ವಿಮೋಚನೆ
೩೪೧
ಭೂಪ!"
" ಯಾವಾಗ್ಲೂ ಬ್ಯಾಸ್ಗೇನೆ ಇದ್ಬಾತಾ? ಮಳೆ ಬತ್ತದೆ ಕಣ್ರಪೋ"
"ಶಾರದಾ ಸತ್ತೋದ್ಲು...."
"ಕರುಳಿನ ಬಾಧೆ--ಒಂದ್ಸಾರಿ ಸರಿಯಾಗಿ ಪರೀಕ್ಷಿಸ್ಬೇಕು."
"ಮನುಷ್ನಾದ್ಮೇಲೆ ಜೀವನದಲ್ಲಿ ಒಂದು ಶ್ರದ್ಧೆ--ನಂಬುಗೆ
ಇರಬೇಕು ಚಂದ್ರಶೇಖರ್."
....ಗತ ಕಾಲದ ಸ್ಮರಣೆಗಳ ಈ ಸುರುಳಿ....
"ಅಷ್ಟು ಶಕ್ತಿ ಬಂತೇನೋ ಭಡವಾ?"
ಜುಟ್ಟು-ಕ್ರಾಪು-
"ಇಸ್ಕೂಲ್ಗೆ ಓಯ್ತವ್ನಾ?"
"ಕೈಲಿ ಕೆಂಪು ಬಾ-ವು-ಟಾ... ಓಹ್ಪೋ..!"
ನನ್ನಿಂದಾಗದು. ನಾನಿನ್ನು ಏನನ್ನು ಬರೆಯಲಾರೆ.
ಸಮಾಜದ ಏಣಿಯ ಕೆಳ ಹಂತದಲ್ಲಿ ನಾನು ಹುಟ್ಟಿದೆ. ಅಲ್ಲಿಂದ
ನಡು ಹಂತಕ್ಕೆ ಬಂದೆ. ಆ ಮೇಲೆ ಮೇಲೆ ಮೇಲಣ ಹಂತ...ಏಣಿ ಇದೆ
ಎಂದು ಧೈಯರ್ವಾಗಿ ಮೇಲೇರುವ ಯತ್ನ.....ಆದರೆ ಬಾರಿ
ಬಾರಿಗೂ ಏಣಿ ಬಾರಿ ಹೋಗುವುದು.
ಆ ಮೇಲೆ ಮುಗಿಲಿಗೆ ನೇತಾಡುವ-ಗಾಳಿ ಸೇವಿಸುತ್ತಾ.
ಈ ಪ್ರಪಂಚದಲ್ಲಿ ಇಷ್ಟು ದಿನ ಇದ್ದು ನಾನೇನು ಮಾಡಿದ
ಹಾಗಾಯಿತು? ಎಷ್ಟೋಂದು ತಪ್ಪುಗಳಾಗಲಿಲ್ಲ ನನ್ನಿಂದ! ತಿಳವಳಿಕೆ
ಇಲ್ಲದೆ ನಾನು ತಪ್ಪುಗಲನ್ನು ಮಾಡಿದ್ದೆ!
ನನ್ನ ಕೆಲಸದಲ್ಲಿ ನಾಳೆಯ ದಿನ ಜನ ಮೆಚ್ಚುವಂಥಾದ್ದು
ಏನಾದರೂ ಇತ್ತೆ? ತೆಗಳುವಂಥಾದ್ದು?
ನಾನೀಗ ಒಬ್ಬಂಟಿಗನಾಗಿ ಗೋರಿಗೆ ಹೋಗುತಿದ್ದೇನೆ--ನನ
ನೆನಪುಗಳೊಡನೆ.
ವನಜ---ವನಜ......