ಈ ಪುಟವನ್ನು ಪ್ರಕಟಿಸಲಾಗಿದೆ

ನನಗೆ ಎಂದು ಹೊಡೆದವನಲ ಅಪ್ಪ. ಆ ರಾತ್ರೆ ಆತ ನನ್ನ ಮೈ ಮೇಲೆ ಏರಿ ಬಂದ. ಹೊಡೆತಕ್ಕಿಂತಲೂ, ಹೊಡೆಯಲು ಬಂದನೆಂಬ ವಿಷಯವೇ ನನಗೆ ನೋವನುಂಟೂಮಾಡಿತು. ಆಗಲೂ ನಾನು ಮಾತನಾಡಲಿಲ್ಲ. ನಮ್ಮ ಗೂಡಿನ ಹೊರಗೆ ನಿಂತು ಅಜ್ಜಿಯೂ ಬಲು ಹೊತ್ತು ಹೇಳಿ ನೋಡಿದರು.........

ಕೊನಗೆ ಬಲು ರಾತ್ರೆಯಾದ ಮೇಲೆ ನಾನು ನಡೆದುದನ್ನು ತಂದೆಗೆ ವಿವರಿಸಿದೆ. ಉಪ್ಪು ಖಾರ ಹಚ್ಚದೆ, ಇದ್ದುದನ್ನು ಇದ್ದಂತೆ ತಿಳಿಸಿದೆ. ತಂದೆ ತಲೆ ಬಗ್ಗಿಸಿ ಕುಳಿತ. ಅಸಹಾಯತೆಯ ದುಃಖ ಆ ಮುಖದ ಮೇಲೆ ಚಿತ್ರಬರೆದಂತೆ ಮೂಡಿತ್ತು.

"ಹಿಂಗ್ಯಾಕ್ಮಾಡ್ದೆ ಚಂದ್ರು ? ದುಡ್ನೋರ್ ಸಂಗಡ ಜಗಳ ಕಾಯ್ಸೋದಾ?"

ನಾನು ನಿರುತ್ತರನಾಗಿದ್ದೆ. ಬಹಳ ಹೊತ್ತು ತಂದೆಯೂ ಸುಮ್ಮನಿದ್ದ. ಕೊನೆಗೆ ಆತನೆ ಮೌನವನ್ನು ಮುರಿದ.

"ನಾಳೆ ದಿವಸ ಸ್ಕೂಲಿಗೆ ಬರ್ತೀನಿ, ನಿಮ್ಮಷ್ಟರನ್ನು ಕೇಳಿ ನೋಡಾಣ."

"ಹೂನಪ್ಪ"

"ಅಲ್ಲಿ ನೀನು ತಪ್ಪೊಪ್ಕ್ಕೋಬೇಕು ಚಂದ್ರು."

ನಾನು ತಂದೆ ಮುಖವನ್ನೆ ನೋಡುತ್ತಿದ್ದ. ಮಾಡದ ತಪ್ಪನ್ನು ಏದೆಂದು ಒಪ್ಪಿಕೊಳ್ಳಲಿ? ನಾನು ಹೊಡೆದುದು ನಿಜ, ಆದರೆ ಅದ್ದಕ್ಕೆ ಮೂಲಕಾರಣವೇನ್ನು ? ನನ್ನ ತಂದೆಗೆ ಅಷ್ತು ತಿಳಿಯ ಬಾರದೆ ?

ನನ್ನನ್ನೆ ನೋಡುತ್ತ ಅಪ್ಪ ಹೇಳಿದ.

"ನಿಂಗ್ತಿಳೀದು ಚಂದ್ರು. ಈ ಲೋಕದಲ್ಲಿ ಬಡವರ ಕೋಪದವಡೆಗೆ ಮೂಲ. ತಾಳಿ ನಡೆದವನೇ ಬಾಳೋದು ಸಾಧ್ಯ."

ನನಗೆ ಆ ಮಾತುಗಳು ಅರ್ಥವಾಗಲಿಲ್ಲ. ಸದಾಕಾಲವೂ ಎದೆ ಎತ್ತಿ ನಡೆಯುತ್ತಲಿದ್ದ ಖಡಾಖಂಡಿತವಾದಿಯಾಗಿದ್ದ ಸತ್ಯನಿಷ್ಟುರ ನಾಗಿದ್ದ ನನ್ನ ತಂದೆಯೇ ಅಲ್ಲವೆ ಅಂಥ ಮಾತುಗಳನ್ನು ಹೇಳುತ್ತಿ ದ್ದುದು?