ರಂಗಮ್ಮನೂ ಅವನನ್ನು ಹಿಂಬಾಲಿಸಿಕೊಂಡು ಬಂದರು.
"ಗಾಡಿ ಬಂತು ಕಣೋ ಗುಂಡಣ್ಣ ."
ಯಾವ ಸಂದರ್ಭದಲ್ಲೂ 'ಸಹಾಯ ಮಾಡು' ಎಂದು ಬಾಯಿ ಬಿಚ್ಚಿ ಗುಂಡಣ್ಣ
ನಿಗೆ ಹೇಳಬೇಕಾದ್ದೇ ಇರಲಿಲ್ಲ.
ಮನೆಯ ಎದುರು ಭಾಗದ ಕಿಟಕಿಗಳಿಂದಲೂ ಮಹಡಿಯ ಮೇಲಿನಿಂದಲೂ
ವಠಾರದ ಸದಸ್ಯರ_ಹೆಂಗಸರು ಮಕ್ಕಳ_ಮುಖಗಳು ಕಾಣಿಸಿದುವು. ಹಿಂಭಾಗದಲ್ಲೂ
ಮನೆಯೊಡತಿಯರು ಬಾಗಿಲಿನಿಂದ ಹೊರಕ್ಕೆ ಕತ್ತು ಚಾಚಿ ಬೀದಿಯತ್ತ ನೋಡಿದರು.
ಕೆಲ ಹುಡುಗರು ಹುಲ್ಲು ಜಗಿಯುತ್ತ ನಿಂತಿದ್ದ ಎತ್ತಿನ ಬಳಿಯಲ್ಲೂ ಕೆಳಕ್ಕೆ ಇಳಿಸಿದ
ಸಾಮಾನುಗಳ ಸುತ್ತಲೂ ನಿಂತರು.
ಬೇರೆಯವರು ಮೊದಲು ಇದಿರ್ಗೊಂಡುದಾಯಿತೆಂದು ಸ್ಪಷ್ಟವಾದ ಮೇಲೆ
ರಂಗಮ್ಮ ತಲೆಯ ಮೇಲುಗಡೆ ಸೆರಗೆಳೆದು ಅಂಗಳಕ್ಕೆ ಇಳಿದರು.
"ಬಂದಿರಾ? ಬನ್ನೀಪ್ಪಾ..."
ಉಟ್ಟಿದ್ದುದು ಕಲಾಬತ್ತಿನ ಸೀರೆ_ಹಳೆಯದು. ತೊಟ್ಟಿದ್ದುದು ಚಿತ್ತಾರದ
ಅರಿವೆಯ ರವಕೆ_ಅಗಲವಾಗಿಯೇ ಇತ್ತು ಕತ್ತು. ನಡುವಿಗಿಂತ ನಾಲ್ಕೆಳೆ ಕೂದಲಷ್ಟು
ಎಡಕ್ಕೆ ಬೈತಲೆ ತೆಗೆದು ಜಡೆ ಹಾಕಿ ಆಕೆ ಹೆರಳು ಇಳಿಬಿಟ್ಟಿದ್ದಳು. ಎಡ ಕಂಕುಳಲ್ಲಿ,
ಬಣ್ಣ ಬಣ್ಣದ ಬಟ್ಟೆಯ ಲಂಗ ತೊಡಿಸಿದ್ದ ಪುಟ್ಟ ಹೆಣ್ಣುಮಗು. ಮೇಲು ತುಟಿ
ಯನ್ನು ಸ್ವಲ್ಪ ಕೊಂಕಿಸಿ, ತನಗೆ ಸ್ವಾಗತ ಬಯಸಿದವರನ್ನೆಲ್ಲ ನೋಡುತ್ತ ಅದು ಪಿಳಿ
ಪಿಳಿ ಕಣ್ಣು ಬಿಡುತ್ತಿತ್ತು...ವಠಾರದ ಹೆಂಗಸರೆಲ್ಲ ತಮ್ಮ ಜಾತಿಯ ಆ ಇನ್ನೊಬ್ಬಳನ್ನು
ನೋಡಿದರು.
ಆ ಸಾಮಾನುಗಳೋ? ಬಟ್ಟೆಬರೆಯನ್ನೆಲ್ಲ ಸುತ್ತಿ ದುಡ್ಡದಾಗಿ ಕಟ್ಟೀದ್ದ ಹಾಸಿಗೆ.
ಒಂದೆರಡು ಕಡೆ ನಜ್ಜುಗುಜ್ಜಾಗಿದ್ದ ಹಳೆಯದೊಂದು ಟ್ರಂಕು, ಪಾತ್ರೆ ಸರಂಜಾಮ
ಗಳನ್ನು ತುಂಬಿಕೊಂಡಿದ್ದೊಂದು ಗೋಣಿಚೀಲ. ದೇವರ ಪಟ. ಗಾಜು-ಪಿಂಗಾಣಿ
ಪಾತ್ರೆಗಳನ್ನು ಹೊತ್ತಿದ್ದ ತೊಟ್ಟಿಲು. ನಾಲ್ಕಾರು ಡಬ್ಬಗಳು, ಕಾಲು ಕಿತ್ತು ಜೋಡಿ
ಚಾಪೆಯಲ್ಲಿ ಸುತ್ತಿದ್ದ ಪೊರಕೆಗಳೆರಡು.
ರಂಗಮ್ಮನ ಮನಸ್ಸಿನಲ್ಲಿ ನೆನೆಪಿನ ಉಯ್ಯಾಲೆ ತೂಗುತ್ತಲೇ ಇತ್ತು. ಏಳು ವರ್ಷ
ಗಳ ಹಿಂದೆ ಒಂದು ಜಟಕಾ ಗಾಡಿಯಲ್ಲಿ ಬಂದಿದ್ದ ಒಂದು ಸಂಸಾರವನ್ನು ಈ ಸಂಸಾರ
ದೊಡನೆ ಹೋಲಿಸದೆ ಇರುವುದು ಸಾಧ್ಯವಿರಲ್ಲಿಲ್ಲ. ಆ ದಂಪತಿ ವಯಸ್ಸಿನಲ್ಲಿ ಇವರಿಗಿಂತ
ಸ್ವಲ್ಪ ಕಿರಿಯರು. ಆ ಹೆಂಗಸಿಗೆ ಬೆಡಗು ಬಿನ್ನಾಣವೇನೂ ಇರಲಿಲ್ಲ. ಆಕೆ ಸಂಕೋಚದ
ಮುದ್ದೆಯಾಗಿದ್ದಳು. ಕಂಕುಳಲ್ಲಿ ಒಂದು ವರ್ಷ ವಯಸ್ಸಿನ ಗಂಡು ಮಗುವಿತ್ತು.
ಸಾಮಾನುಗಳೂ ಇಷ್ಟಿರಲ್ಲಿಲ್ಲ. ಮುಖದ ಮೇಲಿನ್ನೂ ಮಗುತನವೇ ಇದ್ದಂತೆ ತೋರು
ತ್ತಿದ್ದ ಆ ಗಂಡ ಪ್ರತಿಯೊಂದು ಸಣ್ನ ಪುಟ್ಟ ವಿಷಯಕ್ಕೂ ಹೆಂಡತಿಯನ್ನೇ ಕೇಳು
ತ್ತಿದ್ದ. ನಾರಾಯಣಿ ಮತ್ತು ನಾರಾಯಣಿಯ ಗಂಡ...
ವಠಾರದ ಬೇರೆ ಹೆಂಗಸರೂ ಅಷ್ಟೇ. ತಮ್ಮ ತಮ್ಮ ತಕ್ಕಡಿಯಲ್ಲಿ ಹೊಸ
ಸಂಸಾರದ ಒಡತಿಯನ್ನೂ ಒಡಯನನ್ನೂ ತೂಗಿ ನೋಡಿದರು.
ಶಂಕರನಾರಾಯಣಯ್ಯನಿಗಿಂತ ಮುಂದಿದ್ದ ಆತನ ಹೆಂಡತಿ ತನ್ನ ಗಂಡ ಬಾಡಿಗೆಗೆ
ಹಿಡಿದಿದ್ದ ಮನೆಯ ಒಳಹೊಕ್ಕು ನೋಡಿದಳು. ಇದನ್ನು ಗಮನಿಸಿದ ಕೆಲ ಹೆ೦ಗಸರು
ಮುಖಚೇಷ್ಟೆ ಮಾಡದಿರಲಿಲ್ಲ. ಹೊಸಬಳು ಅಡುಗೆ ಮನೆ, ಛಾವಣಿ, ನೆಲ, ಗೋಡೆ
ಗಳ ಪರೀಕ್ಷೆ ಮಾಡಿದಳು. ನೆಲವನ್ನು ಸಾರಿಸಿತ್ತು. ಗೋಡೆಗೆ ಅಲ್ಲಿ ಇಲ್ಲಿ ಸುಣ್ಣದ
ನೀರಿನ ಸ್ಪರ್ಶವಾದಂತಿತ್ತು.
ಭಾರದ ಸಾಮಾನುಗಳನ್ನು ಹೊರುವ ಕೆಲಸವನ್ನೆಲ್ಲ ಗುಂಡಣ್ಣನಿಗೆ ಬಿಟ್ಟು
ಶಂಕರನಾರಾಯಣಯ್ಯ ಹಗುರವಾದೆರಡು ಡಬ್ಬಗಳನ್ನು ಹೊತ್ತು ಒಳಬಂದ.
"ಸುಣ್ಣ ಬಳೆದಿದೆ ತಾನೆ?"
“ಓಹೋ !"
ಆ ಉದ್ಗಾರದಲ್ಲಿ ಅಣಕವಿತ್ತು.
ಒಂಟಿ ಎತ್ತಿನ ಗಾಡಿಹೊರಟುಹೋಯಿತು. ಮನೆಯ ಸಾಮಾನುಗಳೆಲ್ಲ ಒಳಕ್ಕೆ
ಬಂದವು. ಸಾಮಾನುಗಳನ್ನು ಹಿ೦ಬಾಲಿಸಿದ ಹುಡುಗರು ಬಾಗಿಲ ಮುಂದೆ
ನೆರೆದರು.
ಸಾಮಾನುಗಳನ್ನಷ್ಟೇ ನೋಡಿ, ಬಂದಿರುವುದು ಬಡ ಸಂಸಾರವೇ ಎಂದು
ತೀರ್ಮಾನಿಸಲು ವಠಾರದ ಹೆಂಗಸರಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.
ಅಹಲ್ಯಾ ಮತ್ತು ರಾಧಾ ಕಾಮಾಕ್ಷಿಯ ಮನೆ ಸೇರಿ ಚರ್ಚೆ ನಡೆಸಿದರು. ಚಿತ್ರ ಬರೆ
ಯುವವರ ಮನೆಯೆಂದರೆ ಹಾಗಿರಬಹುದು ಹೀಗಿರಬಹುದು ಎಂದು ಅಹಲ್ಯಾ ತರ್ಕಿಸಿ
ದ್ದಳು. ಅಂಥದೇನೂ ಈಗ ಕಾಣಲಿಲ್ಲವೆಂದು ಆಕೆಗೆ ನಿರಾಸೆಯಾಗಿತ್ತು.
ಇನ್ನೂ ಏನಾದರೂ ಕೆಲಸವಿದೆಯೇನೋ ಎಂಬಂತೆ ಗುಂಡಣ್ಣ ನಿಂತೇ ಇದ್ದ.
ಅವನ ವ್ಯಕ್ತಿತ್ವವನ್ನು ಅಷ್ಟರಲ್ಲೆ ಸೂಕ್ಷ್ಮ ನಿರೀಕ್ಷಣೆಯಿಂದ ಅಳೆದು ನೋಡಿದ್ದ ಶಂಕರ
ನಾರಾಯಣಯ್ಯ ಹೇಳಿದ:
"ಪರವಾಗಿಲ್ಲ. ಇನ್ನು ನಾವೇ ಇಟ್ಕೋತೀವಿ. ಹೋಗಿ."
ಗುಂಡಣ್ಣ ಹುಡುಗರೆಡೆಯಲ್ಲಿ ಹಾದಿ ಬಿಡಿಸಿಕೊಂಡು ಹೊರಟ. 'ಉಪಕಾರ
ವಾಯ್ತು,' 'ತೊಂದರೆ ಕೊಟ್ಟೆ' ಎಂದೆಲ್ಲ ಗುಂಡಣ್ಣನಿಗೆ ವಂದನಾರ್ಪಣೆ ಮಾಡುವ
ಅಗತ್ಯವಿಲ್ಲವೆಂದು ಶಂಕರನಾರಾಯಣಯ್ಯ ಸುಲಭವಾಗಿ ತೀರ್ಮಾನಿಸಿದ್ದ .
ಹುಡುಗರೆಲ್ಲ ಮುತ್ತಿಕೊಂಡುದರಿಂದ, ಗಾಳಿ ಬೆಳಕು ಓಡಲು ಅವಕಾಶ ದೊರೆ
ಯದೆ ಮಗು ಅಳತೊಡಗಿತು
ಅಷ್ಟರಲ್ಲೆ ರಂಗಮ್ಮ ಅಲ್ಲಿಗೆ ಬಂದು ತಲುಪಿ, ಹುಡುಗರವೇಲೆ ಎರಗಿದರು.
"ಹೋಗ್ರೋ..ಇಲ್ಲೇನು ಕೋತಿ ಕುಣೀತಿದ್ಯೆ? ಹೂಂ... ಬೀದಿಗೆ ಹೋಗಿ
ಆಡ್ಕೊಳ್ಳೀ..."
ಹುಡುಗರು ಮನಸ್ಸಿಲ್ಲದ ಮನಸ್ಸಿನಿಂದ ಹೊರಹೋದರು.
ಸಂಸಾರದೊಡನೆ ರಂಗಮ್ಮನ ಸ್ನೇಹ ಆರಂಭವಾಯಿತು.
"ಮಗು ಆಳ್ತಿದೆಯೆಲ್ಲಾ. ಹಸಿವಾಗಿದೆಯೋ ಏನೋ..."
"ಅಯ್ಯೋ! ಅವಳಿಗೇನು ಧಾಡಿ? ಅಳ್ತಾ ಇರೋದೇ!"
ಆ ಹೆಂಗಸಿನ ಉತ್ತರ ಕೇಳಿ ರಂಗಮ್ಮ ಬೆಚ್ಚಿ ಬಿದ್ದರು. ಆದರೂ ಸಾವರಿಸಿ
ಕೊಂಡು ಮಗುವಿನೆದುರು ನಿಂತು, ತಮ್ಮ ಹಲ್ಲಿಲ್ಲದ ಬಾಯಿಯನ್ನು ತೋರಿಸುತ್ತ,
ಮುಖಚೇಷ್ಟೆ ಮಾಡಿದರು. ಉಸಿರಾಡಲು ಬೇಕಾದ ಗಾಳಿಯೂ ದೊರೆತು, ತಮಾಷೆ
ಯಾಗಿದ್ದೊಂದು ಮುಖವನ್ನೂ ಕಂಡು, ಮಗು ಅಳು ನಿಲ್ಲಿಸಿ ನಕ್ಕಿತು.
"ಥತ್ ಮು೦ಡೆ," ಎಂದು ರಂಗಮ್ಮ ಬಲು ಪ್ರೀತಿಯಿಂದ ಮಗುವಿನ ಗಲ್ಲ
ಮುಟ್ಟಿದರು. ಶಂಕರನಾರಾಯಣಯ್ಯ ಮತ್ತು ಆತನ ಹೆಂಡತಿ ಪರಸ್ಪರರನ್ನು
ನೋಡಿ ನಸುನಕ್ಕರು.
ಶಂಕರನಾರಾಯಣಯ್ಯ ಚಾಪೆಯ ಸುರುಳಿಯನ್ನು ಬಿಚ್ಚಿ, ಪೊರಕೆಗಳನ್ನು
ಮೂಲೆಗೆಸೆದು, ಚಾಪೆಯನ್ನು ಒಂದು ಬದಿಯಲ್ಲಿ ಹಾಸಿ ಹೇಳಿದ:
"ಕೂತ್ಕೊಳ್ಳಿ ರಂಗಮ್ನೋರೇ, ನಿಂತೇ ಇದೀರಲ್ಲಾ!"
"ಅಯ್ಯೋ! ಸರಿ ಹೋಯ್ತು. ಇದೇನು ಉಪಚಾರ? ನೀವಿನ್ನೂ ಸಾಮಾನು
ಗಂಟುಗಳನ್ನ ಬಿಚ್ಚೇ ಇಲ್ಲ."
"ಅದೇನು ಮಹಾ? ರಾತ್ರೆಯೆಲ್ಲ ಇದೆಯಲ್ಲ. ನಿಧಾನವಾಗಿ ಮಾಡ್ಕೋತೀವಿ."
ಆ ಮಾತು ಕೇಳುತ್ತ ರಂಗಮ್ಮನ ಹುಬ್ಬುಗಳು ಪರಸ್ಪರ ಸಮೀಪಿಸಿದುವು. ಈ
ದಂಪತಿಯ ಸಡಗರದಲ್ಲಿ ಆ ರಾತ್ರಿಯೆಲ್ಲಾ ವಿದ್ಯುದ್ದೀಪ ಉರಿಸಬೇಕಾಗಬಹುದೇನೋ
ಎಂದು ಅವರು ಚಿಂತಿಸಿದರು. ಆದರೆ ಆ ವಿಷಯ ಪ್ರಸ್ತಾಪಿಸಿ ಮೊದಲ ದಿನವೇ
ವಿರಸಕ್ಕೆ ಎಡೆಗೊಡಲು ಅವರು ಸಿದ್ಧರಿರಲಿಲ್ಲ.
ಆ ಶಂಕರನಾರಾಯಣಯ್ಯನೋ ಬೇಕು ಬೇಕೆಂದೇ ಹಾಗೆ ಹೇಳಿದ್ದ. ಎಷ್ಟು
ಹೊತ್ತಿಗೆ ಎಂಬುದು ಗೊತ್ತಿಲ್ಲವಾದರೂ ವಠಾರದ ಒಡತಿ ರಾತ್ರೆ ದೀಪಗಳನ್ನೆಲ್ಲ ಆರಿ
ಸುವ ಪದ್ಧತಿ ಇದೆಯೆಂದು ಮೊದಲ ಸಾರಿ ಅಲ್ಲಿಗೆ ಬಂದಾಗಲೇ ಆತ ತಿಳಿದುಕೊಂಡಿದ್ದ.
ರಂಗಮ್ಮನ ಮುಖದ ಮೇಲೆ ಮೂಡಿ ಮಾಯವಾದ ಕಳವಳ ಆತನಿಗೆ ಗೋಚರಿ
ಸದೆ ಇರಲಿಲ್ಲ. ಗಂಡನ ತುಂಟತನ ಹೆಂಡತಿಗೂ ಅರಿವಾಯಿತು.
ಬಂದವರನ್ನು ಸಂತುಷ್ಟಪಡಿಸುವ ಮಾತನ್ನೇ ರಂಗಮ್ಮ ಆಡಬಯಸಿದರು.
"ಸಾಮಾನು ಎತ್ತಿಟ್ಟ ತಕ್ಷಣ ಹೇಳೀಪ್ಪಾ. ನಲ್ಲಿ ಬೀಗ ತೆಗೀತೀನಿ. ನೀರು
ಹಿಡಿಕೊಡೀರಂತೆ."
ಶಂಕರನಾರಾಯಣಯ್ಯನೇನೊ "ಆಗಲಿ" ಎಂದ. ಆದರೆ ಆತನ ಹೆಂಡತಿ ಸುಮ್ಮ
ನಿರಲಿಲ್ಲ.
"ಓ! ಸಾಯಂಕಾಲ ಯಾವಾಗ್ಲೂ ನಲ್ಲಿಗೆ ಬೀಗ ಹಾಕ್ತೀರೇನು?"
ಶೇಷಾದ್ರಿಪುರದ ಬಿಡಾರದಲ್ಲಿ ಬಾವಿಯಿಂದಲೆ ನೀರು ಸೇದುತ್ತಿದ್ದವಳು ಆಕೆ.
ಆದರೆ ಹಾಗೆಂದು ಇಲ್ಲಿ ತಿಳಿಸಲಿಲ್ಲ.
"ಹೂನಮ್ಮಾ. ಹಾಗೇ ಬಿಟ್ಟರೆ ಹುಡುಗರು ನಲ್ಲಿ ತಿರುಗಿಸಿ ಬಿಡುತ್ವೆ. ಬೀದೀಲಿ
ಹೋಗೋರು-ಬರೋರೂ ನೀರಿಗೆ ಬಂದ್ಬಿಡ್ತಾರೆ."
"ಹೌದೌದು. ಗತಿ ಇಲ್ದೆ ಅಲೆಯೋರ ಕಾಟ ಜಾಸ್ತಿಯಾಗಿಬಿಟ್ಟಿದೆ...."
ಎಂದು ಶಂಕರನಾರಾಯಣಯ್ಯ, ಗೋಣಿಯಿಂದ ಸಾಮಾನುಗಳನ್ನು ಹೊರತೆಗೆಯುತ್ತ,
ಹೇಳಿದ.
"ಮನೇಲೇ ಇರ್ತೀನಪ್ಪಾ. ಸಾಮಾನು ತೆಗೆದಿಡೋದು ಮುಗಿದ್ಮೇಲೆ ಬನ್ನಿ,"
ಎಂದು ಹೇಳಿ ರಂಗಮ್ಮ ಹೊರಟು ಹೋದರು.
"ಕೂತ್ಕೋ ಚಂಪಾ. ಹ್ಯಾಗಿದಾರೆ ಮಾಲಿಕರು?"
ಹೆಂಡತಿಯೊಡನೆ ಮಾತನಾಡಿದ ಶಂಕರನಾರಾಯಣಯ್ಯನ ಸ್ವರದಲ್ಲಿ ಬದಲಾ
ವಣೆಯಾಗಿತ್ತು; ಸ್ವಾಭಾವಿಕವಾಗಿ, ನಯವಾಗಿತ್ತು.
"ನೀವಂತೂ ಒಳ್ಳೇ ಮನೇನೆ ಹುಡುಕಿದೀರಿ!"
"ಯಾಕೆ? ಆ ಕೊಂಪೆಗಿಂತ ಈ ವಠಾರ ವಾಸಿಯಲ್ವೇನು?"
"ಅಲ್ಲ ಅಂದ್ನೆ? ತಮಾಷೆಯಾಗಿದೆ ಮುದುಕಿ. ಆದರೆ ನೀರು ಲೈಟಿನ ಅವಸ್ಥೆ
ನೋಡಿದರೆ ದಿನಾ ಜಗಳವಾಗುತ್ತೇನೋ ಅಂತ ಭಯವಾಗ್ತಿದೆ."
"ಶ್! ಮೆಲ್ಲಗೆ ಮಾತ್ನಾಡೇ! ಎದುರುಮನೆ_ಪಕ್ಕದ್ಮನೆ ... ಗೋಡೆ ಏನು ದಪ್ಪ
ಗಿದೇಂತ ತಿಳಕೊಂಡ್ಯಾ...?"
ಚಂಪಾವತಿ ನಕ್ಕಳು.
"ಒಳ್ಳೇದೇ ಆಯ್ತು. ಸದ್ಯಃ ನಿಮ್ಮ ಸರಸ ಸಲ್ಲಾಪವಾದರೂ ಕಮ್ಮಿ
ಆಗುತ್ತೊ?"
ಬೆವರು ಸುರಿಯುತ್ತಿದ್ದ ಮುಖ. ಅದಕ್ಕೆ ತಗಲಿದ ಯಾವುದೋ ಪಾತ್ರೆಯ
ಮಸಿ. ಮುಂದಕ್ಕೆ ಇಳಿದ ಕ್ರಾಪು. ಆ ಪರಿಸ್ಥಿತಿಯಲ್ಲೂ ಆತ ಹೆಂಡತಿಯನ್ನು
ನೋಡಿ ತುಂಟತನದ ನಗೆ ನಕ್ಕ.
"ಬಾಗಿಲು ಸ್ವಲ್ಪ ಮರೆ ಮಾಡೇ."
"ಯಾಕೆ?"
"ಬೇಕು. ಬಾಗಿಲು ಮುಚ್ಬಿಟ್ಟು ಹತ್ತಿರ ಬಾ."
"ಓಹೋ! ನಿಮ್ಮಿಷ್ಟ ನೆರವೇರ್ದ ಹಾಗೆಯೇ. ಆ ತೊಟ್ಟಿಲಿಂದ ಒಂದಿಷ್ಟು
ಕನ್ನಡಿ ತಗೊಂಡು ನಿಮ್ಮ ಮುಖ ನೋಡ್ಕೊಳ್ಳಿ."
"ಸಾಕು! ಇಲ್ಲಿ ಬಾ ಅಂದ್ರೆ...."8
"ಬರೋಲ್ಲ."
"ಬಾರೇ ಇಲ್ಲಿ!"
"ಎದುರು ಮನೆ_ ಪಕ್ಕದ್ಮನೆಯವರಿಗೆ ಕೇಳ್ಸುತ್ತೆ."
ಶಂಕರನಾರಾಯಣಯ್ಯ ಉತ್ತರ ಕೊಡದೆ, ಮಗುವನ್ನೆತ್ತಿಕೊಂಡು ಮೂಲೆ
ಯಲ್ಲಿ ನಿಂತಿದ್ದ ಹೆಂಡತಿಯತ್ತ ನಡೆದ.
ಆ ಕ್ಷಣವೇ ಹೆಂಡತಿ ಗಟ್ಟಿಯಾಗಿ ಕೂಗಿ ಕರೆದಳು:
"ರಂಗಮ್ನೋರೆ!...."
ಮೀನಾಕ್ಷಮ್ಮ, ಪದ್ಮಾವತಿ, ಕಮಲಮ್ಮ, ಅಹಲ್ಯಾ, ಕಾಮಾಕ್ಷಿಯರೆಲ್ಲಾ
ತಮ್ಮ ತಮ್ಮ ಮನೆ ಬಾಗಿಲಿಗೆ ಬಂದರು. ಮಧುರವಾಗಿದ್ದರೂ ಗಟ್ಟಿಯಾಗಿದ್ದ ಹೊಸ
ಸ್ವರ. ಬಂದ ದಿನವೇ, ಬಂದ ಘಳಿಗೆಯಲ್ಲೇ. ಎಂತಹ ದಿಟ್ಟತನ!
ಶಂಕರನಾರಾಯಣಯ್ಯ "ಥೂ ನಿನ್ನ!" ಎಂದು ಅವಸರವಾಗಿ ಗೋಣಿ ಚೀಲ
ದತ್ತ ಸರಿದ. ಚಂಪಾ ಕುಲುಕುಲು ನಕ್ಕಳು.
ರಂಗಮ್ಮ ಬಂದೇಬಿಟ್ಟರು. ಹೊಸಬಳ ಧೈರ್ಯ ಅವರನ್ನೂ ಚಕಿತ
ಗೊಳಿಸಿತ್ತು.
"ಏನಮ್ಮಾ? ಕೂಗಿದ್ಯಾ?"
ಸುತ್ತು ಮುತ್ತು ಎಲ್ಲಿಂದಲೂ ಯಾವ ಸಪ್ಪಳವೂ ಇರಲಿಲ್ಲ. ವಠಾರದ ಆ ಭಾಗ
ವೆಲ್ಲಾ ಒಂದೇ ಕಿವಿಯಾಗಿ ಮಾರ್ಪಟ್ಟು ಹೊಸಬಳ ಉತ್ತರಕ್ಕಾಗಿ ಕಾದಿದ್ದಂತೆ ಕಂಡಿತು.
ರಂಗಮ್ಮ ಬರುವುದರೊಳಗೆ ನಗು ನಿಲ್ಲಿಸಿದ್ದ ಚಂಪಾ ಗಂಭೀರ ಮುಖಮುದ್ರೆ ತಳೆದಳು.
ಅಳುಕು ಸ್ವಲ್ಪವೂ ಆಕೆಯನ್ನು ಬಾಧಿಸಲಿಲ್ಲ.
"ಹೂಂ ಕಣ್ರೀ....ಒರಳು ಗುಂಡು ಇದೆಯೇಂತಾ?"
ಯಾವ ಸಂಕೋಚವೂ ಇಲ್ಲದೆ ಆ ಮಾತು ಬಂತು. ಆದರೆ ರಂಗಮ್ಮ ಅದನ್ನು
ನಿರೀಕ್ಷಿಸಿರಲಿಲ್ಲ.
"ಯಾಕೆ? ಇಲ್ಲಿಲ್ವೆ?"
"ನೋಡ್ದೆ. ಎಲ್ಲೂ ಕಾಣಿಸ್ಲಿಲ್ಲ,"
___ಎಂದಳು ಚಂಪಾ. ನಾಲ್ಕು ಹೆಜ್ಜೆ ಮುಂದೆ ಹೋಗಿ ಅಡುಗೆ ಮನೆಯೊಳಗೆ
ಹುಡುಕಿ ನೋಡುವ ಶಾಸ್ತ್ರವನ್ನೂ ಆಕೆ ಮಾಡಿದಳು.
ರಂಗಮ್ಮನಿಗೆ ಗಾಭರಿಯಾಯಿತು. ನಾರಾಯಣಿಯ ಗಂಡ ಎಲ್ಲಾದರೂ
ಗುಂಡುಕಲ್ಲನ್ನು ಒಯ್ದು ಬಿಟ್ಟನೇನೋ, ತನ್ನ ದೃಷ್ಟಿಗೆ ಈ ವರೆಗೂ ಆ ವಿಷಯ
ಗೋಚರವಾಗದೆ ಹೋಯಿತೇನೊ ಎಂದು ದಿಗಿಲಾಯಿತು. ಅವರ ದೃಷ್ಟಿ ಈಗ
ಮನೆ ತುಂಬ ಹರಡಿದ್ದ ಸಾಮಾನುಗಳತ್ತ ಹರಿಯಿತು. ರಂಗಮ್ಮನ ಸೂಕ್ಷ್ಮ
ದೃಷ್ಟಿ....
"ನೋಡಿ! ಅಲ್ಲಿದೆ!"

ರಂಗಮ್ಮ ಬೊಟ್ಟ ಮಾಡಿದತ್ತ ದಂಪತಿ ನೋಡಿದರು. ಹಾಸಿಗೆಯ ಕೆಳಗಿತ್ತು
ಗುಂಡುಕಲ್ಲು. ಅದರ ತಲೆ ಮಾತ್ರ ಕಾಣಿಸುತ್ತಿತ್ತು.
"ಓ! ಇದೆಯಪ್ಪ ಸದ್ಯಃ! ಸುಮ್ನೆ ತೊಂದರೆ ಕೊಟ್ಟ ಹಾಗಾಯ್ತಮ್ಮ ನಿಮಗೆ."
"ಅಯ್ಯೋ, ಇದೇನು ಮಹಾ ತೊಂದರೆ? ನಮ್ಮ ಮನೆಯೊಳಗೇ ನಾವು ಅಲ್ಲಿ
ಇಲ್ಲಿ ಓಡಾಡ್ದೆ ಇರೋಕಾಗುತ್ಯೆ?...ಅಲ್ವೆ ಗುಂಡುಕಲ್ಲನ್ನ ಯಾರು ತಗೊಂಡು
ಹೋಗ್ತಾರೆ ಹೇಳು?"
"ಹೇಳೋಕಾಗಲ್ಲಮ್ಮ ಈಗಿನ ಕಾಲ್ದಲ್ಲೀ..." ರಂಗಮ್ಮನಿಗಿಂತ ತಾನೇ ಹೆಚ್ಚು
ಅನುಭವಿ ಎನ್ನುವಂತೆ ಚಂಪಾ ಅಂದಳು.ಅಂಗಮ್ಮ, ಒಂದು ಕ್ಷಣ ಸುಮ್ಮನಾಗಿ,
ಮತ್ತೆ ಹೇಳಿದರು;
“ಅದೂ ನಿಜಾ ಅನ್ನು. ಆದರೆ, ಇಲ್ಲಿ ಯಾರನ್ನು ಬೇಕಾದರೂ ನೀನು ಕೇಳು
ನಮ್ಮ ವಠಾರದಲ್ಲಿ ಕಳ್ಳತನ ಆಗೋದೂಂತ್ಲೇ ಇಲ್ಲ, ಅಪ್ಪಿ ತಪ್ಪಿ ಹುಡುಗರೇನಾ
ದರೂ ಆಚೆ ಈಚೆಗೆ ಪಾತ್ರೆ ಗೀತ್ರೆ ಇಡ್ಬೇಕೇ ಹೊರತು-"
ಶಂಕರನಾರಾಯಣಯ್ಯನಿಗೆ ತಾಳ್ಮೆ ತಪ್ಪಿತ್ತು.ಆತ ಮನಸ್ಸನಲ್ಲೇ ರೇಗತೊಡ
ಗಿದ್ದ ಕೇಳಿಸುತ್ತಿದ್ದ ಒಣ ಹರಟೆಯನ್ನು ಸಹಿಸಲಾರದೆ ರಂಗಮ್ಮನ ಮಾತನ್ನು
ನಡುವಿನಲ್ಲೆ ಆತ ತಡೆದ:
"ಅಯ್ಯೋ! ವಠಾರ ಅಂದ್ಮಲೆ ಅದೆಲ್ಲಾ ಇಲ್ದೆ ಇರುತ್ಯೆ?...ಮನೇಲೆ
ಇರೀಮ್ಮ ನೀವು. ಬೇಗ್ನೆ ನೀರಿಗೆ ಬಂದ್ಬಿಡ್ತೀವಿ."
ಗಂಡನ ಅವಸ್ಥೆಯನ್ನು ಕಂಡು ಒಳಗಿಂದೊಳಗೇ ಸಂತೋಷಪಡುತ್ತಿದ್ದ ಚಂಪಾ
ರಂಗಮ್ಮನನ್ನು ಮತ್ತೂ ಸ್ವಲ್ಪ ಹೊತ್ತು ಅಲ್ಲಿಯೇ ನಿಲ್ಲಿಸಿಕೊಳ್ಳಲು ಬಯಸಿದಳು.
ಆಕೆ ಗೃಹಕೃತ್ಯಕ್ಕೆ ಸಂಬಂಧಿಸಿ ಕೇಳಿ ತಿಳಿದುಕೊಳ್ಳಬೇಕಾದ ಎಷ್ಟೋ ವಿಷಯಗಳಿದ್ದವು.
-"ಇಲ್ಲಿ ವರ್ತನೆ ಹಾಲು ಹಾಕ್ತಾರೆಯೆ?"
-"ಸೌದೆ ಡಿಪೋ ಎಲ್ಲಿದೆ?"
—"ಅಂಗಡಿ ಬೀದಿ ಎಷ್ಟು ದೂರ?"
-"ಅಲ್ಲಿ ತರಕಾರಿ ಸಿಗುತ್ತೇನು?"
ರಂಗಮ್ಮ ತಾಳ್ಮೆಯಿಂದ ಉತ್ತರವಿತ್ತು ಪ್ರತಿಯೊಂದಕ್ಕೂ ವಠಾರ ಎಷ್ಟೊಂದು
ಅನುಕೂಲವಾಗಿದೆ ಎಂಬುದನ್ನು ಮನಗಾಣಿಸಿ ಕೊಡಲು ಪ್ರಯತ್ನಪಟ್ಟರು.
ಹೊರಗೆ, ಈ ಸಂಭಾಷಣೆಗೆ ಕಿವಿಗೊಡುತ್ತ ನಿಂತಿದ್ದವರು, ಹೊಸಬಳ
ಧೈರ್ಯಕ್ಕೆ ಬೆರಗಾಗದಿರಲಿల్ల.

ಆಗಿನ್ನೂ ಆರು ಘಂಟೆ, ದೀಪ ಹಾಕಲು ಬಹಳ ಹೊತ್ತಿತ್ತು. ಅಲ್ಲದೆ,
ಪಶ್ಚಿಮದ ಸೂರ್ಯನ ಕೃಪೆಯಿಂದ ದೊರೆಯುತ್ತಿದ್ದ ಸ್ವಲ್ಪ ಬೆಳಕೂ ಅಲ್ಲಿ ಇಲ್ಲದೆ
ಇರಲಿಲ್ಲ, ಆದರೂ ಚಂಪಾ ತನ್ನದೊಂದು ಕೇಳಿಕೆಯನ್ನು ಮುಂದಿಟ್ಟು, ರಂಗಮ್ಮನಿಗೆ
'ಚುರುಕು ಮುಟ್ಟಿಸಿದಳು.
ದೀಪದ ಅವಸ್ಥೆ ಏನೆಂಬುದನ್ನು ಮೊದಲೇ ತಿಳಿದಿದ್ದ ಚಂಪಾ ಗಂಡನಿಗೆ
ಹೇಳಿದಳು:
"ದೀಪ ಹಾಕ್ಕೋಬಾರ್ದೆ? ಸಾಮಾನುಗಳೆಲ್ಲ ಇವೆಯೋ ಇಲ್ವೋ ಏನೂ ಕಾಣಿ
ಸೋದೇ ಇಲ್ಲ."
ಹೆಂಡತಿಯ ಆ ಮಾತಿಗಾಗಿ ಮನಸ್ಸಿನಲ್ಲೆ ಖುಷಿಯಾದ ಗಂಡ, "ಕರೆಂಟ್
ಇಲ್ಲಾಂತ ತೋರುತ್ತೆ" ಎಂದು ಹೇಳುತ್ತ, ರಂಗಮ್ಮನ ಮುಖ ನೋಡುತ್ತ, ವಿದ್ಯುತ್
ಗುಂಡಿಯನ್ನು ಮುಟ್ಟಿದ.
ರಂಗಮ್ಮ, ಆ ಸಂಭಾಷಣೆ ತಮಗೆ ಕೇಳಿಸದವರಂತೆ ಅತ್ತಿತ್ತ ನೋಡಿದರು.
ಚಂಪಾ ಕೇಳಿಸುವ ಹಾಗೆ ಅಂದಳು:
"ಸ್ವಲ್ಪ ದೀಪ ಹಾಕ್ತೀರಾ?"
ರಂಗಮ್ಮ 'ಹೂಂ' ಅನ್ನಲಿಲ್ಲ; 'ಊಹೂಂ' ಅನ್ನಲಿಲ್ಲ. ಚಕಾರವೆತ್ತದೆ ತಮ್ಮ
ಮನೆಗೆ ಹೋಗಿ ವಿದ್ಯುತ್ ಹಿಡಿಯನ್ನೆಳೆದರು. ಎಳೆದ ಮೇಲೆ "ದೀಪ ಬಂತೆ?"
ಎಂದು ಕೇಳಲೂ ಇಲ್ಲ. ಹುಬ್ಬುಗಂಟಿಕ್ಕಿ ಮನೆಯಲ್ಲೆ ಕುಳಿತರು.
ಇದನ್ನೆಲ್ಲ ನೋಡುತ್ತಿದ್ದ ವಠಾರದ ಹೆಂಗಸರು ಪೆಚ್ಚಾಗಿ ಹೋದರು.
ಕಾಂತಿಹೀನವಾಗಿದ್ದ ಬೆಳಕನ್ನು ನೋಡುತ್ತ ಚಂಪಾ ಅಂದಳು:
"ಎಷ್ಟೊಂದು ಶುಭ್ರವಾಗಿದೆ?"
ಗಂಡ ಹೇಳಿದ:
"ಪ್ರಚಂಡೆ ಕಣೇ ನೀನು. ಆ ವಯಸ್ಸಾದೋರ್ನ ಗೋಳು ಹುಯ್ಕೊಂಡೆಯಲ್ಲ!
ನರಕಕ್ಕೆ ಹೋಗ್ತಿ ನೋಡು!"
"ಮೆತ್ತಗೆ ಮಾತ್ನಾಡಿ..."
ಇಷ್ಟೆಲ್ಲವೂ ನಡೆಯುತ್ತದ್ದಾಗ ಮಗು ಸುತ್ತು ಮುತ್ತಲೆಲ್ಲ ಪಿಳಿ ಪಿಳಿ ನೋಡು
ತ್ತಲೇ ಇತ್ತು. ಉರಿಯತೊಡಗಿದ ದೀಪ ಕ್ಷಣ ಕಾಲ ಅದರ ಪಾಲಿಗೆ ದೊಡ್ಡ
ಆಕರ್ಷಣೆಯಾಯಿತು. ಆದರೆ, ಎಷ್ಟು ಹೊತ್ತಾದರೂ ತನ್ನ ಕಡೆಗೆ ಯಾರೂ ಗಮನ
ಕೊಡುತ್ತಿಲ್ಲವೆಂದು ಬೇಸರಗೊಂಡು ಅಳತೊಡಗಿತು.
ಶಂಕರನಾರಾಯಣಯ್ಯ ರೇಗುತ್ತ ಹೇಳಿದ:
"ಅಳಿಸ್ಬೇಡ ಮಗೂನ. ಯಾವ ಡಬ್ಬದಲ್ಲಿಟ್ಟಿದೀಯಾ ಬಿಸ್ಕತ್ತು ಪೊಟ್ಣಾನ?
ತೆಕ್ಕೊಡ್ಬಾರ್ದೇನು?"
ಚಂಪಾ ಪ್ರಯಾಸಪಟ್ಟು ಆ ಡಬ್ಬವನ್ನು ಗುರುತಿಸಿ, ಬಿಸ್ಕತ್ತು ಹೊರತೆಗೆದು,
ಮಗಳ ಬಾಯಿಗೆ ತುರುಕಿದಳು. ಕೈಗೊಂದು ಚೂರು ಕೊಟ್ಟು ಮಗುವನ್ನು ಚಾಪೆಯ
ಮೇಲೆ ಆಡಲು ಬಿಟ್ಟಳು. ತಾನು ಸೆರಗನ್ನು ಸೊಂಟಕ್ಕೆ ಬಿಗಿದು ಗಂಡನ ಜತೆಯಲ್ಲಿ
ಸಾಮಾನುಗಳನ್ನು ಎತ್ತಿಡತೊಡಗಿದಳು.
ವಠಾರಕ್ಕೆ ಒಬ್ಬೊಬ್ಬರಾಗಿ ಗಂಡಸರು ಹಿಂತಿರುಗು ಬಂದರು. ಕತ್ತಲಾಯಿತು.

ಹುಡುಗರೆಲ್ಲ ತಮ್ಮ ತಮ್ಮ ಮನೆಗಳನ್ನು ಸೇರಿದರು. ಹಕ್ಕಿಗಳ ಗೂಡಿನಲ್ಲಿ ಸಂಜೆ
ಹೊತ್ತು ಚಿಲಿಪಿಲಿ ಸದ್ದಾಗುವ ಹಾಗೆ, ಮನೆಗಳಿಂದ ವಿವಿಧ ವಯೋಮಾನದ ಮನುಷ್ಯ
ಸ್ವರಗಳು ಹೊರಟುವು.

ಪೋಲೀಸನ ಹೆಂಡತಿ "ಕಿಟ್ಟೀ ಕಿಟ್ಟೀ" ಎಂದು ಕೂಗುತ್ತ ಮುಂಭಾಗದಿಂದ
ಓಣಿಗೆ ಬಂದಳು.

"ಮೀನಾಕ್ಷಮ್ಮಾ, ನಮ್ಮ ಕಿಟ್ಟೀ ಇದಾನೇನ್ರಿ ನಿಮ್ಮನೇಲಿ?" ಎನ್ನುತ್ತ ಆಕೆ
ಓಣಿಯ ಕೊನೆಯನ್ನು ತಲುಪಿದಳು.

"ಇಲ್ಲ ಕಣ್ರೀ,ನಮ್ಮೋನು ಆಗ್ಲೇ ಬಂದ," ಎಂದು ಉತ್ತರವಿತ್ತುದಾಯ್ತು.
ಆದರೂ ಮೀನಾಕ್ಷಮ್ಮನ ಬಾಗಿಲ ಬಳಿ ಇಬ್ಬರೂ ಸೇರಿದರು.ಪ್ರಶ್ನೋತ್ತರಗಳಾ
ದುವು."ಅಡುಗೆ ಆಯ್ತೆ?","ಏನು ಮಾಡಿದ್ರಿ?",ನೀವೇನು ಮಾಡಿದ್ರಿ?"

ಆದರೂ ಪೋಲೀಸನ ಹೆಂಡತಿಯ ದ್ರಿಷ್ಟಿ ಎದುರು ಮನೆ ಕಡೆಗೆ ಇತ್ತು. ಗಂಡ
ಹೆಂಡತಿ ಸಾಮಾನುಗಳನ್ನೆತ್ತಿ ಇಡುತ್ತಿದ್ದುದನ್ನು ಆಕೆ ಈಕ್ಷಿಸಿದಳು. ಕಿಟ್ಟಿಯನ್ನು
ಹುಡುಕುವ ನೆಪ ಮಾಡಿ ಅಲ್ಲಿಗೆ ಬಂದುದೇ ಆ ಉದ್ದೇಶದಿಂದ.


ಗಂಡಸರೂ ಅಷ್ಟೆ. ಕಕ್ಕಸಿಗೆಂದು ಹೊರಟವರು ಕೊನೆಯ ಮನೆ ಬಂದಾಗ
ಒಳ್ಳಕ್ಕೆ ದೃಷ್ಟಿ ಬೀರುತ್ತಿದ್ದರು. ವ‌ಠಾರದಲ್ಲಿನ್ನು ತಮ್ಮ ಜತೆ ಇರಲು ಬಂದ ಹೊಸ
ಗಂಡಸು ಯಾರೆಂದು ತಿಳಿಯುವ ಸ್ವಾಭಾವಿಕ ಕುತೂಹಲ ಅವರಿಗೆ. ಗಂಡಸನ್ನು
ನೋಡಿದ ಮೇಲೆ,ಹಾಗೆಯೇ ಆತನ ಕೈ ಹಿಡಿದಾಕೆಯನ್ನೂ ಅವರು ನೋಡದೆ ಇರು
ತ್ತಿರಲಿಲ್ಲ.


ರಂಗಮ್ಮ ವಿಚಾರಿಸಿಕೊಳ್ಳಲು ಮತ್ತೆ ಬರಲಿಲ್ಲ.ಇದು ತನ್ನ ಹೆಂಡತಿಯ ಪ್ರಭಾವ
ಎಂಬುದು ಶಂಕರನಾರಾಯಣಯ್ಯನಿಗೆ ಸ್ಪಷ್ಟವಾಗಿತ್ತು.


ಕತ್ತಲಾಗಿ ಒಂದು ಘಳಿಗೆಯಾಗುವುದರೊಳಗೇ ಮನೆಗೊಂದು ಸ್ವರೂಪ ಬಂತು.
ಮೇಜು ಕುರ್ಚಿಗಲನ್ನೂ ಶಂಕರನಾರಾಯಣಯ್ಯ ಒಂದು ಮೂಲೆಯಲ್ಲಿ ನಿಲ್ಲಿಸಿದ.


ಮಗು ಚಾಪೆಯ ಮೇಲೆಯೆ ನಿದ್ದೆ ಮಾಡಿತ್ತು.ತಂದೆ ಆಯಾಸ ಪರಿಹಾರ
ಕ್ಕೆಂದು ಅದರ ಬಳಿಯಲ್ಲಿ ಕುಳಿತುಕೊಂಡ.ತನ್ನ ಕೊಳಕು ಕೈಯಿಂದ ಮಗುವನ್ನು
ಮುಟ್ಟಲು ಮನಸ್ಸಾಗಲಿಲ್ಲ.ಬಾಗಿ ನೋಡಿದಾಗ ಲಂಗದ ಕೆಳಭಾಗವೂ ಚಾಪೆಯೂ
ಒದ್ದೆಯಾಗಿದ್ದಂತೆ ಕಂಡಿತು.ಮಗುವಿನ ತಂದೆ,ಮಗುವಿನ ತಾಯಿಯನ್ನು ಗದರಿಸ
ಬಯಸಿದ.


"ನೋಡೆ,ನಿನ್ನ ಮಗಳು ಏನ್ಮಾಡಿದಾಳೇಂತ!"

ಚಂಪಾ,ದೂರದಿಂದಲೇ ಅದೇನೆಂದು ಊಹಿಸಿಕೊಂಡು ಹೇಳಿದಳು:

"ಅಷ್ಟೆ ತಾನೆ?ತೀಥ ಪ್ರೋಕ್ಷಣ;ಪಾವನವಾಯ್ತು ಮನೆ."

ತೊಟ್ಟಿಲಿನೊಳಗೆ,ಗೋಡೆಯನ್ನು ಅಲಂಕರಿಸಬೇಕಾದ ಕಟ್ಟು ಹಾಕಿದ ಚಿತ್ರ
ಗಳಿದ್ದುವು.ಅದನ್ನೆಲ್ಲಾ ಹೊರತೆಗೆದು ಗೋಡೆಗೆ ಮೊಳೆ ಬಡಿದು ತಗಲ ಹಾಕುವ
ಕೆಲಸದಲ್ಲಿತ್ತು. ಅದನ್ನು ಈಗಲೇ ಮಾಡೋಣವೆ ಬೇಡವೆ ಎಂದು ಅನಿಶ್ಚಯತೆ
ಯಿಂದ ತೊಟ್ಟಿಲನ್ನೆ ಶಂಕರನಾರಾಯಣಯ್ಯ ನೋಡಿದ. ಅದನ್ನು ಗಮನಿಸಿ ಚಂಪಾ
ಹೇಳಿದಳು:
"ಇವತ್ತಿಗೆ ಇಷ್ಟು ಸಾಕು. ಅದನ್ನೆಲ್ಲಾ ನಾಳೆ ಮಾಡುವಿರಂತೆ."
"ಹೂಂ. ಸೊಂಟ ನೋಯ್ತಿದೆ, ಯಾಕೋ..."
"ಎಷ್ಟೊಂದು ಕೆಲಸ ಮಾಡಿದೀರಿ, ಏನು ಕಥೆ! ನೋಯದೆ ಇರುತ್ಯೆ?"
"ನಿನಗೇನು ಹೇಳು, ಎಲ್ಲಾ ತಮಾಷೆಯೆ....
"ಚಂಪಾ ಒಂದು ಪೊರಕೆಯನ್ನೆತ್ತಿಕೊಂಡಳು.
"ಏಳಿ ಗುಡಿಸ್ಬಿಡ್ತೀನಿ. ನೀವು ಹೋಗಿ ಕೊಳಾಯಿ ಬೀಗ ತೆಗೆಸಿ."
"ಹೂಂ. ಬಿಂದಿಗೆ-ಬಕೀಟು ಎರಡು ತಗೊಂಡ್ಬಾ. ನನಗಂತು ಸ್ನಾನ
ಮಾಡಿಯೀ ತೀರ್ಬೀಕು."
"ಎಲ್ಮಾಡ್ತೀರಾ ಸ್ನಾನ?"
"ಬಚ್ಚಲು ಮನೆಯೇನೋ ಪಕ್ಕದಲ್ಲೆ ಇದೆ. ಇಷ್ಟು ಹೊತ್ತಿಗೆ ಕ್ಯೂನೂ
ಇರಲಾರದು."
ಚಂಪಾ ಹೊರಹೋಗಿ ಬಚ್ಚಲುಮನೆ ನೋಡಿ ಬಂದಳು.
"ಅಲ್ಲಿ ದೀಪ ಇಲ್ಲಾಂದ್ರೆ."
"ಹೋಗಲಿ ಬಿಡು. ಅಡುಗೆ ಮನೇಲು ಸ್ನಾನಕ್ಕೆ ಏರ್ಪಾಡಿದೆ. ನೀರು
ಹೋಗೋಕೆ ಮೋರಿ ಮಾಡಿದಾರೆ."
ಆತ ಎದ್ದು ರಂಗಮ್ಮನವರಲ್ಲಿಗೆ ಹೋದ. ದೇವರ ಸ್ಮರಣೆ ಮಾಡುತ್ತ ಕುಳಿ
ತಿದ್ದ ಅವರು ತಗ್ಗಿದ ಧ್ವನಿಯಲ್ಲಿ ಕೇಳಿದರು: <
"ಎಲ್ಲಾ ಕೆಲಸ ಮುಗಿಯಿತೆ?"
"ಮುಗೀತಾ ಬಂತು ರಂಗಮ್ನೋರೇ. ಸ್ವಲ್ಪ ನೀರು ಬೇಕಲ್ಲ."
ರಂಗಮ್ಮ ಎದ್ದು , ಗೋಡೆಯೊಳಗಿಸದ್ದ ಗೂಡಿನಿಂದ ಬೀಗದ ಕೈ ತೆಗೆದುಕೊಟ್ಟರು.
"ನೀರು ತುಂಬಿಸಿ ಆದ್ಮೇಲೆ ಬೀಗ ಹಾಕಿಟ್ಟು ಕೈನ ತಂದ್ಕೊಡೀಪ್ಪಾ."
"ಆಗಲಿ ರಂಗಮ್ನೋರೆ."
ರಂಗಮ್ಮ ಪುನಃ ಗೋಡೆಗೊರಗಿ ಕುಳಿತು ದೇವರ ಸ್ಮರಣೆಯಲ್ಲಿ ನಿರತರಾದರು.
ಆದರೆ, ರಾತ್ರಿಯ ಹೊತ್ತು ಕೊಳಾಯಿಯಿಂದ ವೇಗವಾಗಿ ಸುರಿಯುತ್ತಿದ್ದ ನೀರಿನ
ಸುಂಯ್ ಎಂಬ ಸದ್ದು ಅವರಿಗೆ ಕೇಳಿಸದೆ ಇರಲಿಲ್ಲ.
ಶಂಕರನಾರಾಯಣಯ್ಯ ಮೈತೊಳೆದುಕೊಂಡ. ಚಂಪಾ ಮುಖ ಕೈ ಕಾಲು
ತೊಳೆದುಕೊಂಡಳು.
ಸಂಜೆ ಮಗುವನ್ನೆತ್ತಿಕೊಂಡಿದ್ದ ಚಂಪಾಳನ್ನು ಕಂಡಾಗ ಹತ್ತಿರಕ್ಕೆ ಕರೆದು ಏನೋ
ಮಾಡಬೇಕೆಂದು ಗಂಡನಿಗೆ ತೋರಿತ್ತು. ಈಗ ಕೆಲಸ ಮಾಡಿ ಬಳಲಿದ ಮೇಲೆ, ಅವನಿಗೆ
ಆ ಅಪೇಕ್ಷೆಯೇ ಇರಲಿಲ್ಲ.
ಅಡ್ಡಪಂಚೆಯುಟ್ವು ಬೇರೆ ಜುಬ್ಬ ಧರಿಸುತ್ತ ಆತ ಹೇಳಿದ,
"ಇವತ್ತು ಎಷ್ಟಾಗುತ್ತೋ ಅಷ್ಟು ನೀರು ತುಂಬಿಸ್ಕೊಂಡ್ಬಿಡೇ. ನಾಳೆಯಿಂದ
ಬಿಂದಿಗೆ ಲೆಕ್ಕ ಹಿಡೀತಾರೆ."
"ಸರಿ! ಸರಿ!"
ಚಂಪಾ ಬಲಬದಿಯ ಮನೆಗೆ ಹೋಗಿ ಬಾಗಿಲಲ್ಲೆ ನಿಂತಳು.
ನಾಗರಾಜರಾಯ ಅಲ್ಲಿದ್ದ.
"ಯಾರೋ ಬಂದಿದಾರೆ ನೋಡೇ," ಎಂದು, ಅಡುಗೆ ಮನೆಯಲ್ಲಿದ್ದ ಹೆಂಡತಿಗೆ
ಆತ ಕರೆದು ಹೇಳಿದ.
ಪದ್ಮಾವತಿ ಹೊರಬಂದಳು. ಮುಗುಳುನಗುತ್ತಿದ್ದ ಚಂಪಾಳನ್ನು ಕಂಡು ಅರೆಕ್ಷಣರ
ಆಕೆಗೆ ಕಕ್ಕಾವಿಕ್ಕಿಯಾಯಿತು.
"ಏನಾದರೂ ಬೇಕಾಗಿತ್ತೆ?" ಎಂದು ಆಕೆ ಕೇಳಿದಳು.
"ನೀವು ದಿನಾಗಲೂ ಹಸುವಿನ ಸೆಗಣಿ ಎಲ್ಲಿಂದ ತರ್ತೀರಾ?"
"ಅದೊಂದು ಇಲ್ಲಿ ಸಿಗೋದು ಸ್ವಲ್ಪ ಕಷ್ಟವೇ. ಸಾಮಾನ್ಯವಾಗಿ ಬೆಳಗ್ಗೆ
ಹುಡುಗರನ್ನ ಬೀದಿ ಉದ್ದಕ್ಕೂ ಕಳಿಸ್ತೀವಿ. ಎಲ್ಲಿಯಾದರೂ ಸಿಗುತ್ತೆ, ಒಮ್ಮೆ ತಂದರೆ
ಐದಾರು ದಿವಸಕ್ಕೆ ಸಾಕಾಗುತ್ತೆ."
"ಓ.... ಹಾಗೇನು?... ಈಗ ಅಡುಗೆ ಮನೆ ಶುದ್ಧಿ ಮಾಡೋಕೆ ಒಂದು ಚೂರು
ಬೇಕಾಗಿತ್ತು. ಸ್ವಲ್ಪ ಕೊಡ್ತೀರಾ?"
"ಅದಕ್ಕೇನ್ರೀ, ತಾಳಿ ಕೊಡ್ತೀನಿ."
ಪದ್ಮಾವತಿ ಅದನ್ನು ತಂದುಕೊಟ್ವಳು. ಹೊಸಬಳೊಡನೆ ತಾನೇ ಮೊದಲು
ಮಾತನಾಡಿದವಳು, ಆಕೆಗೆ ನೆರವಾದಳು, ಎಂದು ಅವಳಿಗೆ ಸಂತೋಷ.
ಶಂಕರನಾರಾಯಣಯ್ಯ ಕೇಳಿದ:
"ಒಲೆ ಹಚ್ತೀಯೇನು?"
"ಯಾಕೆ, ಬೇಡ್ವೆ?"
"ಅದೇ ಯೋಚ್ನೆ ಮಾಡ್ತಿದೀನಿ."
"ಹೇಳಿ ಬೇಗ್ನೆ. ದೀಪದ ಗತಿ ಏನಾಗುತ್ತೋ ಆಮೇಲೆ."
"ನೀನು ಬಹಳ ವಿಷಯ ವಿಚಾರಿಸ್ಕೊಂಡೆ. ಆದರೆ ಒಂದನ್ನು ಮಾತ್ರ ಕೇಳಲಿಲ್ಲ
ನೋಡು."
"ಅದೇನೋ?"
"ಇಲ್ಲಿ ಹೋಟ್ಲು ಎಲ್ಲಿದೇಂತ?"
"ನಾನು ಯಾತಕ್ಕೆ ಕೇಳ್ಲಿ ಅದನ್ನ?"
"ಅದ್ಸರಿ ಅನ್ನು. ನನಗಂತೂ ಈ ವಠಾರ ಎಲ್ಲಿದೇಂತ ಗೊತ್ತಾಗೋಕ್ಮುಂಚೇನೆ
ಹೋಟ್ಲಿನ ಪರಿಚಯ ಆಗಿದೆ."
"ಬಿಡಾರ ಬಂದಿದೇವೆ ಅಂತ ಈಗ ಆವರಿಗೆ ಹೇಳ್ಬಿಟ್ಟು ಬರಬೇಕೇನೋ?"
"ನೋಡಿದ್ಯಾ_ ಎಷ್ಷು ಸರಿಯಾಗಿ ಊಹಿಸ್ಕೊಂಡೆ!"
"ನಡೀರಿ. ನಾನೂ ಬರ್ತೀನಿ."
"ರಂಗಮ್ಮನಿಗೆ ಗೊತ್ತಾದರೆ ನಾಳೇನೇ ನೋಟೀಸು ಕೊಡ್ತಾರೆ."
"ಅದೆಲ್ಲಾ ಸಾಕು. ಏನ್ಮಾಡೋಣಾಂತ ಈಗ? ಒಲೆ ಹಚ್ಚಲೋ ಬೇಡ್ವೋ?"
"ಆ ರೈಲುಚೆಂಬು ತಾ.ಹೋಟ್ಲಿಗೆ ಹೋಗಿ ಪೂರಿ ಪಲ್ಯಾನೋ ಚಪಾತೀನೋ
ಕಟ್ಟಿಸ್ಕೊಂಡು, ಕಾಫಿ ತಗೊಂಡ್ಬರ್ತೀನಿ."
"ನೀವು ಅಲ್ಲಿ ಕುಡಿಯೋಲ್ಲ ತಾನೆ?"
"ಎಷ್ಟೊಂದು ಹೊಟ್ಟೆ ಉರಿಯ ನಿಂಗೆ!"
"ಮಗೊಗೆ?"
"ಎಚ್ಚರವಾದರೆ ಇನ್ನೊ ಒಂದು ಚೊರು ಬಿಸ್ಕತ್ತು ಬಾಯಿಗೆ ಹಾಕಿ ಎರಡು
ಚಮಚ ಕಾಫಿ ಕು‍‍‍‍‍ಡಿಸೋದು."
"ಹೊಂ. ನಿಮ್ಕೈಲಿ ಬಚಾಯಿಸ್ಕೊಂಡೋರು ಯಾರು?"
"ಚಂಪಾ ಒಪ್ಪಿಗೆಯಿಂದೆಲೆ ರೈಲುಚೆಂಬನ್ನು ತಂದುಕೊಟ್ಟಳು.
"ಇನ್ನೊಂದು ಬಿಂದಿಗೆ ನೀರು ಹಿಡ್ಕೊಂಡ್ಬಿಡ್ತೀನಿ.ಬೀಗ ಹಾಕ್ಬಿಟ್ಟೇ ಹೋಗಿ."
ಶಂಕರನಾರಾಯಣಯ್ಯ ಚಿಲ್ಲರೆ ದುಡ್ದನ್ನು ಜೀಬಿಗೆ ಸೇರಿಸಿ, ರೈಲುಚೆಂಬನ್ನು
ಕೈಲೆತ್ತಿಕೊಂಡ. ಹೊರ ಒಂದು, ಕೊಳಾಯಿಗೆ ಬೀಗ ಹಾಕಿ, ಬೀಗದ ಕೈಯನ್ನು
ರಂಗಮ್ಮನ ಬಳಿಗೊಯ್ದ.
ರಂಗಮ್ಮ ನಿರ್ವಿಕಾರ ಸ್ವರದಲ್ಲಿ ಕೇಳಿದರು:
"ನೀರು ಆಯ್ತೆ?"
"ಆಯ್ತು."
ಆತನ ಕೈಲಿದ್ದ ರೈಲುಚೆಂಬು ನೋಡುತ್ತ ರಂಗಮ್ಮನೆಂದರು:
"ಹೊರಗೆ ಹೋದರೆ ವಾಪಸು ಬರುವಾಗ ಹಿತ್ತಿಲಗೇಟು ಭದ್ರವಗಿ ಹಾಕ್ಕೊ
ಳ್ಳೀಪ್ಸಾ."
"ಹೊಂ. ಹಾಕ್ಕೋತೀನಿ."
ಶಂಕರನಾರಾಯಣಯ್ಯ ಹೋಟೆಲಿಗೆ ಬಂದಾಗ, ಅಲ್ಲಿ ಬಾಗಿಲು ಮುಚ್ಚುವ
ಸಿದ್ದತೆ ನಡೆದಿತ್ತು.ಬೇರೆ ಯಾವ ತಿಂಡಿಯೂ ದೊರೆಯದ ಕೊನೆಯದಾಗಿ ಉಳಿದಿದ್ದ
ಚೌಚೌವನ್ನೇ ಒಂದು ಪಾವು ಕಟ್ಟಿಸಿಕೊಳ್ಳಬೇಕಾಯಿತು. ಕಾಫಿಯೆಂಬ ಹೆಸರಿನ ಒಂದು
ದ್ರವಕವನ್ನೇನೋ ಅಲ್ಲಿ ಕೊಟ್ಟರು. ಹತ್ತಿರದಲ್ಲೇ ಇದ್ದ ಅಂಗಡಿಯಿಂದ ನಾಲ್ಕು
ಪಚ್ಚಬಾಳೆ ಹಣ್ಣುಗಳನ್ನೂ ಒಂದು ಪ್ಯಾಕೇಟು ಚಾರ್ಮಿನಾರ್ ಸಿಗರೇಟನ್ನೂ ಅತ

ಕೊಂಡುಕೊಂಡ.
....ವಠಾರದ ಮನೆಯಲ್ಲಿ ಒಂದೊಂದಾಗಿ ದೀಪಗಳು ಆರತೊಡಗಿದ್ದುವು
ಪ್ಯಾಂಟು ‍‌ ‍‍‍‍‍‍ಷರಟು ಧರಿಸಿದ್ದ ಯುವಕನೊಬ್ಬ ಚರ್ಮದ ಕಡತಚೀಲವನ್ನು ಎದೆಗೊತ್ತಿ
ಕೊಂಡು ಠೀವಿಯಿಂದ ಮಹಡಿಯ ಮೆಟ್ಟಲೇರುತ್ತಿದ್ದ. ವಠಾರಕ್ಕೆ ಹಿಂತಿರುಗುತ್ತಿದ್ದ
ಶಂಕರನಾರಾಯಣಯ್ಯ ಗೇಟಿನ ಸದ್ದು ಮಾಡಿದಾಗ ಆ ಯುವಕ ತಡೆದು ನಿಂತು,
ಕೆಳಗೆ ತಿರುಗಿ, ನೋಡಿದ. ಆ ಕತ್ತಲಲ್ಲಿ ಒಳಬಂದವರು ಯಾರೆಂಬುದು ಆತನಿಗೆ ಸ್ಪಷ್ಟ
ವಾಗಿ ತಿಳಿಯಲಿಲ್ಲ. ಆತ್ಮವಿಶ್ವಾಸದ ಅಧಿಕಾರಯುಕ್ತ ಸ್ವರದಲ್ಲಿ ಆತ ಕೇಳಿದ:
"ಯಾರದು?"
ಶಂಕರನರಾಯಣಯ್ಯನೇನು ಕಡಮೆ ಆಸಾಮಿಯೆ?
"ನಾನು."
"ಸುಬ್ಬುಕೃಷ್ಣಯ್ಯ?"
"ಅಲ್ಲ. ಶಂಕರನಾರಾಯಣಯ್ಯ-ಹೊಸಬ."
"ಓ... ಕತ್ತಲೇಲಿ ಕಾಣಿಸ್ಲಿಲ್ಲ. ಕ್ಷಮಿಸಿ."
"ಏನೂ ಪರವಾಗಿಲ್ಲ."
ಯುವಕ ತನ್ನ ಹೆಸರು ಹೇಳದೆಯೇ ಮೇಲಕ್ಕೆ ಏರಿದ. ನೀನು ಯಾರೋ
ನಾಳೆ ನೋಡ್ಕೋತೀನಿ_ಎಂದು ಶಂಕರನಾರಾಯಣಯ್ಯ ಮನಸಿನಲ್ಲೆ ಅಂದುಕೊಂಡ.
ಆತನ ದೃಷ್ಟಿ ಗೋಡೆಯತ್ತ ಸರಿಯಿತು. 'ಮನೆ ಬಾಡಿಗೆಗೆ ಇದೆ' ಬೋರ್ಡು
ಅಲ್ಲಿದ್ದಂತೆ ತೋರಲಿಲ್ಲ. ರಂಗಮ್ಮ ಅದನ್ನು ತೆಗೆದು ಒಳಕ್ಕೆ ಒಯ್ದು ಬಿಟ್ಟಿದ್ದರು.
ಹಿತ್ತಿಲ ಗೇಟನ್ನು ಭದ್ರವಾಗಿ ಮುಚ್ಚಿ, ವಠಾರಕ್ಕೆ ಹಳಬನೇನೋ ಎಂಬಂತೆ
ಕತ್ತಲೆಯಲ್ಲಿ ದೃಢ ಹೆಜ್ಜೆಗಳನ್ನಿಡುತ್ತ ಆತ ಕೊನೆಯ ಮನೆ ಸೇರಿದ.
ಮನೆಯೊಳಗಿನಿಂದ ಅಗರಬತ್ತಿಯ ಘಮಘಮ ವಾಸನೆ ಬರುತ್ತಿತ್ತು. ಅಡುಗೆ
ಮನೆಯಲ್ಲಿ ದೇವರಿಗೂ ಜಾಗ ಮಾಡಿಕೊಟ್ಟು, ಆ ಪಠದ ಮುಂದೆ ದೀಪವನ್ನೂ
ಅಗರಬತ್ತಿಯನ್ನೂ ಹಚ್ಚಿಟ್ಟು, ಚಂಪಾ ದೇವರಿಗೆ ನಮಸ್ಕಾರ ಮಾಡಿದ್ದಳು.
ಗಂಡ ಬರುತ್ತಲೇ ಆಕೆ ಕೇಳಿದಳು:
"ಏನ್ರೀ, ಇಲ್ಲಿ ತುಳಸೀಕಟ್ಟೆ ಇದೆ ತಾನೆ?ಕಾಣಿಸ್ಲೇ ಇಲ್ಲ.'
"ಎಂಥಾ ಮಾತಾಡ್ತೀಯೆ! ವಠಾರದಲ್ಲಿ ತುಳಸೀಕಟ್ಟೆ ಇಲ್ದೆ! ಹೊರಗೆ ಹಿತ್ತಿ
ಲಲ್ಲೇ ಇದೆ_ಒಂದು ಮೂಲೇಲಿ."
"ಸರಿ ಹಾಗಾದರೆ" ಎನ್ನುತ್ತ ಚಂಪಾ ಹಾಸಿಗೆ ಹಾಸತೊಡಗಿದಳು.
"ಅದನ್ನ ಆಮೇಲೆ ಮಾಡು-ಕಾಫಿ ಆರಿ ಹೋಗುತ್ತೆ. ಅಲ್ಲಿ ತಿಂಡಿ ಎಲ್ಲಾ
ಆಗ್ಹೋಗ್ಬಿಟ್ಟಿತ್ತು. ನಮ್ಮ ಸೌಭಾಗ್ಯಕ್ಕೆ ಸಿಕಿದ್ದೇ ಇದು-ಚೌಚೌ."
"ಹೋಗಲಿ ಬಿಡಿ. ಇಷ್ಟು ಸಾಲ್ದೇನು? ಹಣ್ಣು ಬೇರೆ ತಂದಿದೀರಾ..."
...ರಾತ್ರೆಯ ಉಪಹಾರ ಮುಗಿಯಿತು.

9