ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

17



ನಾರಾಯಣಿಯ ಗಂಡ ಎಲ್ಲಿಂದಲೋ ಸಾಲ ಪಡೆದು ಒಂದಿಷ್ಟು ಅಕ್ಕಿ ತಂದು
ಗಂಜಿ ಬೇಯಿಸಿದ. ಮಾರಲೆಂದು ಸಿದ್ಧಪಡಿಸುತ್ತಿದ್ದುದರಲ್ಲಿ ಸ್ವಲ್ಪ ತಿಂಡಿ ಉಳಿಸಿ


ಕೊಂಡು ಕಮಲಮ್ಮ ಎಳೆಯ ಮಕ್ಕಳಿಗೆ ಕೊಟ್ಟಳು. ದೊಡ್ದ ಹುಡುಗ ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಚಿಕ್ಕವರನ್ನು ನೋಡಿಕೊಂಡ. ಕಾಮಾಕ್ಷಿ ಕೊನೆಯ ಕೂಸಿಗೆ ಹಸುವಿನ ಹಾಲು ಕುಡಿಸಿದಳು.

ಸಾವಿನ ಮನೆಗೆ ಸಂಕೀತವಾಗಿದ್ದ ಹಣತೆ, ಆಗಾಗ್ಗೆ ಎಣ್ಣೆ ಇಲ್ಲದೆ ಆರಿದರೂ,

ಒಂದು ಎರಡು ಮೂರು ಎಂದು ಕಳೆದ ದಿನಗಳನ್ನು ಲೆಕ್ಕ ಹಾಕಿತು.

ಅಳು-ನಗು, ಸಾಧನೆ- ಸಂಪಾದನೆ, ಸುಖ-ಸಂಕಟ, ಹೀಗೆ ಬದುಕಿನ ಬಣ್ಣ

ಬಣ್ಣದ ಅಲೆಗಳು ವಠಾರದ ಜೀವನ ಸರೋವರದಲ್ಲಿ ಹುಟ್ಟಿ, ಅಳಿಯುತ್ತ ಇದ್ದುವು.

ಆದರೆ ರಂಗಮ್ಮ ಗೆಲುವಾಗಿರಲಿಲ್ಲ. ಅವರ ಸುಕ್ಕುಗಟ್ಟಿದ್ದ ಮುಖ ಬಾಡಿ

ಕೊಂಡು ಮತ್ತಷ್ಟು ಸಪ್ಪೆಯಾಯಿತು. ಒಮ್ಮೆ ಸಿಡುಕು, ಮರುಕ್ಷಣವೇ ಸಂತೋಷ- ಇದು ಅವರ ಸ್ವಭಾವ. ಆದರೆ ಈಗ ದಿನವೆಲ್ಲ ಮುಖ ಗಂಟಿಕ್ಕಿಕೊಂಡೇ ಇರುತ್ತಿತ್ತು...

...ರಾಧಾ ಮೂರು ಎಂದು ಹೇಳಿ ನಾಲ್ಕು ಕೊಡ ನೀರು ಒಯ್ದಳೆಂದು ಅವರು

ಗದರಿದರು. ರಾಧಾಗೆ ಅಳು ಬಂತು.

ಜಯರಾಮು ಕಿಟಿಕಿಯಿಂದ ಮುಖ ಹೊರ ಹಾಕಿ ಕೆಳಕ್ಕೆ ರಂಗಮ್ಮನತ್ತ

ನೋಡುತ್ತ ರಾಗವೆಳೆದ:

"ನಾಲ್ಕು ಕೊಡ ನೀರು ಹೊತ್ಕೊಂಡು ಈ ಮಹಡಿ ಮೆಟ್ಟಲು ಹತ್ತೋದು

ಮನುಷ್ಯರಿಂದ ಸಾಧ್ಯವೇ ರಂಗವ್ನೋರೆ? ಅದೂ ರಾಧಾ, ಪುಟ್ಟ ಹುಡುಗಿ?"

ರಾಧಾ ಪುಟ್ಟ ಹುಡುಗಿಯಲ್ಲವೆಂದು ವಾದಿಸುತ್ತಿದ್ದ ಇಬ್ಬರು ಮೂವರು

ಹೆಂಗಸರು ಕೊಳಾಯಿಯ ಬಳಿ ನಿಂತಿದ್ದರು. ಅವರಿಗೆ ಕೇಳಿಸಲೆಂದೇ ಜಯರಾಮು ಹಾಗೆ ಹೇಳಿದ್ದ.

ಆತ ನಿರೀಕ್ಷಿಸಿದ್ದಂತೆಯೇ ಚಚೆರ್ ನಾಲ್ಕು ಕೊಡಗಳನ್ನು ಮರೆತು ರಾಧಾಳತ್ತ

ತಿರುಗಿತು.

ಮದುವೆಯಾಗದೇ ಇದ್ದ ಇಬ್ಬರು ಗಂಡುಮಕ್ಕಳ ತಾಯಿ ರಾಜಮ್ಮ ಯಾವುದೋ

ಸಂಕಟವನ್ನು ಮರೆಸಲು ಹಾದಿಯಾಗಲೆಂದು ಮಾತನಾಡಿದಳು:

"ಚೆನ್ನಾಗಿದೆ...ಪುಟ್ಟ ಹುಡುಗಿ...ಊಹೂಹೂಹು...ಪಾಪ! ದೃಷ್ಟಿ

ತಾಕೀತು."

"ಯಾಕೆ ಸುಮ್ಸುಮ್ಮೆ ಜಗಳ ಕಾಯ್ತಿಯೋ?" ಎಂದು ಜಯರಾಮುವಿನ

ತಾಯಿ ವಿನಂತ ಮಾಡುವ ಧ್ವನಿಯಲ್ಲಿ ಮಗನಿಗೆ ಅಂದಳು.

ಗುಂಡಣ್ಣ ಹೆಬ್ಬಾಗಿಲ ಬಳಿ ತಲೆ ಹಾಕಿ ಗಡಸು ಸ್ವರದಲ್ಲಿ ಗದರಿದ:

"ಏನಮ್ಮಾ ಅದು ಗಲಾಟೆ?"

ರಂಗಮ್ಮ ಅಲ್ಲಿಂದ ಒಳಕ್ಕೆ ಬಂದರು. ಕಟ್ಟಡದ ಕೆಳಭಾಗದಲ್ಲಿದ್ದ ನಾಲ್ಕು ಮನೆ

ಗಳಲ್ಲೂ ಹಗಲು ಹೊತ್ತು ಕೂಡ ಸಾಕಷ್ಟು ಬೆಳಕು ಇರುತ್ತಿರಲ್ಲಿಲ.ಆದರೆ ರಂಗಮ್ಮ ನಿಗೆ, ದೃಷ್ಟಿ ಮಂದವಾಗಿದ್ದರೂ, ಅಭ್ಯಾಸಬಲದಿಂದ, ಆ ಮನೆಗಳ ಒಳಗಿದ್ದ ಪ್ರತಿ