ಈ ಪುಟವನ್ನು ಪ್ರಕಟಿಸಲಾಗಿದೆ

128

ಸೇತುವೆ

ತಣ್ಣಗಿದ್ದ ನೆಲದ ಮೇಲೆ ಗಂಡಸರು ಮಕ್ಕಳಿಗಾಗಿಯೂ ತಮಗಾಗಿಯೂ ಚಾಪೆ
ಹಾಸಿಗೆಗಳನ್ನು ಹೆಂಗಸರು ಹಾಸಿದರು.
"ಸುಡುಗಾಡು ಮನೆ!" ಎಂದ ಶಂಕರನಾರಾಯಣಯ್ಯ.
"ಹಾಗನ್ಬೇಡಿ. ರಾತ್ರಿ ಹೊತ್ತು ಕೆಟ್ಟ ಮಾತು..."ತನ್ನ ಅಸಹಾಯತೆಗಾಗಿ
ನೊಂದಿದ್ದ ಗಂಡನನ್ನು ಸಂತೈಸಲೆಂದು ಚಂಪಾ ಮೃದುವಾಗಿ ಮಾತನಾಡಿದಳು.
"ಈ ವಠಾರದಲ್ಲಿ ಜಾಸ್ತಿ ದಿನ ಇರೋಕಾಗೊಲ್ಲ ಚಂಪಾ."
"ಒಳ್ಳೇ ಮನೆ ಸಿಕ್ಕಿದಾಗ ಹೋದರಾಯ್ತು."
"ಆ ಹೆಣ್ಣಿನ ಧ್ವನಿ ದೃಢವಾಗಿರಲಿಲ್ಲ. ಹೆಚ್ಚು ಬಾಡಿಗೆ ಕೊಟ್ಟು ಒಳ್ಳೆಯ ಮನೆಗೆ
ಹೋಗುವ ಶಕ್ತಿ ತಮಗಿಲ್ಲವೆಂದು ಅವರಿಬ್ಬರೂ ತಿಳಿದಿದ್ದರು.
"ನೋಡು. ಇದೇ ನಾನು ನಿನಗೆ ಕೊಡ್ತಿರೋ ಸುಖ."
"ಶ್.....ಮಾತಾಡ್ಬೇಡಿ."
ಗಂಡನ, ತನ್ನ ಮತ್ತು ಮಗುವಿನ ಮೇಲೆ ಬೆಚ್ಚಗಿನ ಹೊದಿಕೆಯನ್ನಾಕೆ ಬಿಗಿ
ಯಾಗಿ ಎಳೆದುಕೊಂಡಳು.
ಆದರೆ ನಡುರಾತ್ರಿಯ ಮೇಲೆ ಮತ್ತೆ ಮಳೆ ಬಂತು. ವಠಾರದ ಸಂಸಾರಗಳು
ಎದ್ದು ಕುಳಿತುಕೊಳ್ಳಬೇಕಾಯಿತು.
ಮರುದಿನವೆಲ್ಲ ರಂಗಮ್ಮ ತನ್ನಷ್ಟಕ್ಕೆ ಗೊಣಗುತ್ತ ಓಡಾಡಿದರು. ಅವರು
ಯರನ್ನೂ ಮಾತನಾಡಿಸಲಿಲ್ಲ. ಯಾರೂ ಅವರನ್ನು ಮಾತನಾಡಿಸಲಿಲ್ಲ.
ಮಧ್ಯಾಹ್ನದ ಬಳಿಕ ಬಿಸಿಲು ಬಂತು. ರಂಗಮ್ಮ ಮೆಲ್ಲನೆ ಹೊರಬಂದು ಹೆಂಗಸ
ರತ್ತ ನಡೆದರು; ಮೌನವನ್ನು ಮುರಿದರು.
__"...ಬಹಳ ಸೋರುತ್ತೇನಮ್ಮ?"
__"...ಅದೇನು ಸುಡುಗಾಡು ಹೆಂಚೋ."
__"...ಹೆಂಚು ಇರಿಸಿದ್ದು ಸರಿಯಾಗ್ಲಿಲ್ಲಾಂತ ಎಂಟು ವರ್ಷದ ಕೆಳಗೆ
ಮತ್ತೊಮ್ಮೆ ಎತ್ತಿ ಹಾಸಿದ್ದಾಯ್ತು."
__"ಏನಪ್ಪಾ ಮಾಡೋದು? ಒಂಟಿ ನಾನು.ಏನಾಗುತ್ತೆ ನನ್ಕೈಲಿ?"
ಹೆಂಗಸರೆಲ್ಲ ಒಂದೇ ರೀತಿಯಾಗಿ ಉದ್ದುದ್ದವಾಗಿ ಉತ್ತರ ಕೊಟ್ಟರು. ಒಂದಂ
ಗುಲ ಜಾಗವೂ ಬೆಚ್ಚಗಿರಲಿಲ್ಲ....ಒಂದು ನಿಮಿಷವೂ ರಾತ್ರೆ ಯಾರೂ ನಿದ್ದೆ ಮಾಡ
ಲಿಲ್ಲ..... ಇತ್ಯಾದಿ.
ರಂಗಮ್ಮನ ಎಡಪಕ್ಕದಲ್ಲಿದ್ದ ಮೂಲ ಕಟ್ಟಡದ ಒಂದು ಮನೆ-ಇಬ್ಬರು
ವಿದ್ಯಾರ್ಥಿಗಳೂ ಅವರ ತಾಯಿಯೂ ಇದ್ದುದು-ಸೋರುತ್ತಿರಲಿಲ್ಲ.
"ಅಲ್ಲಿಯಾದರೂ ನೀವು ಕೆಲವರು ಹೋಗಿ ಮಲಕ್ಕೋಬಹುದಾಗಿತ್ತು ಕಣ್ರಿ...
ಆದರೆ ಆಕೆ ಬೀಗ ಹಾಕ್ಕೊಂಡು ಹೋಗಿದಾಳೆ.ಏನ್ಮಾಡೋಕಾಗುತ್ತೆ?

"ರಂಗಮ್ಮ ಮಾತಿಗೆ ಹಾಗೆ ಹೇಳಿದರು ಅಷ್ಟೆ. ಮಕ್ಕಳೊಡನೆ ಆ ತಾಯಿ ಊರಿಗೆ