ಈ ಪುಟವನ್ನು ಪ್ರಕಟಿಸಲಾಗಿದೆ

116

ಸೇತುವೆ

ಊಟ ಮುಗಿಸಿ ಸರಸ ಸಲ್ಲಾಪಗಳು ನಡೆದು ಅವರು ನಿದ್ದೆ ಹೋದರು.
...ಎದುರು ಸಾಲಿನ ಮನೆಗಳಲ್ಲಿ ಯಾರಿಗೂ ಎಚ್ಚರವಿರಲಿಲ್ಲ.
...ಮೂಲ ಕಟ್ಟಡದ ಮೇಲು ಮನೆಗಳಲ್ಲಿ ಓದುವ ಹುಡುಗರೂ ಜಯರಾಮು
ಮನೆಯವರೂ ನಿದ್ದೆ ಹೋಗಿದ್ದರು.ಚಂದ್ರಶೇಖರಯ್ಯ ಮಾತ್ರ ಸೆಖೆ ತಡೆಯಲಾರದೆ,
ಪಾಯಿಜಾಮ_ಬನೀನುಗಳನ್ನಷ್ಟೇ ತೊಟ್ಟು,ಹೊರಗೆ ಮಹಡಿಯ ಮೆಟ್ಟಲ ಮೇಲೆ,
ಒಂದಾದ ಮೇಲೋಂದು ಸಿಗರೇಟು ಸೇದುತ್ತ ಕುಳಿತಿದ್ದ. ಸರಪಳಿ ಸಿಗರೇಟುಗಳನ್ನು
ಸುಡುತ್ತಾ ಹಾಗೆ ಕುಳಿತಿದ್ದರೆ, ತಾನು ತುಂಬಾ ಯೋಚನೆಗಳಿಗೇನೂ ಕೊರತೆ ಇರ
ಲಿಲ್ಲ...ಮುಂದಿನ ತಿಂಗಳಲ್ಲಿ ತನಗೆ ದೊರೆಯಬಹುದಾದ ಕಮಿಷನು. ತನ್ನೊಡನೆ
ಸ್ಪರ್ಧಿಸುತ್ತಿದ್ದ ಬೇರೆ ಕಂಪೆನಿಯ ಪ್ರತಿನಿಧಿಗಳು, ತಾನು ದೂರದಿಂದಲೆ ಕಂಡು ಬರಿದೆ
ಬಯಸಿದ್ದ ಇಬ್ಬರು ಮೂವರು ಹುಡುಗಿಯರು..ಕೆಟ್ಟ ಬೇಸಗೆ, ಬೆವರು. ಗಾಳಿಯೇ
ಇಲ್ಲ...ನಿದ್ದೆ ಬರುವುದು ಕಷ್ಟವಾಗಿತ್ತು. ಬಲು ಕಷ್ಟವಾಗಿತ್ತು.
ಕೆಳಗೆ ಉಪಾಧ್ಯಾಯರು ಹೆಂಡತಿ ಮಕ್ಕಳೊಡನೆ ಮಲಗಿದ್ದರು. ಅವರ ತಂಗಿ
ಸುಮಂಗಳೆಗೆ ಮಾತ್ರ ನಿದ್ದೆ ಬಂದಿರಲ್ಲಿಲ. ಜಗಳಾಡಿ ಗಂಡನ ಮನೆಯಂದ ಬಂದಿದ್ದ
ಹುಡುಗಿ. ಭಿನ್ನಾಭಿಪ್ರಾಯಗಳ ಕಾವೆಲ್ಲ ದೀರ್ಘ ಕಾಲದ ವಿರಹದಿಂದ ತಣ್ಣಗಾಗಿತ್ತು.
ಮತ್ತೊಮ್ಮೆ ಗಂಡನ ಸಾವೂಪ್ಯವನ್ನು ಆಕೆ ಬಯಸುತ್ತಿದ್ದಳು. ಆ ಗಂಡ ಅನಾಗರಿಕ
ನಂತೆ ತುಂಬಾ ಒರಟಾಗಿ ವರ್ತಿಸುತ್ತಿದ್ದ ನಿಜ. ಆದರೆ ಆ ಒರಟುತನವೇ ಸುಖ
ಎನ್ನುತ್ತಿತ್ತು ಆಕೆಯ ದೇಹ. ದೇಹದ ಜತೆಯಲ್ಲಿ ಮನಸ್ಸೂ ಸೋಲನ್ನೋಪ್ಪಿ
ಕೊಂಡಿತ್ತು.ಗಂಡನ ಮನೆಯವರಂತೂ ಬಿಗಿಯಾಗಿದ್ದರು. ಅಂದ ಮೇಲೆ ತಾನೊ
ಬ್ಬಳೇ ಹೋಗುವಂತಿರಲಿಲ್ಲ. ಅಣ್ಣ ಕರೆದುಕೊಂಡು ಹೋಗಬೇಕು; ಗಂಡನ ವನೆ
ಯನ್ನು ಹೊಕ್ಕು ಅಲ್ಲಿ ಸಂಧಾನ ನಡೆಸಬೇಕು. ಅದು ಬೇಸಗೆಯ ರಜದಲ್ಲಿ ಮಾತ್ರ
ಸಾಧ್ಯ.
ಆ ದಿನಗಳು ದೂರವಿರಲಿಲ್ಲ. ಆದರಿ ರಜೆಯ ಆರಂಭ ಸಮಿಪಿಸಿದಂತೆ,
ಹಗಲು ರಾತ್ರೆಗಳೆಲ್ಲ ಹೆಚ್ಚು ದೀರ್ಘವಾದಂತೆ ಸುಮಂಗಳೆಗೆ ತೋರಿತು.
...ಪಕ್ಕದ ಮನೆಯಲ್ಲಿ ಇಬ್ಬರು ಹುಡುಗರೂ ಶುಭ್ರವಾಗಿ ಬೆಳಕು ಕೊಡುತ್ತಿದ್ದ
ಕಂದೀಲು ಉರಿಸಿ, ಕೆಲವೇ ದಿನಗಳಲ್ಲಿ ಶುರುವಾಗಲಿದ್ದ ಪರೀಕ್ಷೆಗಾಗಿ ಸಿದ್ಧತೆ
ನಡೆಸಿದ್ದರು.
ಆ ಮನೆಯ ಎದುರು ಕಡೆಯಲ್ಲಿ ರಾಜಮ್ಮ ತನ್ನ ಮಕ್ಕಳೊಡನೆ ನಿದ್ದೆ
ಹೋಗಿದ್ದಳು.
ಅವರ ಬಲಭಾಗದಲ್ಲೆ ಮೊದಲ ಮನೆ ರಂಗಸ್ವಾಮಿಯದು. ಆತನ ಹೆಂಡತಿ
ಮಕ್ಕಳಿಗೆ ಉಣಬಡಿಸಿ ಮಲಗಿಸಿದಳು. ತಾನು ಮುಟ್ಟಲಿಲ್ಲ. ಹಾಗೆಯೇ ಚಾಪೆಯ
ಮೇಲೆ ಭಾವಣಿ ನೋಡುತ್ತ ಮಲಗಿಕೊಂಡಳು.