ಈ ಪುಟವನ್ನು ಪ್ರಕಟಿಸಲಾಗಿದೆ

118

ಸೇತುವೆ

ತೂಗ ಹಾಕಿದರು. ಬೋರ್ಡು ನೋಡಿದೊಡನೆಯೇ ಯಾರಾದರೂ ಈ ಸಲ ಬರ
ಬಹುದೆಂದು ರಂಗಮ್ಮ ನಂಬಿರಲಿಲ್ಲ. ಯಾಕೆಂದರೆ ಬಾಡಿಗೆಗಿದ್ದುದು ಅನುಕೂಲಗಳಿದ್ದ
ಮನೆಯಲ್ಲ, ಬರಿಯ ಕೊಠಡಿ ಮನೆ . ಮುಂದೆ ಶಾಲೆಗಳು ಆರಂಭವಾಗಿ ಬೇರೆ
ಹುಡುಗರು ಬರುವವರೆಗೂ ಹಾಗೆಯೇ ತೆರವಾಗಿ ಉಳಿದರೂ ಉಳಿಯೆತೇ.
"ರಜಾ ತಗೋಂಡು ಇಲ್ಲೇ ಇದ್ಬಿಟು ಬೋಡು ಬರಕೋಡೀಂದ್ರೆ,"
___ಚಂಪಾ ಗಂಡನಿಗೆ ಹೇಳಿದಳು .
"ಹೂಂ, ಹೌದು. ಬೇರೇನೂ ಕೆಲಸ ಇಲ್ಲ ನಂಗೆ,"ಎಂದು ಆತ ನಟನೆಯ
ಸಿಡುಕನ್ನು ತೋರಿದ.
ಆದರೆ ಆ ಸಂಜೆ ಮನೆಗೆ ಬಂದಾಗ, ಕರಿಯ ಬಣ್ಣ ಬಳಿದಿದ್ದ ಒಂದು ಡಬ್ಬದ
ತುಂಡನ್ನೂ ನುಣುಪಾಗಿದ್ದೊಂದು ಪುಟ್ಟ ಹಲಿಗೆಯನ್ನೂ ಮನೆಗೆ ತಂದ.
"ಚಿಕ್ಕದು ಯಾರಿಗೆ?"
ಎಂದು ಚಂಪಾವತಿ ಕಳಿದಳು .
"ಆ ಚಂದ್ರಶೆಖರಯ್ಯನಿಗೆ ಹೆಸರು ಬರ್ಕೊಡ್ತೀನೀಂತ ಹೇಳಿದ್ದೆ."
"ಅದೂ ಬಿಟ್ಟೀನೊ?"
"ಇದು ಲಂಚ. ವಿಮೆಯ ವಿಷಯ ನನ್ನ ಹತ್ತಿರ ಯಾವತ್ತೂ ಪ್ರಸ್ತಾಪ
ಮಾಡೋದಿಲ್ಲಾಂತ ಆತ ಮಾತು ಕೊಟ್ಟದ್ದಕ್ಕೆ!"
"ಸರಿ! ಸರಿ!"
ಮರುದಿನ ಬೆಳಗ್ಗೆ ಬ್ರಷ್ ಎಣ್ಣೆ- ಬಣ್ಣಗಳು ಉಪಯೋಗಕ್ಕೆ ಸಿದ್ಧವಾದುವು.
ಶಂಕರನಾರಾಯಣಯ್ಯ ಕರಿಯ ಡಬ್ಬದ ಮೇಲೆ ಬರೆದ:
ಮನೆ ಬಾಡಿಗೆಗೆ ಇದೆ
ರಂಗಮ್ಮ ಬಂದು ನೋಡಿಕೊಂಡು ಹೋದರು.
"ಇನ್ನೂ ಒಣಗ್ಬೇಕು. ನಾಳೆ ತಗೊಂಡು ಹೋಗಿ", ಇಂದು 'ಪೇಂಟರ್'
ಶಂಕರನಾರಾಯಣಯ್ಯ ಹೇಳಿದ.
ಆತ ಅಷ್ಟು ಬರೆದಿಟ್ಟುದನ್ನು ಆ ದಿನವೆಲ್ಲ ವಠಾರದ ಅವರಿವರು ಬಂದು ನೋಡು
ತ್ತಲೇ ಇದ್ದರು.
ಮರುದಿನ 'ಮನೆ ಬಾಡಿಗೆಗೆ ಇದೆ' ಎಂಬುದರೆ ಕೆಳಗೆ 'ಒಳಗಡೆ ವಿಚಾರಿಸಿ'
ಎಂದು ಸಣ್ಣ ಅಕ್ಷರದಲ್ಲಿ ಶಂಕರನಾರಾಯಣಯ್ಯ ಬರೆದ.
"ರಂಗಮ್ಮನವರು ವಿಚಾರಿಸೀಂತೆ ಬರೀಬಾರದಾಗೆತ್ತೆ?
__ಚಂಪಾವತಿ ಗಂಡನನ್ನು ಲೇವಡಿ ಮಾಲೆತ್ನಿಸುತ್ತ ಹೇಳಿದಳು.
ಆ ಸಂಜೆ ಶಂಕರನಾರಾಯಣಯ್ಯ ಮನೆಗೆ ಬಂದ ಮೇಲೆ ಹೊಸ ಬೋರ್ಡು

ವಠಾರದ ಹೊರಗಿನ ಗೋಡೆಯನ್ನು ಅಲಂಕರಿಸಿತು. ಬೆನ್ನ ಹಿಂದೆ ಇಲ್ಲವೆ ಎದೆಗೆ
ಅಡ್ಡವಾಗಿ ಕೈ ಕಟ್ಟಿ ನಿಂತಿದ್ದ ವಠಾರದ ಹುಡುಗರ ಎದುರಲ್ಲಿ ಸ್ವತ: ಶಂಕರನಾರಾ