ರಂಗಮ್ಮನ ವಠಾರ

ಅಂಗಳದಲ್ಲಿ ಹೆಂಗಸರು ಗುಂಪುಕಟ್ಟಿಕೊಂಡು ಗುಸು ಗುಸು ಮಾತನಾಡುತ್ತಿ

ದ್ದರು. ಆ ಮಾತುಕತೆಯ ನಡುವೆ ಒಮ್ಮೆಲೆ ಅವರ ಕಿವಿಗಳು ನಿಮಿರಿದವು. ಸದ್ದು,ಮೊದಲು ಅಸ್ಪಷ್ಟವಾಗಿದ್ದುದು, ಕ್ರಮೇಣ ಸ್ಪಷ್ಟವಾಗಿ ಕೇಳಿಸಿತು.

ಟಕ್-ಟಕ್-ಟಕ್....

ವಠಾರದ ನಡುವಿನ ಎರಡಡಿ ಅಗಲದ ಓಣಿಯಲ್ಲಿ ನಡೆಗೋಲನ್ನೂರಿಕೊಂಡು

ರಂಗಮ್ಮ ಬರುತ್ತಿದ್ದರು. ಎಂದಿನಂತೆ, ಆ ಸದ್ದಿನ ಜತೆಯಲ್ಲೆ, ಇದ್ದ ಕೆಲವು ಹಲ್ಲುಗಳನ್ನು ಕಡಿಯುವ ಸಪ್ಪಳ. ಅದರೊಡನೆ ಬೆರೆಯಲೆಂದು, ಗಂಟಲಿನಿಂದ ಹೊರಟು ಅಲ್ಲಿಯೆ ಇಂಗುತ್ತಿದ್ದ ಆಂ_ಊಂ_ನರಳಾಟ.

ವಯಸ್ಸಾಗಿದ್ದ ರಂಗಮ್ಮ ಮೆಲ್ಲನೆ ನಡೆದು ಬಂದು ಹೆಂಗಸರ ಗುಂಪಿನೆದುರು

ನಿಂತರು. ಬಾಗಿದ್ದ ಅವರ ಬೆನ್ನು ಕ್ಷಣ ಕಾಲ ನೇರವಾಗಿರಲು ಯತ್ನಿಸಿತು. ಆ ಯತ್ನಕ್ಕೆ ಬೆಂಬಲವಾಗಿ ಬಲಗೈ ಸೊಂಟದ ಮೇಲೇರಿತು.

ಉಳಿದೆಲ್ಲರ ಮುಖಗಳೂ ಪ್ರಶ್ನಾರ್ಥಕ ಚಿಹ್ನೆಯಾಗಿ ರಂಗಮ್ಮನತ್ತ ತಿರುಗಿ

ದುವು. ರಂಗಮ್ಮ ನಿಟ್ಟುಸಿರುಬಿಟ್ಟರು, ತಲೆಯಲ್ಲಾಡಿಸಿದರು. ಏನು ಅದರರ್ಥ? ಆಸೆ ಇಲ್ಲವೆ ಹಾಗಾದರೆ? ನಾರಾಯಣಿ ಬದುಕುವ ಆಸೆಯೇ ಇಲ್ಲವೆ?

ರಂಗಮ್ಮ ಮತ್ತಷ್ಟು ಬಿಗಿಯಾಗಿ ತುಟಿಗಳನ್ನು ಬಿಗಿದುಕೊಂಡರು. ಬೆನ್ನು

ಮೊದಲಿನಂತೆ ಬಾಗಿತು. ಕಾಲುಗಳು ಹಿಂತಿರುಗಿದವು. ಟಕ್_ಟಕ್_ಟಕ್ . . . ರಂಗಮ್ಮ ಸಾವಧಾನವಾಗಿ ನಡೆದು, ಆ ನಡುಹಗಲಲ್ಲೂ ಕತ್ತಲು ಅಡರಿದ್ದ ತಮ್ಮ ಗೂಡಿನೊಳಕ್ಕೆ ಸೇರಿಕೊಂಡರು.

ಮತ್ತೆ ಹೆಂಗಸರ ಗುಸು ಗುಸು ಮಾತು...

"ಅಯ್ಯೋ ಪಾಪ!"

" ಆ ಪುಟ್ಟ ಕೂಸುಗಳನ್ನ ಯಾರು ನೋಡ್ಕೊಳ್ಳೋರು ಇನ್ನು ?"

" ಆತನ ಕೆಲಸ ಬೇರೆ ಹೋಯ್ತಂತೆ."

"ಹೌದೆ? ನಿಜವೆ? ಅಯ್ಯೋ!"

ಆ ವಠಾರಕ್ಕೆ ಅದೇ ವರ್ಷ ಬಿಡಾರ ಬಂದಿದ್ದ, ಮಕ್ಕಳು ಮರಿ ಕಾಹಿಲೆ ಕಸಾಲೆ

ಎಂದರೇನೆಂಬುದನ್ನು ತಿಳಿಯದ, ಎಳೆಯ ಗೃಹಿಣಿಯೊಬ್ಬಳು ದೇವರನ್ನು ಟೀಕಿಸಿದಳು:

"ಆ ಪರಮಾತ್ಮ ಇಂಥ ಕಷ್ಟ ಕೊಡಬಾರದು!"

ಎಲ್ಲರೂ ಆ ಸ್ವರ ಕೇಳಿ ಅತ್ತ ನೋಡಿದರು. ಆದರೆ ಯಾರೂ ಮಾತನಾಡ

ಲಿಲ್ಲ ಮುಖ ಕೆಂಪೇರಿ, ಆಕೆ ತನ್ನ ಬಿಲ ಸೇರಿಕೊಂಡಳು.

ಹುಟ್ಟಿದ್ದ ನಾಲ್ಕು ಮಕ್ಕಳನ್ನೂ ಕಳೆದುಕೊಂಡಿದ್ದ ಬಡ ಹೆಂಗಸೊಬ್ಬಳು, ಒಳೆ

ಹೋದ ಆ ಯುವತಿಯನ್ನು ತನ್ನ ದೃಷ್ಟಿಯಿಂದ ಹಿಂಬಾಲಿಸಿ, ಹೂಂ ಎಂದು ನಿಟ್ಟುಸಿರುಬಿಟ್ಟಳು.

ಆತ ಇದಾರೋ?

ಇಲ್ದೇನು ಮಾಡ್ತಾರೆ ಪಾಪ! ಹುಡುಗರಿಗೆ ಗಂಜಿ ಬೇಯಿಸಿಯಾದರೂ

ಹಾಕೋದು ಬೇಡ್ವೆ?

ಇಲ್ಲ ಕಣ್ರೀ. ಆತ ಒಲೆ ಹಚ್ಚೇ ಇಲ್ಲ. ಬೆಳಗ್ಗೆ ನಾನೇ ಒಂದಿಷ್ಟು ದೋಸ

ಹುಯ್ದು ಹುಡುಗರಿಗೆ ಕೊಟ್ಟೆ.

ಹಾಗೆ ಹೇಳಿದ ಹೆಂಗಸು ಮೂರು ಮಕ್ಕಳ ತಾಯಿ. ಆಕೆಗೂ ನಾರಾಯಣಣಿಗೂ

ಹೇಳಿಕೊಳ್ಳುವಂತಹ ಸ್ನೇಹವೇನೂ ಇರಲಿಲ್ಲ. ವಾಸ್ತವವಾಗಿ, ಅವರೊಳಗೆ ಒಂದು ಬಗೆಯ ವೈಮನಸ್ಸಿತ್ತು. ನಾರಾಯಣಿಯ ಎಂತು ವರ್ಷದ ಹಿರಿಯ ಮಗ ಮಹಾ ತುಂಟ. ಆತನ ದಾಳಿಯಿಂದ ತ್ನ್ನ ಗುಬ್ಬಚ್ಚಿಗಳನ್ನು ಕಾಪಾಡುವುದು ಆ ಹೆಂಗಸಿನ ಪಾಲಿಗೊಂದು ಸಾಹಸವಾಗಿತ್ತು. ಹೀಗಿದ್ದರೂ, ಮರಣಶಯ್ಯೆಯಲ್ಲಿ ಮಲಗಿದ್ದ ನಾರಾಯಣಿಯ ಮಕ್ಕಳಿಗೆ ಆಕೆ ಈ ದಿನ ತಿನಿಸು ಕೊಟ್ಟಿದ್ದಳು.

ಅದು ಹೆಮ್ಮೆಪಡುವಂತಹ ಔದಾರ್ಯವೆಂದು ಭಾವಿಸಿ ಆಕೆ ಆ ವಿಶಯ ಪ್ರಸ್ತಾ

ಪಿಸಿರಲಿಲ್ಲ. ಹಾಗೆ ಮಾಡಿದುದು ಆಡಿದುದು ಅಸ್ವಾಭಾವಿಕವಾಗಿಯೂ ಇತರರಿಗೆ

ತೋರಲಿಲ್ಲ.

ಸದ್ಗುಣ ಸಂಪನ್ನೆಯಾಗಿರಲಿಲ್ಲ ನಾರಾಯಣಿ_ಮಹಾ ಸಾಧ್ವಿಯಾಗಿರಲಿಲ್ಲ. ಆ

ವಠಾರಕ್ಕೆ ಆಕೆ ಬಂದುದು ಚೊಚ್ಚಲ ಬಾಣಂತಿಯಾಗಿ. ಯುದ್ಧ ನಡೆಯುತ್ತಿದ್ದ ಕಾಲ. ವಿಮಾನ ಕಾರಖಾನೆಯಲ್ಲಿ ಗಂಡನಿಗೆ ಕೆಲಸವಿತ್ತು. ಸ್ವಲ್ಪ ದಿನ ಅವರು, ನಾಲ್ಕು ಜನ ಅಸೂಯೆಪಡುವ ಹಾಗೆಯೇ ಇದ್ದರೆನ್ನಬಹುದು. ಯುದ್ಧ ಮುಗಿಯಿತು. ನಾರಾಯಣಿಯ ಗಂಡ ಕೆಲಸ ಕಳೆದುಕೊಂಡ ಸಹಸ್ರ ಸಹಸ್ರ ಜನರಲ್ಲಿ ಒಬ್ಬನಾದ. ನಿರುದ್ಯೋಗ, ಆ ಬಳಿಕ ಸಣ್ಣ ಪುಟ್ಟ ಕೆಲಸ, ಮತ್ತೆ ನಿರುದ್ಯೋಗ, ಮತ್ತೊಮ್ಮೆ ಎಲ್ಲಾದರೂ ಕೆಲಸ. ಸಾಕಷ್ಟು ಸಂಪಾದನೆಯಿಲ್ಲದೆ ಬಾಳು ಸಂಕಟಮಯವಾಯಿತು. ಹೀಗಿದ್ದರೂ ಮಕ್ಕಳಾಗುವುದು ನಿಲ್ಲಲಿಲ್ಲ. ಈ ಏಳು ವರ್ಷಗಳ ಅವಧಿಯಲ್ಲಿ ಮತ್ತೆ ಮೂರು. ಪ್ರತಿಯೊಂದು ಹೆರಿಗೆಯಾದಂತೆ ನಾರಾಯಣಿ ಹೆಚ್ಚು ಹೆಚ್ಚು ಬಡವಾಗುತ್ತ ನಡೆದಳು. ಈ ಸಲ ಬಾಣಂತಿಯಾಗಿ ಒಂದು ವರ್ಷವಾದರೂ ಆಕೆ ಚೇತರಿಸಿಕೊಳ್ಳುವ ಚಿಹ್ನೆ ತೋರಲಿಲ್ಲ ...ಶೀಷೆ ಶೀಷೆ ತುಂಬ ಬಣ್ಣಬಣ್ಣದ ಔಷಧಿ_ಒಂದೆರಡು ಸೂಜಿ ಮದ್ದು ಕೂಡ. ಧರ್ಮಾಸ್ಪತ್ರೆಗೆ ಹತ್ತಾರು ಸಾರಿ ಅಲೆದಾಟ...ಇಷ್ಟೇ ಆಗಿದ್ದರೆ ನಾರಾಯಣಿ 'ಕೆಟ್ಟವಳು' ಎನ್ನಿಸಿಕೊಳ್ಳಬೇಕಾದ್ದಿರಲಿಲ್ಲ. ಆದರೆ ಆ ಏಳು ವರ್ಷಗಳಲ್ಲಿ ನಾರಾಯಣಿ ಏನೋ ಆಗಿ ಹೋಗಿದ್ದಳು. ಆಗಿನ ಮಾತಿನ ಮಲ್ಲಿ, ಸ್ನೇಹಮಯಿ, ಈಗ ಮಹಾ ಮುಂಗೋಪಿ. ನಿಷ್ಕಾರಣವಾಗಿ ರೇಗಿ, ಸಿಕ್ಕವರೊಡನೆಲ್ಲ ಜಗಳ. ‍‍‍ಕಾಯುತ್ತಿದ್ದಳು. ಒಮ್ಮೆ ಎದುರು ಬಿಡಾರದಿಂದ ಎರಡು ತುಂಡು ಸೌದೆ ಕದ್ಧಳೆಂಬ ಆರೋಪ ಆಕೆಯ ಮೇಲೆ ಹೂರಿಸಲ್ಪಟ್ಟಿತು. ಆಗ ವಠಾರ ಧೂಳೆದ್ಧು ಹೋಗುವ ಹಾಗೆ ನಾರಾಯಣಿ ಕಿರಿಚಿಕೊಂಡಿದ್ದಳು:

"ನನ್ನ ಕಳ್ಳಿ ಆಂದೋರ ನಾಲಿಗೆ ಬಿದ್ದು ಹೋಗ!ತೋರಿಸ್ಸ್ ನಾನು ಕದ್ದ ಸೌದೇನ!

ಕೊಡಿ ರುಜುವಾತು!"

ಆ ಆಹ್ವಾನವನ್ನು ಸ್ವೀಕರಿಸುವುದು ಸುಲಭವಾಗಿರಲ್ಲಿಲ. ಎಲ್ಲಿತ್ತು ಸಾಕ್ಶ್ಯ?

ಹಿಡಿ ಬೂದಿಯನ್ನೆತ್ತಿ, ಇದು ಈ ಮನೆಯ ಸೌದೇ ಬೂದಿ ಎನ್ನುವುದು ಸಾಧ್ಯವಿತ್ತೆ? ನಾರಾಣಿ ತಲೆಗೂದಲು ಕೆದೆರಿ ಕಿತ್ತಾಡಿ, ಕಣ್ಣು ಕೆಂಪಗೆ ಮಾಡಿ,ಅಂಗೈಯಿಂದ ತಲೆ ಚಚ್ಚಿಕೊಂಡು, ತಾನು ನಿರಪರಾಧಿಯೆಂದು ತೋರಿಸಿಕೊಡಲು ಯತ್ನಿಸಿದ್ದಳು.ಆದರೆ,ಆಕೆ ಅಪರಾಧಿ ಎಂಬ ವಿಶಯದಲ್ಲಿ ಯಾರಿಗೂ ಸಂದೇಹವಿರಲಿಲ್ಲ.

ಅದು ಎರಡು ವರ್ಷಗಳಿಗೆ ಹಿಂದಿನ ಮಾತು. ಆ ದಿನದಿಂದ ಎದುರು ಬಿಡಾರದ,

ಎರಡೇ ಅಡಿ ಅಂತರದಲ್ಲಿದ್ದ ಎದುರು ಬಿಡಾರದ, ಮೀನಾಕ್ಷಮ್ಮನೂ ಅವಳ ಮನೆಯವರೂ ನಾರಾಯಣಿಯ ಸಂಸಾರದೊಡನೆ ಮಾತು ಬಿಟ್ಟಿದ್ದರು. ಮಿನಾಕ್ಷಮ್ಮನಿಗಿದ್ದುದು ಅದೇ ಆಗ ಶಾಲೆಗೆ ಹೋಗತೊಡಗಿದ್ದ ಒಬ್ಬನೇ ಮಗ. ಆತ ನಾರಾಯಣಿಯ ಮಕ್ಕಳೊಡನೆ ಆಟಾವಾಡದಂತೆ ನೋದಲು ಮೀನಾಕ್ಷಮಾ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ನಾರಾಯಣಿಯ ದೊಡ್ಡ ಹುಡುಗನೂ ಮೀನಾಕ್ಷಮ್ಮನ ಮಗನೂ ಹೋಗುತ್ತಿದ್ದುದು ಒಂದೇ ಶಾಲೆಗೆ.

ಒಂದು ದಿನ ಶಾಲೆಗೆ ಹೋಗುತ್ತ ಮಾತಿಗೆ ಮಾತು ಬೆಳೆದು ಮೀನಾಕ್ಷಮ್ಮನ

ಮಗ ನಾರಾಯಣಿಯ ಹುಡುಗನಿಗೆ ಹೇಳಿದ:

ನಿಮ್ಮಮ್ಮ ಸೌದೆ ಕಳ್ಳಿ.

ಇನ್ನೊಮ್ಮೆ ಹೇಳು!

ಅದೇ ಮಾತು ಇನ್ನೊಮ್ಮೆ.

ಪರಿಣಾಮ, ಬೀದಿಯಲ್ಲಿ ಹುಡುಗರೆಲ್ಲ ಗುಂಪು ಕಟ್ಟಿಕೊಂಡು ನೋಡಿದ ಜಂಗೀ

ಕುಸ್ತಿ. ಕೈಯುಗುರಿನಿಂದ ಒಬ್ಬರು ಇನ್ನೊಬ್ಬರ ಮುಖ ಪರಚಿ ಗಾಯ ಮಾಡಿದರು. ಅಂಗಿ ಹರಿದರು. ವರದಿ ಮನೆಗೆ ಬಂದಾಗ, ವಠಾರದ ತಾಯಂದಿರೊಳಗೆ ಜಗಳವಾಯಿತು.

ಆ ಇಬ್ಬರು ಹುಡುಗರೇನೋ ಅದನ್ನೆಲ್ಲ ಬೇಗನೆ ಮರೆತು ವಠಾರದ ಹೊರಗೆ,/p> ಸ್ನೇಹಿತರಾಗಿಯೇ ಇದ್ದುದು ನಿಜ. ಆದರೆ ಹೆಂಗಸರು ಒಬ್ಬರನ್ನೊಬ್ಬರು ಕ್ಷಮಿಸಲಿಲ್ಲ.

ನಾರಾಯಣಿಗಿಂತಲೂ ಹಿಂದೆಯೇ ಆ ವಠಾರದಲ್ಲಿ ವಾಸ ಮಾಡುತ್ತಿದ್ದ ಸಂಸಾರ

ಗಳೂ ಇದ್ದುವು: ಅನಂತರ ಬಂದವರೂ ಇದ್ದರು. ಅವರೆಲ್ಲರಿಗೂ ನಾರಾಯಣಿ ಪರಿಚಿತಳಾಗಿದ್ದಳು. ಸ್ನೇಹವನ್ನು ಯಾಚಿಸಿ ತಾವಾಗಿಯೇ ಆಕೆಯ ಬಳಿಗೆ ಹೋಗಬೇಕೆಂದು ಅವರಲ್ಲಿ ಯಾರಿಗೂ ಎಂದೂ ಅನಿಸಿರಲಿಲ್ಲ.

ಆದರೆ ಈ ದಿನ ಪ್ರತಿಯೊಂದು ಹೃದಯವನ್ನೂ ದುಃಖದ ಇಕ್ಕುಳ ಹಿಚುಕಿ

ನೋಯಿಸುತ್ತಿತ್ತು.

ಬದುಕು _ಅದೇನು ಸುಖವೊ? ಆದರೆ ಸಾವು _ಸುಖ ಎನ್ನಬಹುದೆ?

ಅಂತಹ ಹೊತ್ತಿನಲ್ಲಿ ಆ ಹೆಂಗಸರಿಗೆ, ನಾರಾಯಣಿಯ ಕಡುವೈರಿಯಾದ

ಮೀನಾಕ್ಷಮ್ಮನ ನೆನಪಾಗದಿರಲಿಲ್ಲ. ಎಲ್ಲಿ ಮೀನಾಕ್ಷಮ್ಮ? ಎಂದು ಸ್ವರವೆತ್ತಿ ಯಾರೂ ಕೇಳದೆ ಹೋದರೂ, ಎಲ್ಲರ ದೃಷ್ಟಿಗಳೂ ಆಕೆಯನ್ನು ಹುಡುಕುತ್ತಿದ್ದುವು.

ಮೀನಾಕ್ಷಮ್ಮ ತನ್ನ ಮನೆಯ ತಲೆಬಾಗಿಲ ಬಳಿ ನಿಂತು, ಎದುರು ಮನೆಯನ್ನೇ

ದಿಟ್ಟಿಸುತ್ತಿದ್ದಳು. ಸೂರ್ಯರಶ್ಮಿಯ ಪ್ರವೇಶವಿಲ್ಲದ ಗವಿಮನೆ. ಆದರೂ ಆ ಮಬ್ಬು ಬೆಳಕಿನಲ್ಲಿ, ಹಳೆಯ ಚಾಪೆಯ ಮೇಲೆ ಹಾಸಿದ್ದ ಹರಿದ ತೆಳು ಹಾಸಿಗೆಯ ಮೇಲೆ ನಾರಾಯಣಿ ಮಲಗಿದ್ದುದು ಕಾಣಿಸುತ್ತಿತ್ತು. ಕೊನೆಯ, ಒಂದು ವರ್ಷದ, ಮಗು ಪಕ್ಕದಲ್ಲಿ ಕುಳಿತಿತ್ತು. ಆಕೆಯ ಗಂದ ಆಡುಗೆ ಮನೆಯಲ್ಲಿದ್ದನೇನೊ...ಅಲ್ಲಿ ಹಾಗೆ ಮಲಗಿದ್ದ ಆ ಮೂಳೆಯ ಹಂದರ ತನ್ನ ಪರಮ ದ್ವೇಷಿ ಎಂದು ಭಾವಿಸಲು ಮೀನಾಕ್ಷಮ್ಮ ಸಿದ್ಧಳಿರಲಿಲ್ಲ.

ಹೊರಬಾಗಿಲಿನಾಚೆ ಅಂಗಳದಲ್ಲಿ ನಿಂತಿದ್ದ ಹೆಂಗಸರಲ್ಲಿ ಒಬ್ಬಾಕೆ ಮೀನಾಕ್ಷಮ್ಮ

ನನ್ನು ಅಲ್ಲಿಂದಲೆ ನೋಡಿ ಸನ್ನೆ ಮಾಡಿ ಕರೆದಳು...ಮೀನಾಕ್ಷಮಾ ಅಗಲ ಕಿರಿದಾದ ಆ ಓಣಿಯುದ್ದಕ್ಕೂ ನಡೆದು, ಅಂಗಳ ತಲುಪಿದಳು. ಮುಂದುವರಿಯಲಾಗಲಿಲ್ಲ. ಗುಂಪಿನಿಂದ ದೂರವಾಗಿಯೇ ನಿಂತಳು.

"ಬನ್ನಿ ಮೀನಾಕ್ಷಮ್ಮ."

ಅಷ್ಟು, ದೂರ ಬಂದಿದ್ದುದೇ ಸಾಲದೆ?

"ಇಂಥ ಕಷ್ತ ಯಾರಿಗೂ ಬರಬಾರ್ದು, ಅಲ್ವೆ ಮೀನಾಕ್ಷಮ್ಮ?"

ಸಂಡೆಹವಾದರೂ ಏನು ಅದರಲ್ಲಿ?

ಯಾರೋ ಒಬ್ಬಳು ಕೇಳಿದಳು:

"ಒಳ್ಕ್ಕೆ ಹೋಗಿ ನೋಡಿದಿರಾ?"

"ಇಲ್ಲ" ಎಂದಳು ಮೀನಾಕ್ಷಮ್ಮ. ಅರೆ ಕ್ಷಣ ತಡೆದು ಆಕೆ ಎಂದಳು: "ಹೋಗಿ ನೋಡ್ತೀನಿ."

ನಡುಗುತ್ತಿತ್ತು ಆ ಸ್ವರ. ನಾರಾಯಣಿಯನ್ನು ವೈರಿಯಾಗಿ ಪರಿಗಣಿಸಿದ ತಾನು

ಪಾಪಿ ಎನ್ನುವ ಭಾವನೆ. ಒಮ್ಮೆಲೆ ಮೀನಾಕ್ಷಮ್ಮ ಸೆರಗನ್ನು ಕಣ್ಣಿಗೊತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು.

ಯಾರು ಬಾಯ್ತೆರೆದು ಮಾತನಾಡಲಿಲ್ಲ. ಆದರೆ ಮೊದಲೇ ತೀರ್ಮಾನವಾಗಿ

ತ್ತೇನೋ ಎನ್ನುವ ಹಾಗೆ, ಎಲ್ಲರೂ ನಾರಾಯಣಿಯ ಮನೆಯತ್ತ ಬಂದರು. ಮೀನಾಕ್ಷಮ್ಮ ಅವರನ್ನೆಲ್ಲ ಹಿಂಬಾಳಿಸಿದಳು.

ಅಷ್ಟರೆಲ್ಲೆ ಗಂದಸಿನ ಗೋಳೋ ಎಂಬ ಹೃದಯಭೇದಕ ಆರ್ತನಾದ ಆ

ಮನೆಯೊಳಗಿಂದ ಹೊರಟಿತು.

ಹೆಂಗಸರು ಬೇಗಬೇಗನೆ ಹೆಜ್ಜೆ ಹಾಕಿದರು. ನಾರಾಯನಣಿಯ ಗಂಡ ತನ್ನ

ಹೆಂಡತಿಯ ಬಳಿಯಲ್ಲಿ ದೇಹ ಮುದುಡಿಕೊಂಡು ಗೋಳಾಡುತ್ತಿದ್ದ.ಪುಟ್ಟ ಮಗು ತಾಯಿಯ ಎದೆಗೆ ಆತುಕೊಂಡು, ತನ್ನೆರಡೂ ಕ್ಶೀಣ ಅಂಗೈಗಳಿಂದ ಸುಕ್ಕುಗಟ್ಟಿದ್ದ ಸ್ತನವನ್ನು ಹಿಡಿದುಕೊಂಡಿತ್ತು.ತೆರೆದ ಕಣ್ಣುಗಳನ್ನೂ ಚಾಚಿದ ಕೈಗಳನ್ನು ಹಾಗೆಯೇ ಬಿಟ್ಟು ನಾರಾಯಣಿ ಹೊರಟ್ಟು ಹೋಗಿದ್ದಳು.

ಬೇಸಗೆಯ ಸೂರ್ಯ ಒಂದೆರಡು ಕಡೆ ಹಂಚಿನ ಎಡೆಗಳಿಂದ ಇಣಿಕಿ ನೋಡು

ತ್ತಿದ್ದ.ಆ ರಶ್ಮಿಗಳು ಆಕಾಶದಿಂದಿಳಿದು ಭೂಮಿ ತಲಪಿದ ಬಳಕಿನ ಹೊಗೆಹಾದಿಗಳ ಹಾಗಿದ್ದುವು.

ಸಾವಿನ ಮನೆ...ವಠಾರದ ಹದಿನಾಲ್ಕು ಮನೆಗಳಲ್ಲೊಂದರಲ್ಲಿ ಸಾವು..

ಹೆಂಗಸರೆಲ್ಲ ಕ್ಷಣಕಾಲ ಆ ಮನೆಯ ಬಾಗಿಲ ಬಳಿ ನಿಂತು ನಾರಾಯಣಿಯೆಂಬ

ಹೆಂಗಸೊಬ್ಬಳು ಬದುಕಿದ್ದ ಳೆಂಬುದಕ್ಕೆ ಸಾಕ್ಶಿಯಾಗಿದ್ದ ಮೃತದೇಹವನ್ನು ನೋಡಿ ಮುಖ ತಿರುಗಿಸಿ ಬದಿಗೆ ಸರಿದರು. ಅಳುವಿನ ಅಕ್ಷಯಪಾತ್ರೆಯಗಳಾಗಿದ್ದ ಅ ನಿಸ್ತೇಜ ಕಣ್ಣುಗಳಿಂದ ಕಂಬನಿ ಚಿಮ್ಮಿತು.

"ನನ್ನ ಬಿಟ್ಟು ಹೋದೆಯಲ್ಲೇ! ನಾನೇನು ಮಾಡ್ಲೇ ಇನ್ನು? ಊ...

ಊ...ಊ..."

ಮಗುವಿನ ಹಾಗೆ ಅಳುತ್ತಿದ್ದ ನಾರಾಯಣಿಯ ಗಂಡ.. ಆತ ಅಸಹಾಯನಾಗಿದ್ದ.

ಆತನ ಸಂಪಾದನೆಯೊಂದೇ ఆ ಸಂಸಾರಕ್ಕೆ ಆಧಾರವಾಗಿದ್ದರೂ ಕೈಹಿಡಿದವಳ ಮೇಲ್ವಿ ಚಾರಣೆಯಲ್ಲೇ ಆತ ಬದುಕಿದ್ದವನು. ಈಗ ಆಸರೆ ತಪ್ಪಿದ ಹಾಗೆ ಆಗಿತ್ತು ಅವನ ಸ್ಥಿತಿ. ಆ ನಾಲ್ವರು ಎಳೆಯ ಮಕ್ಕಳು-ಅವುಗಳಲ್ಲೆರಡು ಹೆಣ್ನು. ಸಂಪಾದನೆ ಶೂನ್ಯ.

"ಅಯ್ಯೋ! ಹೀಗಾಯ್ತಲ್ಲೇ ನನ್ಗತೀ...ನಾನೇನು ಮಾಡ್ಲೇ?"

ಆತನ ರೋದನ ನಾರಾಯಣಿಯ ಸಾವನ್ನು ಜಾಹೀರು ಮಾಡಿತು. ಗಂಡಸರೆಲ್ಲ

ಕೆಲಸಕ್ಕೆ ಹೋಗಿದ್ದ ನಡುಹಗಲು. ಆ ಓಣಿ ಅರ್ಧ ಕ್ಷಣದಲ್ಲಿ ವಠಾರದ ಹೆಂಗಸರಿಂದ ತುಂಬಿಹೋಯಿತು. ಒಂದೇ ಒಂದಾಗಿದ್ದ ಗಂಡು ಧ್ವನಿಯೊಡನೆ ಹೆಂಗಸರ ಕಲರವ ಬೆರತು, ಛಾವಣಿಗಳೆಡೆಯಿಂದ ತೂರಿಕೊಂಡು, ಎದುರುಭಾಗದ ಮುರುಕು ಮಹಡಿ ಯನ್ನೂ ದಾಟಿ, ಶ್ರೀರಾಮಪುರದ ಅಕ್ಕಿಪಕ್ಕದ ಬೀದಿಗಳಲ್ಲಿ ಮರಣವಾರ್ತೆಯನ್ನು ಹೊತ್ತು ಹರಿದಾಡಿತು.

ಎಲ್ಲರೂ ಹೆಬ್ಬಾಗಿಲಿನತ್ತ ನೋಡಿದರು. ಅಲ್ಲ್ಲಿ ಬಲಭಾಗದಲ್ಲೆ ವಠಾರದ

ಒಡತಿ ರಂಗಮ್ಮನ ಮನೆ.

"ರಂಗವ್ನೋರಿಗೆ ಹೇಳೀಮ್ಮಾ ಯಾರಾದ್ರೂ."

ಹೋಗಿ ಹೇಳುವ ಅಗತ್ಯವಿರಲಿಲ್ಲ. ನಿಂತಿದ್ದ ಹೆಂಗಸರು ಮಕ್ಕಳೆಡೆಯಿಂದ

ದಾರಿ ಬಿಡಿಸಿಕೊಂಡು, ಅವರು ಬಂದರು. ಊರುಗೋಲು ವಠಾರದ ಕೊನೆಯಲ್ಹದ್ದ

ನಾರಾಯಣಿಯ ಮನೆಯ ಮುಂದೆ ನಿಂತಿತು.

ಪ್ರಯತ್ನ ಪೂವರ್ಕವಾಗಿ ಬೆನ್ನನ್ನು ನೇರಗೊಳಿಸಿ, ಜೋಲು ಮೋರೆ ಹಾಕಿ

ಸುತ್ತಲೂ ನೋಡಿ, ರಂಗಮ್ಮ ನಿಟ್ಟುಸಿರುಬಿಟ್ಟರು.

ಎಲ್ಲರ ಹಾಗೆ ರಂಗಮ್ಮ ಅಳುವುದರಲ್ಲಿ ಅರ್ಥವಿರಲಿಲ್ಲ. ಅರುವತ್ತೈದು ವರ್ಷ

ಗಳ ಅವಧಿಯಲ್ಲಿ ಅವರೆಷ್ಟೋ ಸಾವು ಎಷ್ಟೋ ಹುಟ್ಟು ನೋಡಿದ್ದರು. ಅಲ್ಲದೆ, ವಯಸ್ಸಿನಲ್ಲಿ ಅವರು ಎಲ್ಲರಿಗಿಂತಲೂ ಹಿರಿಯರು. ವಠಾರದ ಒಡತಿ. ಅವರು ಅಳುವಂತಿಲ್ಲ.

ಎರಡು ಮೂರು ವರ್ಷಗಳಿಂದ ಆ ವಠಾರಕ್ಕೆ ಯಮರಾಯ ಬಂದಿರಲಿಲ್ಲ. ಈ

ವರ್ಷ ಯಾಕೊ_

ಯಾರೋ ಅಂದರು:

"ಬುಧವಾರವೇ ಸತ್ಯ, ನಡು ಹಗಲಲ್ಲಿ, ಪುಣ್ಯವಂತೆ."

ಪಾಪ ಪುಣ್ಯಗಳ ಯೋಚನೆ ರಂಗಮ್ಮನನ್ನು ಕಾಡುತ್ತಿರಲಿಲ್ಲ, ಸಾವು ಆ

ವಠಾರದ ದಿನನಿತ್ಯದ ಜೀವನಕ್ರಮವನ್ನು ಸ್ತ್ರಬ್ಧಗೊಳಿಸಿತ್ತು ಸತ್ತಿದ್ದ ನಾರಾಯಣಿ ಯನ್ನು ಹೊರಕ್ಕೆ ಸಾಗಿಸುವವರೆಗೂ ಆ ಅವ್ಯವಸ್ಥೆ ಸರಿಹೋಗುವಂತಿರಲಿಲ್ಲ, ಒಬ್ಬ ಮನುಷ್ಯ ಸತ್ತ ಮೇಲೂ ಮಾಡಬೇಕಾದ ಕ್ರಿಯೆಗಳಿದ್ದುವು

ಸಾವಿನ ಮನೆಯೊಳಕ್ಕೆ ತಲೆಹಾಕಿ ರಂಗಮ್ಮ ಹೇಳಿದರು:

ರಂಗಮ್ಮನ ಸಹಾನುತಾಪದ ಮಾತು ಕೇಳಿ ನಾರಾಯಣಿಯು ಗಂಡ ಮತ್ತೊ

ಗಟ್ಟಿಯಾಗಿ ರೋದಿಸಿದ.

ಮಿನಾಕ್ಷಮ್ಮ ಒಳಹೋದಳು, ಚಲಿಸಿದೆ ಮಲಗಿದ್ದ ತಾಯಿಯ ಬಳಿ ಆಳುತ್ತ

ಲಿದ್ದ ಎಳೆಯ ಕೂಸನ್ನು ಎತ್ತಿಕೊಂಡು ಹುರಬಂದಳು.

"ಎಲ್ಲಿ ಬೇರೆ ಹುಡುಗರು?" ಎಂದು ರಂಗಮ್ಮ ಸುತ್ತಲೂ ನೋಡಿ ಕೇಳಿದರು.

"ದೊಡ್ಡೋನು ಸ್ಕೂಲಿಗೆ ಹೋಗಿದಾನೇನೋ?"

"ఇల్ల, ಚಿಕ್ಕೋವ್ನ ಆಡಿಸ್ತಾ ಇಲ್ಲೆ ಇದ್ದಾಂದ್ರೆ."

ಸಾಯೋ ಘಳಿಗೇಲಿ ಹತ್ತಿರ ಇದ್ದಿಲ್ಲ, ನಿರ್ಭಾಗ್ಯ ಮುಂಡೇವು."

“ಹೋಗ್ರೇ, ಯಾರಾದರೂ ಕರಕೊಂಬನ್ನಿ. ರುಕ್ಕೂ, ನೀನು ಹೋಗಮ್ಮ."

"ಹುಂ.. ಒಬ್ಬರೂ ಇಲ್ವಲ್ಲ ಇಲ್ಲಿ!" ಎಂದರು ರಂಗಮ್ಮ, ಆ ಧ್ವನಿಯಲ್ಲಿ

ಬೇಸರವಿತ್ತು, ಅಷ್ಟು ಜನ ಅಲ್ಲಿದ್ದರೂ ಅವರ ದೃಷ್ಟಿಯಲ್ಲಿ ಒಬ್ಬರೂ ಅಲ್ಲಿರಲಿಲ್ಲ' ಒಬ್ಬ ಗಂಡಸೂ ಅಲ್ಲಿರಲಿಲ್ಲ.

"ದಿನಾ ಗುಂಡಣ್ನನಾದರೂ ಇರ್ತಿದ್ದ. ಎಲ್ಲೋದ್ನೋ ಇವತ್ತು?"

ಗುಂಡಣ್ಣ ತನ್ನ ತಮ್ಮನ ಸಂಪಾದನೆಯನ್ನು ಅವಲಂಬಿಸಿ ಪರೋಪಕಾರಿಯಾಗಿ

ಮನೆಯಲ್ಲೇ ನಿಶ್ಚಿಂತೆಯಿಂದ ದಿನ ಕಳೆಯುತ್ತಿದ್ದ ಉಂಡಾಡಿ.

"ರಾಜಮ್ಮ. ಎಲ್ಲ್ಹೋದ್ನೇ ನಿನ್ಮಗಾ?"

"ಪಕ್ಕದ್ಮನೇಲಿ ಇಸ್ಪೀಟಿಗೆ ಕೂತಿದಾನೇನೊ?"

ರಾಜಮ್ಮ ಹೆಬ್ಬಾಗಿಲನ್ನು ದಾಟಿ ಹೊರ ಅಂಗಳಕ್ಕೆ ಹೋಗಿ ಕರೆದಳು.

"ಗುಂಡಾ...ಏ ಗುಂಡೂ!"

ಬೀದಿಯ ಆಚೆಗಿದ್ದ ಮನೆಗಳಿಂದಲೂ ಜನ ವಠಾರದತ್ತ ನೋಡುತ್ತಿದ್ದರು.

ಬೀದಿ ಕೂಳಾಯಿಯ ಪಕ್ಕದಲ್ಲಿದ್ದ ಮನೆಯಾಕೆ ಹಿತ್ತಲ ಗೋಡೆಗೆ ಎದೆಯಾನಿಸಿ ನಿಂತು ಕೇಳಿದಳು:

"ಏನ್ರೀ ರಾಜಮ್ಮ? ಏನು ಗಲಾಟೆ?"

"ನಾರಾಯಣಿ ಹೊರಟ್ಹೋದ್ಲು ಕಣ್ರೀ."

"ಓ!"

ದಿನವೂ ಮನೆಯಲ್ಲೆ ಇರುತ್ತಿದ್ದ ಗುಂಡಣ್ಣ ಆ ಹೊತ್ತೇ ಎಲ್ಲಿಗೋ ಎದ್ದಿರ

ಬೇಕೇ?

ಗುಂಡಣ್ಣ ಬರಲಿಲ್ಲ. ಆದರೆ ಅಲ್ಲೇ ಕೆಳಗೆ ಅಂಗಡಿ ಬೀದಿಯಲ್ಲಿದ್ದ ನಾರಾ

ಯಣಿಯು ಮಕ್ಕಳು ಓಡಿ ಬಂದುವು. ಚಿಕ್ಕ ಹುಡುಗಿಗೂ ಹುಡಗನಿಗೂ ಅರ್ಥವಾಗ ಲಿಲ್ಲ. ದೊಡ್ಡವನಿಗೆ-ಪುಟ್ಟನಿಗೆ-ಅರ್ಥವಾಯಿತು. ಆದರೆ, ಮೂವರೂ ಅತ್ತರು. ಚಿಕ್ಕವರು ಗಟ್ಟಿಯಾಗಿ, ದೊಡ್ಡವನು ಮೆಲ್ಲ ಮೆಲ್ಲನೆ, ಬಿಕ್ಕಿ ಬಿಕ್ಕಿ

ಮಿನೂನಾಕ್ಷಮ್ಮ ಸಮಿಪದಲ್ಲಿ ಇದ್ದ ಶಾಲೆಗೆ ಹೋಗಿ ತನ್ನ ಮಗನನ್ನು ಕರದು

ತಂದಳು. ಆತ ಪುಸ್ತಕಗಳನ್ನು ತಾಯಿಯ ವಶಕ್ಕೊಪ್ಪಿಸಿ, ತಂದಯನ್ನು ಕರೆತರ ಲೆಂದು ಒಂದೇ ಉಸಿರಿಗೆ ಮಲ್ಲೇಶ್ವರದ ಅಂಗಡಿ ಬೀದಿಗೆ ಓಡಿದ.

ನಾರಾಯಂಇಯ ಮನೆಯ ಎದುರು ಒಂದೇ ಗುಂಪಾಗಿದ್ದ ಹೆಂಗಸರು ದೂರ

ಸರಿದು ಬೇರೆ ಬೇರೆ ಗುಂಪುಗಳಾದರು.

ರಂಗಮ್ಮ ವಿಳಿಪಿಳಿ ಕಣ್ನು ಬಿಡುತ್ತ ಓಣಿಯ ಉದ್ದಕ್ಕೂ ಎರಡು ಸಾರ ನಡೆದರು.

ಏನನ್ನಾದರೂ ಆಳವಾಗಿ ಯೋಚಿಸುವಾಗಲೆಲ್ಲ ಹಾಗೆ ಅವರು ನಡೆಯುತ್ತದ್ದರು.

ಒಂದು ಬಡ ಸಂಸಾರದಲ್ಲಾದ ಸಾವಿನ ಫಲವಾగి ಹುಟ್ಟಿದ ಯೋಚನೆಗಳು...

ಯೋಚಿಸುತ್ತಲಿದ್ದ ರಂಗಮ್ಮ ನಾರಾಯಣಿಯ ಮನೆಯ ಮುಂದೆ ನಿಂತು ಹೇಳಿದರು;

"ಯಾಕಪಾ ಇನ್ನೂ ಅಳ್ತಾನೇ ಇದೀಯಾ? ಏಳು...ನನ್ನಂಥ ಪಾಪಿಯಲ್ಲ

ನಾರಾಯణి...ಪುಣ್ಯವಂತೆ...ಕೆಳ್ಕೊಂಡು ಬಂದಿದ್ಲು ಇಂಥ ಸಾವು ಬರ್ಲೀವಂತ.... ಏಳು.. ಮಕ್ಕಳ್ನ ನಮ್ಮನೇಲಿ ಕೂಡಿಸು,"

ಆದರೆ ಆ ನಾರಾಯಣಿಯ ಗಂಡ ದಿಗ್ಭ್ರಮೆಗೊಂಡವನ ಗೋಡೆ

ಗೊರಗಿ ಕುಳಿತೇ ಇದ್ದ,

ಪಕ್ಕದ ಮನೆಯಾಕೆ ಬಂದು, ಅಳುತ್ತಿದ್ದ ಎಳೆದು ಎಬ್ಬರು ಮಕ್ಕಳನ್ನು ಎಳೆದು

ಕೊಂಡು ತನ್ನ ಮನೆಗೆ ಹೋದಳು. ಪುಟ್ಟು ಮಿನಾಕ್ಷಮ್ಮನ ಬಳಿ ಇದ್ದ ಪಾಪನನ್ನೆತ್ತಿ ಕೊಂಡು ಓಣಿಯಲ್ಲಿ ನಿಂತ.

ರಂಗಮ್ಮ ಮನೆಯೊಳಕ್ಕೆ ಕಾಲಿಟ್ಟು ಆಡುಗೆಯ ಭಾಗದತ್ತ ನೋಡಿದರು. ಒಲೆ

ಹೊಗೆಯಾಡುತ್ತಿರಲಿಲ್ಲ. ಎದುರುಗಡೆಯ ಮೀನಾಕ್ಷಮ್ಮನಿಗೆ ಹೇಳಿದರು:

"ಒಂದಿಷ್ಟು ಕೆಂಡ ಎತ್ಕೊಂದಡ್ಬಾ ತಾಯಿ."

ಸಾವಿನ ಮನೆಯ ಮುಂದೆ ಕೆಂಡಗಳು ಹೊಗೆಯ ಹೊದಿಕೆಯ ಮರೆಯಲ್ಲಿ

ಮರುಗಿದುವು.

ಶ್ರೀನಿವಾಸಶೆಟ್ಟರೆ ಅಂಗಡಿಯಲ್ಲಿ ಲೆಕ್ಕ ಬರೆಯುವ ಗುಮಾಸ್ತೆಯಾದ ಸುಬ್ಬು

ಕೃಷ್ಣಯ್ಯ ತನ್ನ ಹೆಂಡತಿ ಮೀನಾಕ್ಷಮ್ಮನ ಸಂದೇಶ ತಲಪಿದೊಡನೆ ಹೊರಟು ಬಂದ. ಹಿಂದಿನ ರಾತ್ರೆಯೇ ಮೀನಾಕ್ಷಮ್ಮ "ಪಾಪ! ಕಾಹಿಲೆ ಜಾಸ್ತಿಯಾಗಿದೆ. ಇವತ್ತು ಬೆಳ ಗಾಗೋದು ಕಷ್ಟ" ಎಂದಿದ್ದಳು. ಬೆಳಗಾಗಿತ್ತು. ಬೆಳಗಾದ ಮೇಲೆಯೇ ಸತ್ತಿದ್ದಳು ನಾರಾ ಯಣಿ. ಸತ್ತವಳಾಗಲೀ ಉಳಿದವರುವ ಆಕೆಯ ಸಂಸಾರವಾಗಲೀ ಸುಬ್ಬುಕೃಷ್ಣಯ್ಯನಿಗೇನೂ ಆತ್ಮೀಯವಾಗಿರಲಿಲ್ಲ. ಆದರೂ ಹೆಂಡತಿ ಕರೆದಳೆಂದು ಒಡನೆಯೆ ಅವನು ಹೊರಟಿದ್ದ.

ವಠಾರದಲ್ಲಿ ಆತನನ್ನು ಕಂಡೊಡನೆ ರಂಗಮ್ಮ ಹೇಳಿದರು:

"ಬಂದೆಯೇನಪ್ಪಾ, ಬಾ. ಯಾರೂ ಇಲ್ವಲ್ಲಾಂತಿದ್ದೆ, ಬಾ."

ಸುಬ್ಬುಕೃಷ್ಣಯ್ಯ ನೇರವಾಗಿ ತನ್ನ ಮನೆಯೊಳಕ್ಕೆ ಹೋಗಿ ಟೋಪಿಯನ್ನು

ಗೂಟದ ಮೇಲೆ ತೂಗಹಾಕಿದ. ಆಗ ಏನಾದರೂ ಕೆಲಸ ಮಾಡಲು ಅಲ್ಲಿದ್ದ ಗಂಡಸು ತನ್ನ ಪತಿಯೊಬ್ಬನೇ ಎಂದು, ಮೀನಾಕ್ಷಮ್ಮನಿಗೆ ಆ ಸನ್ನಿವೇಶದಲ್ಲೂ ತುಸು ಹೆಮ್ಮೆ.

ಆತ ಹೇಳಿದ:

"ಎಷ್ಟೊತ್ತಾಯ್ತು?"

"ಹನ್ನೊಂದಾಗಿತ್ತೊಂತ ಕಾಣುತ್ತೆ."

"ಈಗೇನ್ಮಾಡ್ಬೇಕೂಂತೀಯಾ?"

"ರಂಗಮ್ನೋರ್ನ ಕೇಳಿ."

ಅಷ್ಟರಲ್ಲಿ ಅಲ್ಲಿಗೇ ನಡೆದು ಬಂದ ರಂಗಮ್ಮ ಮೆಲುದನಿಯಲ್ಲಿ ಸಮಾಲೋಚನೆ

ನಡೆಸಿದರು.

ವಠಾರಕ್ಕೆ ಗಂಡಸರು ಹಿಂತಿರುಗುತ್ತಿದ್ದುದು ಸಂಜೆ ಐದು ಗಂಟೆಯ ಬಳಿಕ.

ಹೇಳಿ ಕಳುಹಿಸುವಂಥ ಸಂಬಂಧಿಕರು ಯಾರೂ ಸತ್ತ ಮನೆಯವರಿಗೆ ಇರಲಿಲ್ಲ, ಕತ್ತ ಲಾಗುವುದರೊಳಗೇ ಶವಸಂಸ್ಕಾರ ಸಾಧ್ಯವಿತ್ತು. ಸಿದ್ಧತೆಯ ಸಣ್ಣ ಪುಟ್ತ ವಿವರಗಳನ್ನು ನಾರಾಯಣಿಯ ಗಂಡನ ಸೊರಗಿದ ಜೀವ ಬಾಗಿಲಿಗೆ ಒರಗಿ ನಿಂತಿತ್ತು. ರಂಗಮ್ಮ ಗ್ಟ್ತಿ ಮನಸ್ಸು ಮಾಡಿ ಆತನನ್ನು ಉದ್ದೇಶಿಸಿ ಕೇಳಿದರು: ರಂಗಮ್ಮನ ವಠಾರ

“ಏನಪಾ, ದುಡ್ದುಗಿಡ್ದು ಏನಾದರೂ ಇಟ್ಟಿದೀಯಾ?"

ಆತ ಮುಖ ತಿರುಗಿಸಿಕೊಂಡು ಮತ್ತೊಮ್ಮೆ ಗಟ್ಟಿಯಾಗಿ ರೋದಿಸತೊಡಗಿದ.

ಸುಬ್ಬಕೃಷ್ಣಯ್ಯನೇನೋ ಅಂದ

ಏನಾದರೂ ಮಾಡೋಣ, ಏನಾದರೂ ಮಾಡೋಣ."

ಆದರೆ ಏನು ಮಾಡಬೇಕೆಂಬುದು ಮಾತ್ರ ಆತನಿಗೆ ಹೊಳೆಯಲಿಲ್ಲ. ತಿಂಗಳ

ಕೊನೆ...ಕಷ್ಟ ಕಾಲ...

ಬಾಪ್ಪ." ಎ೦ದೂ ಸುಬ್ಬುಕೃಷ್ಣಯ್ಯನಿಗೆ ಸನ್ನೆ ಮಾಡುತ್ತ ರಂಗಮ್ಮ ತಮ್ಮ

ಮನೆಯತ್ತ ನಡೆದರು. ನಡೆಯುತ್ತ ಅವರು ಇಳಿದನಿಯಲ್ಲಿ ಗೊಣಗಿದರು:

ಮೂರು ತಿಂಗಳಿಂದ ಬಾಡಿಗೇನೇ ಕೊಟ್ಟಿಲ್ಲ, ಬಡೀಗಂಡ, ಐವತ್ತೊಂದು

ರೂಪಾಯಿ!... ಈಗ ಹೆಣ ಎಥಾಕೋ ಕೆಲಸಾನೂ ನಾವೇ ಮಾಡ್ಬೇಕು..ಹುಂ.."

ರಂಗಮ್ಮನವರೇ ತಮ್ಮ ಕತ್ತಲು ಮನೆಯನ್ನು ಹೊಕ್ಕು, ತಮ್ಮ ಕೊರಳಿನಲ್ಲಿದ್ದ

ಬೀಗದ ಕೈ ತಿರುವಿ, ಹಳೆಯ ಕಬ್ಬಿಣದ ಪೆಟ್ತಿಗೆಯ ಬಾಗಿಲು ತೆರದು, ಐದು ರೂಪಾಯಿ ಯಿಯ ಒಂದು ನೋಟನ್ನು ಎತ್ತಿಕೊಂಡರು. ಬಾಗಿಲಲ್ಲೆ ನಿಲ್ಲಿಸಿ ಬಂದಿದ್ದ ಸುಬ್ಬ ಕೃಷ್ಣಯ್ಯನಿಗೆ ಅದನ್ನು ಒಯ್ದುಕೊತ್ತರು. ಕೊಡುತ್ತ ಅವರೆಂದರು:

"ಪಾಪ!ಕಷ್ಟ್ದಲ್ಲಿದ್ದಾನೆ, ಏಳೇಳು ಜನ್ಮದ ವೈರಿಗೂ ಬೇಡ ಅ ಶಿಕ್ಷೆ"

ಸುಬ್ಬುಕೃಷ್ಣಯ್ಯ ತಲೆತುರಿಸುತ್ತ ನಿಂತ. ಎಲ್ಲಿಗೆ ಸಾಕು ಆ ಐದು ರೂಪಾಯಿ?

"ಇಷ್ಟಿತ್ಲಿ ನನ್ನ ಲೆಕ್ಕಕ್ಕೆ. ಉಳಿದಿರೋದು ನೀವೆಲ್ಲ ಸೇರ್ಕೊಂಡು ಏನಾದರೂ ಮಾಡಿ."

ಆ ಏರ್ಪಾಟಿಗೆ ಮಹಾ ಯಶಸ್ಸು ದೊರೆಯದೇ ಹೋದರೂ ಅದು ಪೂರ್ತಿ

ವಿಫಲವಾಗಲಿಲ್ಲ. ಕೆಲ ಮನೆಯವರು ಗಂಡಸರು ಬರಲೆಂದರು. ಉಳಿದವರು ಕೆಲವರು ಗಂಟೆಗೆ ಗಂಟುಹಾಕಿ ಕೂಡಿಟ್ಟಿದ್ದ ಚಿಲ್ಲರೆ ಹಣವನ್ನು ತೆಗೆದು ಕೊಟ್ಟರು.

ರಂಗಮ್ಮ ಹೆಬ್ಬಾಗಿಲ ಬಳಿಯಲ್ಲಿ ನಿಂತು ತಮ್ಮ ವಠಾರಕ್ಕೆಲ್ಲ ಕೇಳಿಸುವ ಹಾಗೆ

ನುಡಿದರು"

"ಕೊಡಿಯಪ್ಪಾ ಕೊಡಿ ಕಷ್ಟ ಕಾಲದಲ್ಲಿ ಮನುಪ್ನಿಗೆ ಮನುಷ್ನೇ ಆಗ್ಬೇಕಲ್ವೆ

ಮರ ನೆರವಾಗುತ್ಯೆ?"

ಅಷ್ಟರಲ್ಲ್ಲೆ ಗುಂಡಣ್ಣ ಬಂದ, "ಹೆಆಆನ ಹೊರೋಕೆ ಆದೀಯಾ ನೀನು" ಎಂಬ

ಬೈಗಳನ್ನು ಎಷ್ಟೋ ಸಾರಿ ತಾಯಿಯ ಕೈಯಲ್ಲಿ ಆತ ಕೇಳಿದ್ದ. ಆದರೆ ಅದು ನಿಜ ವಾಗಿರಲಿಲ್ಲ. ಸ್ವಂತಕ್ಕೆ ಕಾಸಿನ ಪ್ರಯೋಜನವಾಗದೆ ಹೋದರೂ ಪರೋಪಕಾರ ಮಾಡುವುದರಲ್ಲಿ ಆತನದು ಎತ್ತಿದ ಕೈ. ಈಗ, ಮುಟ್ಟಿದರೆ ನುರಿದು ಬೀಳುವಂತಹ ಸೈಕಲೊಂದನ್ನು ದೊರಕಿಸಿಕೊಂಡು, ನಗರದ ಬೇರೆ ಬೇರೆ ಭಾಗಗಳಲ್ಲಿ ಮಡಿಯುತ್ತಿದ್ದ ವಠಾರದ ನಾಲ್ಕಾರು ಜನ ಗಂಡಸರಿಗೆ ಸಾವಿನ ಸುದ್ದಿ ತಿಳಿಸಲು ಆತ ಧಾವಿಸಿದ.

ನಾರಯಣಿಯನ್ನು ಬೀಲ್ಕೊಡದೆ ಆ ವಠಾರದ ಜನರಿಗೆ ಊಟವಿಲ್ಲ. ಪ್ರತಿ

ಯೊಂದು ಮನೆಯಲ್ಲೂ ಅಡುಗೆ ಅರ್ಧಮರ್ಧವಾಗಿಯೇ ಉಳಿದಿತ್ತು. ಆದರೆ ಹಸಿದ
ಮಕ್ಕಳು_ಯಾಕೆ, ದೊಡ್ಡವರು ಕೂದ_ಬರಿ ಹೊಟ್ಟೆಯಲ್ಲೇ ಇರುವುದು ಸಾಧ್ಯ

ವಿರಲಿಲ್ಲ.

ಒಬ್ಬಾಕೆಯೆಂದಳು:

"ಸಾವಿನ ಮನೇ ಮುಂದುಗಡೆ ನೀರು ಹರಿತೀದೆಯಲ್ಲಾ. ಈಚೆ ಪಕ್ದಲ್ಲಿ

ದ್ಕೊಂಡು ಊಟ ಮಾಡ್ಬೌದು ಕಣ್ರೀ..."

ಎರಡು ಮೂರು ಬಚ್ಚಲುಗಳ ನೀರು ದುರ್ಗಂಧ ಬೀರುತ್ತ ಒಂದು ಸಾಲಿನ

ಮನೆಗಳ ಮುಂದಿನಿಂದ ಸಣ್ಣಗೆ ಹರಿಯುತ್ತಿದ್ದುದು ನಿಜ.

ವಠಾರಕ್ಕೆ ಹೊಸದಾಗಿ ಬಂದಿದ್ದ ಎಳೆಯ ಗೃಹಿಣಿ, ಇನ್ನು ಹತ್ತು ದಿನ ಉಪ

ವಾಸವಿರಬೇಕಾಗುವುದೇನೋ ಎಂಬಂತೆ, ತನ್ನ ಬಾಗಿಲ ಬಳಿ ಮುಖ ಸಪ್ಪಗೆ ಮಾಡಿ

ಕೊಂಡು ನಿಂತಳು.

ಇನ್ನೊಬ್ಬಳೆಂದಳು:

"ಈ ಮಕ್ಕಳಿಗೇನ್ರೀ ಮಾಡೋದು?"

ಎಲ್ಲ ಹೆಂಗಸರು ರಂಗಮ್ಮನತ್ತ ನೋಡಿದರು, ತೀರ್ಪಿಗಾಗಿ. ರಂಗಮ್ಮ ಪ್ರತಿ

ಯೊಂದು ಮಾತನ್ನೂ ತೂಗಿ ತೂಗಿ ಹೇಳಿದರು:

"ಈಗಿನ ಕಾಲ್ದಲ್ಲಿ ಅಷ್ಟೆಲ್ಲ ಕಟ್ಟುನಿಟ್ಟಾಗಿ ಹ್ಯಾಗೆ ಇರೋಕಾಗುತ್ತೆ? ಮಕ್ಕಳು

ಊಟ ಮಾಡ್ಲಿ. ದೊಡ್ಡೋರಲ್ಲಿ ಗಟ್ಟಿಮುಟ್ಟಾಗಿರೋರು ನಿರಾಹಾರವಾಗಿದ್ದ

ರಾಯ್ತು."

......ರಂಗಮ್ಮ ಗಟ್ಟಿಮುಟ್ಟಾಗಿರಲಿಲ್ಲ. ಆದರೂ ಅವರು ನಿರಾಹಾರಿಯಾಗಿ

ಉಳಿದರು.

......ಬಿಸಿಲಿನ ತಾಪ ಕಡಿಮೆಯಾದಂತೆ, ಸಂಜೆಯಾದಂತೆ, ವಠಾರಕ್ಕೆ ಗಂಡಸರು

ಬರತೊಡಗಿದರು. ಎಲ್ಲೆಲ್ಲಿಯೋ ಅಲೆದು ರಾತ್ರೆ ಮನೆ ಸೇರುವವರಲ್ಲೂ ಕೆಲವರು

ಆ ದಿನ ಬೇಗನೆ ಮನೆಗೆ ಬಂದರು.

ಪ್ರಯಾಣಕ್ಕೆ ಮುನ್ನ ಮೀಯಿಸಲೆಂದು ನಾರಾಯಣಿಯನ್ನು ಹೊರಕ್ಕೆ ತಂದು

ದಾಯಿತು. ರಂಗಮ್ಮ ಎಂದಿಗಿಂತ ಮುಂಚಿತವಾಗಿಯೇ ಕೊಳಾಯಿಯ ಬೀಗ ತೆರೆದರು. ಸಾಮಾನ್ಯವಾಗಿ ಮೂರು ಬಿಂದಿಗೆ ನೀರು ವಠಾರದ ಪ್ರತಿಯೊಂದು ಮನೆಗೂ ಉಚಿತ. ಅನಂತರದ ಪ್ರತಿ ಮೂರು ಬಿಂದಿಗೆಗೂ ತಿಂಗಳಿಗೆ ಎಂಟಾಣೆ. ಆದರೆ ಈ ದಿನ ಅಂತಹ ಲೆಕ್ಕಚಾರವಿಲ್ಲ.

ರಂಗಮ್ಮನೇ ಅಂದರು:

"ತಗೋಳೀಪ್ಪಾ, ಎಷ್ಟು ಬೇಕಾದರು ತಗೊಂಡು ಹೋಗಿ ನೀರು."

ನಿರ್ಜೀವವಾಗಿದ್ದ ನಾರಾಯಣಿಯ ಮುಖದ ಮೇಲೆ ನೆಮ್ಮದಿ ಇರಲಿಲ್ಲ.

ನ್ಯಾಯವಾದ ಮುಕ್ತಾಯವಿಲ್ಲದೆ ನಡುವಿನಲ್ಲೇ ಕಡಿದು ಹೋದ ಹಾಗಿತ್ತು ಆ ದೇಹ. ಬದುಕಿನ ಅಪೂರ್ಣ ಆಸೆಗಳು ಎರಡೂ ಕಣ್ಣುಗಳಿಂದ ಇಳಿದು ಕೆನ್ನೆಗಳ ಮೇಲೆ ಆಳ
ವಾದ ಕಣಿವೆ ತೋಡಿದ್ದುವು.
ಆದರೂ ಆ ದೇಹಕ್ಕೆ ಅರಸಿನ ಲೇಪಿಸಿದರು. ಆಕೆಯ ಗಂಡನ ಅಪೇಕ್ಷೆಯಂತೆ
ಮದುವೆಯ ಕಾಲದಲ್ಲಿ ಆಕೆಯುಟ್ಟಿದ್ದ ಧರ್ಮಾವರದ ಸೀರೆಯನ್ನೇ ಉಡಿಸಿದರು; ಉಡಿ
ತುಂಬಿಸಿದರು; ಹಣೆಗೆ ಕುಂಕುಮವಿಟ್ಟರು.
ಆ ದೇಹ ನಾಲ್ವರ ಭುಜಗಳನ್ನು ಆವರಿಸಿದಾಗ ಮತ್ತೊಮ್ಮೆ ರೋದನದ ಅಲೆ
ಗಳು ವಠಾರದ ಇಕ್ಕಟ್ಟಾದ ಗೋಡೆಗಳಿಗೆ ಅಪ್ಪಳಿಸಿದುವು.
ಬಾಗಿಲ ಬಳಿ ನಡೆಗೋಲನ್ನೂರಿ ನಿಂತ ರಂಗಮ್ಮನ ಬಾಯಿಯಿಂದ ಅಸ್ಪಷ್ಟವಾಗಿ
ಮಾತುಗಳು ಹೊರಬಿದ್ದುವು:
"ಹೋಗ್ತೀಯಾ ನಾರಾಯಣೀ...ಹೋಗ್ತೀಯಾ..."
ನಾರಾಯಣಿ ರಂಗಮ್ಮನ ವಠಾರವನ್ನು ಬಿಟ್ಟು ಹೋದಳು. ಸೂರ್ಯ ಮರೆ
ಯಾಗಿ ಕತ್ತಲು ಕವಿಯಿತು. ಬೀದಿಯ ವಿದ್ಯುದ್ದೀಪಗಳು ಹತ್ತಿಕೊಂಡುವು.
ರಂಗಮ್ಮ ವಠಾರದ ಹಿತ್ತಿಲ ಗೋಡೆಗೊರಗಿ, ಆಳಕ್ಕೆ ಇಂಗಿದ್ದ ಕಣ್ಣುಗಳಿಂದ
ಆಕಾಶದತ್ತ ಶೂನ್ಯನೋಟ ಬೀರುತ್ತ ನಿಂತೇ ಇದ್ದರು.
ಬೇರೆ ದಿನವಾಗಿದ್ದರೆ ವಠಾರದ ಯಾರಾದರೂ ರಂಗಮ್ಮನ ಬಳಿಗೆ ಹೋಗಿ,
"ದೀಪ ಹಾಕ್ತೀರಾ?"ಎಂದು ಕೇಳುತ್ತಿದ್ದರು.
ಈ ದಿನ ಹಾಗೆ ಕೇಳಲು ಯಾರೂ ಬರಲಿಲ್ಲ.
"ಕತ್ತಲಾಯ್ತು" ಎಂದು ರಂಗಮ್ಮನೇ ತಮ್ಮಷ್ಟಕ್ಕೆ ಅಂದುಕೊಂಡರು. ಮೆಲ್ಲನೆ
ತಮ್ಮ ಮನೆಯತ್ತ ಸಾಗಿ 'ದೀಪ ಹಾಕಿ'ದರು. ಅಲ್ಲಿದ್ದುದು ಮಂದವಾದ ವಿದ್ಯು
ದ್ದೀಪ-ಮನೆಗೊಂದರಂತೆ. ಆಗಲೆ ಗುಂಡಿಯೊತ್ತಿಯೇ ಇದ್ದ ಮನೆ ಮನೆಗಳಲ್ಲೆಲ್ಲ ಒಮ್ಮೆಲೆ
ಬೆಳಕು ಮೂಡಿತು.
ಆದರೆ ವಠಾರದ ಹದಿನಾಲ್ಕನೆಯ ಮನೆಯಲ್ಲಿ ಯಾರೂ ಗುಂಡಿಯೊತ್ತಲಿಲ್ಲ,
ಅಲ್ಲಿ, ನಾರಾಯಣಿ ಮಲಗಿದ್ದ ಕಡೆ ತಲೆಯ ದಿಕ್ಕಿನಲ್ಲಿ, ಹಣತೆಯೊಂದು ತೂರಾಡಿತು.
ಮನೆ ಬೆಳಗುವ ಗೃಹಿಣಿ ಅಲ್ಲಿರಲಿಲ್ಲ.