ಈ ಪುಟವನ್ನು ಪ್ರಕಟಿಸಲಾಗಿದೆ

16

ಸೇತುವೆ

ಮಾತ್ರ ಬೇಗನೆ ಎದ್ದು ಉಷೆಯನ್ನು ಇದಿರುಗೊಳ್ಳಲೆಂದು ವಠಾರದಿಂದ ಹೊರಬಿದ್ದು
ದೂರ, ಬಲು ದೂರ, ಸಾಗುತ್ತಿದ್ದ.
ವಠಾರದ ಹಿಂಭಾಗದ ಮನೆಯ ಸುಬ್ಬುಕೃಷ್ಣಯ್ಯ ಏಳುವುದು ಸ್ವಲ್ಪ ನಿಧಾನ
ವಾಗಿಯೇ. ಒಂಭತ್ತು ಗಂಟೆಗೆ ಸರಿಯಾಗಿ ಆತ ಶ್ರೀನಿವಾಸ ಶೆಟ್ಟರ ಅಂಗಡಿ ಬಾಗಿ
ಲಲ್ಲಿದ್ದರಾಯಿತು.
ಅದರ ಎದುರು ಭಾಗದಲ್ಲೇ ನಾರಾಯಣಿಯ ಮನೆ....
ಎಂದಿನಂತೆಯೇ ಈ ದಿನವೂ ಈ ಮುಂಜಾನೆಯೂ...
ಎಚ್ಚರವಾಗಿ ಬಹಳ ಕಾಲ ಕಂಬಳಿ ಹೊದೆದು ಕುಳಿತಿದ್ದ ರಂಗಮ್ಮ, ನಿನ್ನೆ-ಈ
ದಿನ-ನಾಳೆಗಳ ಬಗೆಗೆ ಯೋಚಿಸಿದರು. ಬಳಿಕ ಎದ್ದು ಬಾಗಿಲು ತೆರೆದರು. ಮಬ್ಬು
ಬೆಳಕಿನ ಗಾಳಿ ಅವರ ಮುದಿಮುಖಕ್ಕೆ ಮುತ್ತಿಟ್ಟಿತು...ಬೀಗದ ಕೈ ಗೊಂಚಲನ್ನೆತ್ತಿ
ಕೊಂಡು ನಡೆಗೋಲನ್ನೂ ರುತ್ತ ಅವರು ಹೊರಬಂದರು. ಅವರ ದೃಷ್ಟಿ ಓಣಿಯ
ಕೊನೆಗೆ-ನಾರಾಯಣಿಯ ಮನೆಯತ್ತ_ಹರಿಯಿತು. ಅವರು ಮೆಲ್ಲನೆ ಅಲ್ಲಿಗೆ
ನಡೆದರು. ಬಾಗಿಲಿಗೆ ಒಳಗಿನಿಂದ ಅಗಣಿ ಹಾಕಿರಲಿಲ್ಲ. ರಂಗಮ್ಮ ಬಾಗಿಲನ್ನು
ಹಿಂದಕ್ಕೆ ತಳ್ಳಿದರು. ನಾರಾಯಣಿ ಮಲಗಿದ್ದಲ್ಲಿ ತಲೆಯ ಭಾಗದಲ್ಲಿರಿಸಿದ್ದ ಹಣತೆ
ಎಣ್ಣೆ ಆರಿ ನಂದಿ ಹೋಗಿತ್ತು. ನಾಲ್ವರು ಮಕ್ಕಳನ್ನೂ ಮೂಲೆಯಲ್ಲಿ ಒಂದಾಗಿ
ಮಲಗಿಸಿ ಹೊದಿಸಿತ್ತು. ನಾರಾಯಣಿಯ ಗಂಡ ಬರಿ ಚಾಪೆಯ ಮೇಲೆ ಮಕ್ಕಳತ್ತ
ಮುಖ ತಿರುಗಿಸಿ ಮಲಗಿದ್ದ. 'ಅಯ್ಯೋ ಪಾಪ!' ಎನಿಸಿತು ರಂಗಮ್ಮನಿಗೆ. ಅವರು
ಮತ್ತೆ ಬಾಗಿಲೆಳೆದುಕೊಂಡರು.
ರಂಗಮ್ಮ ಹೊರ ಹಿತ್ತಿಲಿಗೆ ಬಂದು ಕೊಳಾಯಿಗೆ ಹಾಕಿದ್ದ ಬೀಗ ತೆಗೆದರು.
ವಠಾರದ ಎಲ್ಲರನ್ನೂ ಉದ್ದೇಶಿಸಿ ಅವರೆಂದರು:
“ಕೊಳಾಯಿ ಬೀಗ ತೆಗೆದಿದೀನಿ....ಬನ್ರೇ....”
ಒಬ್ಬೊಬ್ಬರಾಗಿ ಕೊಡವೆತ್ತಿಕೊಂಡು ಎಲ್ಲರೂ ಬಂದರು-ಮೀನಾಕ್ಷಮ್ಮ,
ಪದ್ಮಾವತಿ, ಕಮಲಮ್ಮ, ಕಾಮಾಕ್ಷಿ, ರಾಜಮ್ಮ, ರಾಧಾ...ಎಲ್ಲರೂ.
ನಾರಾಯಣಿಯಂತೂ ಕಾಹಿಲೆ ಮಲಗಿದ ಮೇಲೆ ನೀರಿಗೆ ಬಂದೇ ಇರಲಿಲ್ಲ. ಆಕೆ
ಬರದೇ ಇದ್ದುದರಿಂದ ಏನೋ ಕೊರತೆಯಾದಂತೆ ಯಾರಿಗೂ ಅನಿಸಲಿಲ್ಲ.
ಎಂದಿನಂತೆಯೇ ಮತ್ತೊಂದು ದಿನ ಯಾವ ಬದಲಾವಣೆಯೂ ಇಲ್ಲದೆ ತಮ್ಮ
ವಠಾರದಲ್ಲಿ ಆರಂಭವಾಯಿತೆಂದು ರಂಗಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟರು.