ಕಮಲಮ್ಮ, ಪದ್ಮಾವತಿ, ಉಪಾಧ್ಯಾಯರ ಹೆಂಡತಿ, ಆಕೆಯ
ನಾದಿನಿ ಸುಮಂಗಳಾ, ಪೋಲೀಸರಾಯನ ಧರ್ಮಪತ್ನಿ ನಿಂತಿದ್ದರು. ಮೀನಾಕ್ಷಮ್ಮ
ತನ್ನ ಮನೆ ಬಾಗಿಲಲ್ಲಿ, ಅಹಲ್ಯೆಯ ತಾಯಿಯೊಡನೆಯೂ ಪದ್ಮನಾಭಯ್ಯನ ಹೆಂಡತಿ
ಯೊಡನೆಯೂ ನಿಂತಿದ್ದಳು. ರಂಗಮ್ಮನವರ ಪಕ್ಕದ ಮನೆಯಲ್ಲಿದ್ದ ಓದುವ ಹುಡು
ಗರ ತಾಯಿ ಬಂದಿರಲಿಲ್ಲ. ಮಹಡಿ ಮೇಲಿನವರೂ ಬಂದಿರಲಿಲ್ಲ.
"ರಾಧಾ ಬಂದೇ ಇಲ್ಲ! ರಾಧಾನ್ನ ಕರಕೊಂಬರ್ತೀನ್ರಿ!"
___ ಎನ್ನುತ್ತ ಅಹಲ್ಯಾ ಗಡಬಡಿಸಿ ಎದು ಹೊರಕ್ಕೆ ಹಾರಿದಳು.
ಆವರೆಗೂ ರಂಗಮ್ಮನ ವಠಾರದಲ್ಲಿ ಸ್ವಲ್ಪಮಟ್ಟಿಗೆ ಚೆನ್ನಾಗಿ ದೇವರ ನಾಮ
ಹಾಡುತ್ತಿದ್ದವಳು ಕಮಲಮ್ಮ ಒಬ್ಬಳೇ.. ತನ್ನನ್ನು ಸುಲಭವಾಗಿ ಹಾಡುಗಾರಿಕೆಯಲ್ಲಿ
ಮೀರಿಸುವಂತಿದ್ದ ಚಂಪಾವತಿಯನ್ನು ಕಂಡು ಆಕೆಗೆ ಒಂದು ತರಹೆಯಾಯಿತು. ಆದರೂ
ಮನಸ್ಸಿನ ಭಾವನೆಗಳನ್ನು ಹೊರಗೆ ತೋರಿಸದೆಯೇ ಆಕೆ ಅಂದಳು;
"ಇನ್ನೊಂದು ಹಾಡು ಹೇಳ್ರೀ...ಇಷ್ಟು ದಿನ ಮುಚ್ಚಿಟ್ಟುಕೊಂಡಿದ್ದಿ
ರರ್ಲಿ!......."
ನಡುಗೋಲಿನ ಟಕ್ ಟಕ್ ಸದ್ದು ರಂಗಮ್ಮ ಬಂದರೆಂದು ಮುನ್ಸೂಚನೆ
ಕೊಟ್ಟಿತು, ರಂಗಮ್ಮ ಬಂದರು, ಆಕೆಯನ್ನು ಹಿಂಬಾಲಿಸಿ ರಾಜಮ್ಮ, ಆಹಲ್ಯೆ-ರಾಧೆ
ಯರು ಗುಂಪನ್ನು ತೂರಿಕೊಂಡು ಒಳಬಂದರು. ನಾರಾಯಣಿ ಸತ್ತ ದಿನ ಹಾಗೆ
ಹೆಂಗಸರು ಆ ಕೊನೆಯ ಮನೆಯ ಮುಂದೆ ಗುಂಪು ಕೂಡಿದ್ದರು. ಆ ಬಳಿಕ ಈಗ.
ಸ್ವಲ್ಪ ಹೊಸ ರೀತಿಯದಾಗಿದ್ದ ಶಂಕರನಾರಾಯಣಯ್ಯನ ಸಂಸಾರವನ್ನು
ಕಂಡು, 'ವಠಾರ ಅಂದ್ಮಲೆ ಎಲ್ಲಾ ತರಹ ಜನರೂ ಇದ್ದೇ ಇರ್ತಾರೆ' ಎಂದು ಸಮಾ
ಧಾನ ಪಟ್ಟಿದ್ದ ರಂಗಮ್ಮ ರಂಗಮ್ಮ ಹಾಡು ಕೇಳಿ ಚಕಿತರಾಗಿದ್ದರು. ರಂಗಮ್ಮನಿಗೆ ತಿಳಿಯದೆಯೇ
ಅವರ ವಠಾರದೊಳಗಿಂದ ಕೇಳಿಸಿದ ಹಾಡು!
ಅದು ಯಾರ ಕಂಠ ಎಂದು ತಿಳಿದಿದ್ದರೂ ಯಾರದು? ಎಂದು ಕೇಳುವ ಅಧಿ
ಕಾರವನ್ನು ಉಪಯೋಗಿಸುತ್ತಾ ರಂಗಮ್ಮ ಕೇಳಿದರು:
"ಯಾರೇ ಅದು ಹಾಡಿದ್ದು ?”
"ಹೊಸ ಬಿಡಾರದವರು ಕಣ್ರೀ" ಎಂದು ಎರಡು ಮೂರು ಸ್ವರಗಳು
ಹೇಳಿದುವು.
"ಯಾರು ಚಂಪಾವತೀನೆ?" ಎಂದು ರಂಗಮ್ಮ , ತಮ್ಮ ಸ್ವರವನ್ನು ಆದಷ್ಟು
ಇಂಪಾಗಿಡಲು ಯತ್ನಿಸುತ್ತ ಅಂದರು. ಅದಕ್ಕೇನೂ ಪ್ರತ್ಯುತ್ತರ ಬೇಕಾಗಿರಲಿಲ್ಲ.
ಕಮಲಮ್ಮನ ಹೊರತಾಗಿ ಬಾಗಿಲಲ್ಲಿ ನಿಂತಿದ್ದ ಇತರ ಹೆಂಗಸರೆಲ್ಲ ಒಳಗೆ ಬಂದು
ಚಾಪೆಯ ಮೇಲೂ ನೆಲದ ಮೇಲೂ ಕುಳಿತರು.
"ಒಳಗ್ಬನ್ನಿ ರಂಗಮ್ನೋರೆ," ಎಂದು ಕಾಮಾಕ್ಷಿ ಕರೆದಳು.
ರಂಗಮ್ಮ ಬಾಗಿಲಲ್ಲೇ ನಿಂತರು. ಚಿತ್ರ ಬರೆಯುವವನ ಹೆಂಡತಿ. ಏನಿದ್ದರೂ