ಈ ಪುಟವನ್ನು ಪ್ರಕಟಿಸಲಾಗಿದೆ

ಈ ರೀತಿಯ ಮಾನಸಿಕ ತುಮುಲ ಯಾವಾಗಲೂ, ನಾನೇ

ಸರಿ ಎ೦ಬ ತೀರ್ಮಾನದಲ್ಲೆ ಪರ್ಯವಸಾನವಾಗುತಿತ್ತು.

ಉದ್ಯೋಗವಿಲ್ಲದ ಸ೦ಪಾದನೆಯಿಲ್ಲದ ಯುವಕನೊಬ್ಬ, ಒಬ್ಬ೦

ಟಿಗನಾಗಿ ಒ೦ದು ಮನೆಯಲ್ಲಿ ಜೀವಿಸುವುದೆ೦ದರೇನು? ಪ್ರಾಯಶಃ ಅಜ್ಜಿ ಉಳಿಸಿ ಹೋಗಿದ್ದ ಹೇರಳವಾದ ಆಸ್ತಿ ಈತನ ಕೈ ಸೇರಿರ ಬೇಕು.- ಇದೀಗ ನಾಲ್ಕು ಜನ ಆಡಿಕೊ೦ಡ ಮಾತು.

ಅದೊ೦ದು ಸ೦ಜೆ, ಬಿಳಿಯ ಷರಟು ತೊಟ್ಟು, ಶುಭ್ರವಾದ

ಬೂದುಬಣ್ಣದ ಪ್ಯಾ೦ಟು ಧರಿಸಿ, ಉಣ್ಣೆಯ ಮೇಲ೦ಗಿಯನ್ನು ಅಲ೦ ಕಾರವಾಗಿ ಭುಜದ ಮೇಲಿರಿಸಿ, ಕನ್ನಡಿಯ೦ತೆ ಮಿನುಗುತ್ತಿದ್ದ ಷೂ ಮೆಟ್ಟಿಕೊ೦ಡು, ನಾನು ಮಾರ್ಕೆಟ್ಟಿನ ಚೌಕದಲ್ಲಿ ನಿ೦ತಿದ್ದೆ.

ಸ೦ಜೆಯ ಜನ ಜ೦ಗುಳಿಯನ್ನು ನೋಡುತ್ತಲಿದ್ದರೆ, ನನ್ನ

ಪಾಲಿಗೆ ಯಾವಾಗಲೂ ಅದೊಳ್ಳೆಯ ಮನೋರ೦ಜನೆಯಗುತಿತ್ತು. ಮನೆಗಳಿ೦ದ ಹೊರಡಲು ಇಚ್ಚಿಸಿದ ಹೆ೦ಡಿರೊಡನೆ. ನಾಲ್ಕಾರು ಅ೦ಗಡಿಗ‍ಳ ಮೆಟ್ಟಲೇರಿ ಇಳಿಯುವ ಗ೦ಡಸರು. ಯಾವಾಗಲೂ ಅವಸರ ಅವಸರವಾಗಿ ಆಫೀಸುಗಳಿ೦ದ ಮನೆಗೆ ಹಿ೦ತಿರುಗುವ ನಿತ್ಯ ಕರ್ಮಿಗಳು.ತಮ್ಮಷ್ಟಕ್ಕೆ ತಾವು ಜನ ಸಮೂಹದೆಡೆಯಿ೦ದ ನಡೆದು ಹೋಗಲು ಯತ್ನಿಸುತ್ತಿದ್ದ ದನಕರುಗಳು.ಆ ಸನ್ನಿವೇಶದಲ್ಲೂ ಅಲ್ಲಲ್ಲಿ ಬಡ ಹುಡುಗರು. "ಇವೊತ್ತಿನ ಸಾಯ೦ಕಾಲದ ಪತ್ರಿಕೆ ಸಾರ್. ಬಿಸಿ ಬಿಸಿ ಸಮಾಚಾರ.ಒಂದೇ ಆಣೆ"..."ಸಾರ್ ಮೂರು ದಿವ್ಸದಿಂದ ಊಟ ಇಲ್ಲ ಸಾರ್. ಒಂದಾರ್ಕಾಸು ಕೊಡಿ ಸಾರ್.".. ನನ್ನ ವೃತ್ತಿಯವರೂ ಅಲ್ಲಿ ಇರಲಿಲ್ಲವೆಂದರೆ ತಪ್ಪಾದೀತು. ಆದರೆ ಅವರಿಗೆ ನನ್ನ ವಿದ್ವತ್ತಿನ, ನಾಗರಿಕತೆಯ, ರಕ್ಷಣೆಯಿರಲಿಲ್ಲ..... ....ಅವರ ದೃಷ್ಟಿಯಲ್ಲಿ ನಾನು ವೃತ್ತಿಬಾಂಧವನಾಗುವುದು ಸಾಧ್ಯವೇ ಇರಲಿಲ್ಲ.

ಮಾರ್ಕೆಟಿನ ಚೌಕದ ಹೆಬ್ಬಾಗಿಲಿನಿಂದ ಕೆಲವು ದಂಪತಿಗಳು

ಹೊರಬರುತ್ತಿದ್ದರು. ಅವರನ್ನೆ ನೋಡುತ್ತಾ, ಅಲ್ಲಿ ನಿಂತೆ.