ಅದು ಕಲಹ ......ರೋದನಗಳ ಕುರಕ್ಷೇತ್ರವೇನೋ ಆಗಿರಲಿಲ್ಲ. ಅಲ್ಲಿ ಒಂದು ರೀತಿಯ ಮೌನ ನೆಲೆಸಿರುತಿತ್ತು. ಅತಿಥಿಗಳು ಮನೆಗೆ ಬಂದರೆ ಶಾರದೆ ಮಿಸೆಸ್ ಶ್ರೀಕಂಠಯ್ಯನಾಗುವಳು......ಉಳಿದ ಹೊತ್ತಿನಲ್ಲಿ ಆಕೆ ಏಕಾಂತ ಪ್ರಿಯೆ, ಮಿಸ್ ಶಾರದೆ....
ಈ ಗೊಂದಲದ ನಡುವೆ ಆ ಹುಡುಗನೋ? ಶಾಲೆಗೆ ಹೋಗ
ತೊಡಗಿದ್ದ ನಾಗರಾಜ, ತನ್ನ ಓರಗೆಯವರ ಸ್ನೇಹ ಸಂಪಾದನೆಯಿಂದ ತೃಪ್ತನಾಗುತಿದ್ದ. ಆತ ತನ್ನೊಡನೆ ಮನೆಗೆ ಕರೆದುಕೊಂಡು ಬರುತ್ತಿದ್ದ ಬಡ ಹುಡುಗನನೊಬ್ಬನಿದ್ದ--ಅವನ ಸಹಪಾಠಿ.ಮನೆಯ ಭವ್ಯತೆ ಯನ್ನು ಕಂಡಾಗ ಆ ಹುಡುಗನ ದೃಷ್ಟಿ ಬೆರಗುನೋಟ ಬೀರುತಿತ್ತು, ನಾಗರಾಜನ ಆಟದ ಸಾಮಾನುಗಳನ್ನು ನೋಡಿದಾಗ ಅವನ ಮುಖ ಅರಳುತಿತ್ತು: ತಿಂಡಿವಾಸನೆ ಬಂದಾಗ ಅವನ ನಾಲಿಗೆಯಲ್ಲಿ ನೀ ರೂರಿತ್ತು.
ಚಿತ್ರ ಸಂಗ್ರಾಹಾಲಯದೊಂದು ಕೃತಿಯನ್ನು ನೋಡುವಂತೆ
ನಾನು ಅವನನ್ನು ದಿಟ್ಟಸುತ್ತದ್ದೆ.
ಆ ಹುಡುಗ ಕತ್ತಲಾದಾಗ ಮನೆಗೆ ಹೊರಡುತಿದ್ದ.ನಾಗರಾಜ
ನನ್ನೂ ಆಲೋಕವನ್ನೂ ಬೀಳ್ಕೊಡಬೇಕಾದ ಪ್ರಮೇಯ ಬಂದಾಗ ಆ ಹುಡುಗನ ಕಂಠ ಗದ್ಗದಿತವಾಗುತಿತ್ತು.
ಅವನನ್ನು ಹತ್ತಿರಕ್ಕೆ ಕರೆದು,ಅವನು ಯಾರೆಂದು ಕೇಳುವ
ಆಸೆಯಾಗುತಿತ್ತು ನನಗೆ. ಆದರೆ ಮರುಕ್ಶಣವೆ ಏಕಾಂಗಿಯಾದ ನನ್ನ ದುರವಸ್ಥೆಯನ್ನು ಕಂಡು ಮನಸ್ಸು ನಗುತಿತ್ತು.
ಒಂದು ಸಂಜೆ ಶಾರದೆ ನಾಗರಾಜನಿಗೆ ಎಚ್ಚರಿಕೆ ಕೊಡುತಿದ್ದಳು.
"ಹುಷಾರಾಗಿರಬೇಕಪ್ಪ ರಾಜು. ನಿನ್ನ ಸ್ನೇಹಿತ-ಆ ಬಡ
ಮುಂಡೇದು-ಏನಾದರು ಕದ್ದು ಗಿದ್ದಾನು!"
ಕಂಟ ಬಿರಿಯುವ ಹಾಗೆ ನಾಗರಾಜ ಕೂಗಾಡಿದ:
"ನನ್ನ ಸ್ನೆಹಿತನ್ನ ಹಾಗಂತೀಯಾ! ನಾಚ್ಕೆ ಆಗ್ಬೇಕಮ್ಮ,
ನಿಂಗೆ
"ಏನಂದೆ?"