ರಂಗಮ್ಮನ ವಠಾರ
127
ತ್ತಿತ್ತು. ಮಳೆಯಷ್ಟೇ ಬಲವಾಗಿ ಸುರಿದಾಗ ಮಾತ್ರ ಆ ಮನೆಗಳು ಕೆರೆಗಳಾಗುತ್ತಿ
ದ್ದುವು. ಗೋಡೆ ತೊಯ್ದು ಎಲ್ಲಿ ಉರುಳುವುದೋ ಎಂದು ಭಯವಾಗುತ್ತಿತ್ತು. ಒಲೆ
ಒದ್ದೆಯಾಗುತ್ತಿತ್ತು.
ಎಷ್ಟೋ ವರ್ಷಗಳ ಅನುಭವವಿದ್ದವರು ಈ ಸಲವೂ ಗೊಣಗುತ್ತ ಸೋರುವ
ನೀರನ್ನು ಹಿಡಿಯಲು ಎಂದಿನಂತೆ ಯತ್ನಿಸಿದರು. ಈ ವರ್ಷದ ಮಳೆಗೆ ಹೊಸತಾಗಿ
ಸೋರಿದ ಜಾಗಗಳನ್ನು ಗುರುತಿಸಿದರು.
ಪರಿಸ್ಥಿತಿ ಹೀಗಿದ್ದರೂ ವಠಾರದ ಹಳಬರೆಲ್ಲ ಬಕೀಟುಗಳನ್ನೋ ಬಾಯಿ ಅಗಲ
ವಿದ್ದ ಪಾತ್ರೆಗಳನ್ನೋ ತಂದು ಛಾವಣಿಯಿಂದ ಕೆಳಕ್ಕೆ ಹರಿಯುವ ನೀರು ಬೀಳುತ್ತಿದ್ದ
ಕಡೆ ಇಟ್ತರು.ಹಾಗೆ ಹಿಡಿದ ನೀರಿಗೆ ಅವರು ದುಡ್ದು ಕೊಡಬೇಕಾದ ಅಗತ್ಯ
ವಿರಲಿಲ್ಲ!
ಚಂಪಾ ವಠಾರದಲ್ಲಿ ಅನುಭವಿಸಿದ ಮೊದಲ ಮಳೆ ಇದು. ಸೋರುವ
ಮನೆಯನ್ನೇನೋ ಹಿಂದೆಯೂ ಆಕೆ ಕಂಡಿದ್ದಳು.ಆದರೆ ರಂಗಮ್ಮನ ವಠಾರದ ಮನೆ
ಹಿಂದಿನ ದಾಖಲೆಗಳನ್ನೆಲ್ಲ ಮೀರಿಸುವ ಹಾಗಿತ್ತು.
ಮಗು ಅಳತೊಡಗಿತು.ಮೀಜಿನ ಮೇಲೆ ಸೋರುತ್ತಿರಲಿಲ್ಲ.ಚಂಪಾ
ಹಾಸಿಗೆ, ಬಟ್ಟೆ ಬರೆಗಳನ್ನು ಅದರ ಮೇಲಿಸಿದಳು.ಇದ್ದ ಪಾತ್ರೆಗಳನ್ನೆಲ್ಲ ಸೋರು
ತ್ತಿದ್ದ ಜಾಗಗಳಿಗೆ ಸಮನಾಗಿ ಹಂಚಿದಳು.ಹುಬ್ಬು ಗಂಟಿಕ್ಕಿ ಮಗುವನ್ನೆತ್ತಿ
ಕೊಂಡಳು.
"ಅಳಬೇಡ.ಅಳಬೇಡ್ವೆ...."ಎಂದು ಸಂತೈಸುವ ಮಾತನ್ನಾಡಿದಳು.
ಈ ಸೌಭಾಗ್ಯ ತನಗೊಬ್ಬಳಿಗೇ ಮೀಸಲಾಗಿರಲಾರದು ಎಂದು ಸಮಾಧಾನಪಟ್ಟು
ಕೊಂಡಳು.ಬಾಗಿಲ ಬಳಿ ಬಂದಾಗ,ಸ್ವಲ್ಪ ಬಾಗಿ ನೋಡಿದಾಗ,ಮಳೆಯ ನೀರು
ಹಿಡಿಯಲೆಂದು ಓಣಿ ಮನೆಗಳವರು ಬಕೀಟು,ಪಾತ್ರೆಗಳನ್ನಿಟ್ಟುದನ್ನು ಕಂಡಳು.ನಗು
ಬಂತು.ತಾನೂ ಒಂದು ಬಕೀಟು ತಂದು,ತನ್ನ ಮನೆಯ ಛಾವಣಿಯಿಂದ ಧಾರೆ
ಕಟ್ಟಿ ಸುರಿಯುತ್ತಿದ್ದ ನೀರನ್ನು ಹಿಡಿದಳು.ಮಳೆಯ ಧಾರೆಯ ಆಚೆ ಎದುರು ಮನೆ
ಬಾಗಿಲಲ್ಲಿ ಮೀನಾಕ್ಷಿ ನಿಂತಿದ್ದಳು.ಹೊಸ ಬಿಡಾರದವಳ ಅನುಭವವನ್ನು ಕಂಡು ಆಕೆಗೆ
ನಗು.ಚಂಪಾವತಿ ಸಿಟ್ಟಾಗಲಿಲ್ಲ;ತಾನು ನಕ್ಕಳು.
ಸಂಜೆಯ ಹೊತ್ತಿಗೆ ಮಳೆ ನಿಂತಿತು. ಗಂಡಸರು ಮನೆಗೆ ಬಂದು,ಹೆಂಗಸರ
ಗೊಣಗಾಟಕ್ಕೆ ಕಿವಿಕೊಟ್ಟರು.
ಆ ರಾತ್ರಿ ರಂಗಮ್ಮ ಹೊರಗೆ ಬರಲೇ ಇಲ್ಲ.ಊಟವಾಯ್ತೆ? ಅಡುಗೆ ಏನು?
ಎಂದು ಯಾರನ್ನೂ ಅವರು ವಿಚಾರಿಸಲಿಲ್ಲ.
ಆ ಬೀದಿಯುದ್ದಕ್ಕೂ ದೀಪ ಆರಿಹೋಯಿತು.ನಡುರಾತ್ರಿಯಲ್ಲಿ ಎಲ್ಲಾ
ದರೂಬಂದು ಬಿಡಬಹುದೆಂದು ರಂಗಮ್ಮ ವಿದ್ಯುತ್ ಹಿಡಿಯನ್ನು ಮೇಲಕ್ಕೆ
ತಳ್ಳಿಬಿಟ್ಟರು.