೩೪೦
ವಿಮೋಚನೆ
ಚಂದ್ರ ಇಣಿಕಿ ನೋಡುವನು. ಆಗ ಆತನಿಗೆ ಬಟ್ವಿಯ ಬಲ
ದಾರ ಕಾಣುವುದು. ಆ ದಾರಕ್ಕೆ ಜೋತುಬಿದ್ದು ಆತ ಇಳಿದು
ಬಹುದೇನೋ. ಅದಾಗದ ಕೆಲಸ. ನಾನು ಜೋತು ಬಿದ್ದಿರು
ಚಂದ್ರನ ಭಾರವನ್ನು ಆ ದಾರ ಹೊರುವುದುಂಟೆ?
....ಯಾಕೆ,ಅರ್ಥವಿಲ್ಲದ ಮಾತುಗಳು ಈ ಲೇಖಣಿಯ
ಹೊರಬೀಳುತ್ತಿವೆಯಲ್ಲ!.......
ಅರ್ಥವಿಲ್ಲದ .
ನಾನು ಬಲ್ಲೆ, ಈಗಿನ ಕಾಲದಲ್ಲಿ ಪದಗಳ ಅರ್ಥವಾ
ಲಾಗುತ್ತಿದೆ. ಹಳೆಯ ಪದಗಳಿಗೆ ಹೊಸ ಅರ್ಥ ಬರುತ್ತಿದೆ...
ಆದರೆ ಪದಗಳು ಸಾಯುವುದಿಲ್ಲ.
ನಾನು?
ಅಮ್ಮಾ - ಅಮ್ಮಾ - ಅಪ್ಪಾ - ಅಪ್ಪಾ - ಅಜ್ಜಿ - ಅಜ್ಜಿ
" ರುಕ್ಕೂ ಏನ್ಮಾಡೋಣಾಂತೀಯಾ? "
" ನೀನು ನಿಜವಾಗ್ಲೂ ಕದ್ದಿಲ್ಲ ಅಲ್ವಾ ಚಂದ್ರೂ?"
" ನಾನು ಯಾವತ್ತಾದರೂ ಹಾಗ್ಮಾಡೇನಾ ಅಪ್ಪಾ?"
" ಒಬ್ಬರೊಬ್ಬರು ಸುಲಿದು ತಿನ್ನೋದೇ ಈ ಪ್ರಪಂಚದ
ಶೇಖರ್."
ದೊಡ್ಡ ಮನುಷ್ಯ -- ದೊಡ್ಮನುಷ್ಯ....
"ಭಿಕ್ಷಾ ಸಿಗ್ತೇನೋ...."
ಎರಡು ರೂಪಾಯಿ.... ಎರಡು....
ವನಜಾ --- ವನೂ....
"ನಾನು ಭಿಕಾರಿಯಾದರೆ?"
"ಥೂ ಹೋಗಪ್ಪ ,ಎಂಥ ಮಾತಾಡ್ತೀಯಾ?
"ನಾನು ಆ ಹುಡುಗೀನ ನೋಡ್ಬೇಕು ಶೇಖರ್...
"ಸೈತಾನ ಕಣೋ ನೀನು...."
"ಮೂರು ತಿಂಗಳ ಬೋನಸ್...."
"ಸ್ವಾತಂತ್ರ್ಯ ಬಂದ ಘಳಿಗೇಲೇ ನಿದ್ದೆ ಹೋದ್ಯ