ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

117

ಏಟು ತಿಂದು ಮೈ ಕೈ ನೋವಿನಿಂದ ಮಗ್ಗುಲು ಹೊರಳುವುದೂ ಕಷ್ಟ ಸಾಧ್ಯ
ವಾಗಿತ್ತು. ಕಣ್ಣುಗಳು ಉರಿಯುತ್ತಿದ್ದುವು. ಉಸಿರು ಬಿಸಿಯಾಗಿತ್ತು.
"ಹೀಗಾಯಿತಲ್ಲಾ ನನ್ನ ಗತಿ," ಎಂದು ಮನಸ್ಸಿನಲ್ಲೆ ಗೋಳಾಡುತ್ತ ಆಕೆ
ಹೊತ್ತು ಕಳೆದಳು.

೧೨


ಪರೀಕ್ಷೆ ಮುಗಿದು ಮಹಡಿಯ ಮೇಲಿನ ಹುಡುಗರು ಕೊಠಡಿ ತೆರವು ಮಾಡಿ
ಊರಿಗೆ ಹೋದರು. ಕೆಳಗಿನ ಮನೆಯ ತಾಯಿ ಮುಂದೆಯೂ ಮನೆ ತನಗೆ ಬೇಕೆಂದು
ಹೇಳಿ,ಬೀಗ ತಗಲಿಸಿ, ಮಕ್ಕಳೊಡನೆ ಊರಿಗೆ ತೆರಳಿದಳು.
ರಂಗಮ್ಮ, 'ಮನೆ ಬಾಡಿಗೆಗೆ ಇದೆ' ಬೋರ್ಡನ್ನು ಹೊರಕ್ಕೆ ತೆಗೆದರು. ಸೊಗ
ಸಾದೊಂದು ಬೋರ್ಡು ಬರೆದುಕೊಡುವೆನೆಂದು ಶಂಕರನಾರಾಯಣಯ್ಯ ಹಿಂದೆ ಹೇಳಿ
ದ್ಧನ್ನು ಅವರು ಮರೆತಿರಲಿಲ್ಲ. ಅವಕಾಶ ಒದಗಿದಾಗ ಆ ವಿಷಯ ಪ್ರಸ್ತಾಪಿಸಿದರಾಯಿ
ತೆಂದು ಅವರು ಅವರೆಗೂ ಸುಮ್ಮನಿದ್ದರು.
ಶಂಕರನಾರಾಯಣಯ್ಯನಿನ್ನೂ ಮನೆಯಲ್ಲೇ ಎದ್ದ. ಬೆಳಗಿನ ಹೊತ್ತು.
ರಂಗಮ್ಮ ರಟ್ಟಿನ ಬೋರ್ಡಿನೊಡನೆ ಅಲ್ಲಿಗೆ ಬಂದರು.
"ಏನಪ್ಪಾ, ಇದ್ದೀರಾ?"
"ಬನ್ನಿ ರಂಗಮ್ನೋರೆ,"
ರಂಗಮ್ಮನವರ ಕೈಲಿದ್ದುದನ್ನು ನೋಡಿ ಅವರು ಬಂದುದರ ಉದ್ದೇಶ ಶಂಕರ
ನಾರಾಯಣಯ್ಯನಿಗೆ ಅರ್ಥವಾಯಿತು.
"ಆ ದಿವಸ ಅದೇನೊ ಬರ್ಕೊಡ್ತೀನೀಂತ ಹೇಳಿದ್ರಿ."
"ಹೌದಲ್ಲ, ಮರ್ತೇಹೋಗಿತ್ತು. ಇಲ್ಕೊಡಿ. ಬರಕೊಡ್ತೀನಿ."
"ಮನೆ ಖಾಲಿಯಾಗ್ಬಿಟ್ಟಿದೆ. ಸದ್ಯಃ ಇದನ್ನೇ ತೂಗಹಾಕ್ತೀನಿ. ಬೇಗ್ನೆ ಬೇರೆ
ಬರ್ಕೊಟ್ಬಿಡಿ."
"ಖಾಲಿಯಾಯ್ತೇನು_ಯಾವುದು?"
"ಅದೇ ಮೇಲ್ಗಡೇದು, ಹುಡುಗರು ಓದ್ತಾ ಇರ್ಲಿಲ್ವೆ?"
"ಓ ಅದಾ?"
"ಯಾವಾಗ ಬರೀತೀರಪ್ಪಾ?"
"ನಾಳೇನೇ."

ರಂಗಮ್ಮ ಹೊರಹೋಗಿ, ಸದ್ಯಕ್ಕೆ ಅದೇ ಇರಲೆಂದು,ಹಳೆಯ ಬೋರ್ಡನ್ನೇ