ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೩೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩ev ಯವನ ಯಾಮಿನೀ ವಿನೋದ, ಎಂಬ ಜಂಬೂಫಲತ್ರಯದ ಕಥೆ. - + 0=3 ಬಳಿಕ ಚಹರಜಾದಿ ಸುಲ್ತಾನರನ್ನು ನೋಡಿ, “ಮೂಾ ... ನಾ ನು ಇದುವರಿಗೂ ಕಲೀಫ ರ್ಹ ಅಲರಾಸ್ಥಿದರು ನಗರಕೊಧನೆಗಾಗಿ ಹರಟುಬಂದ ಕಥೆಯನ್ನು ನಿಮಗೆ ಹೇಳಿದ್ದರೂ, ಪುನಹ ಅವರು ಮಾ ಡಿದ ಮತ್ತೊಂದು ವಿಚಿತ್ರವಾದ ಸುಗತಿಯನ್ನು ತಿಳಿಯಪಡಿಸುವುದಕ್ಕಾಗಿ ತಮಗೆ ಅವರ ಚರಿತ್ರೆಯನ್ನು ಹೇಳಬೇಕಾಗಿರುವುದು, ಒಂದಾನೊಂದು ದಿನ ಕಲೀಫರು ತಮ್ಮ ಮಂತ್ರಿಯಾದ ಗಯವರನನ್ನು ಕುರಿತು ನಮ್ಮ ಪಟ್ಟಣದ ಜನರು ನ್ಯಾಯದಿಂದುಂಟಾದ ಸಂತೋಷವನ್ನನುಭವಿಸುತ್ತಿರು ಪರೆ ? ಇಲ್ಲವೋ ? ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ, ನಾವು ಮತ್ತೊಂದುಸಾರಿ ಪ್ರಯಾಣಮಾಡಬೇಕಾಗಿರುವುದು, ಪುಜೆಗಳು ಯಾ ಪಯಾವ ಉದ್ಯೋಗಸ್ಥರ ವಿಷಯದಲ್ಲಿ ಎಂಥೆಂತಹ ಅಭಿಣಾಯವುಳ್ಳವ ಆಗಿರುವರೆಂಬುದನ್ನು ತಿಳಿದು, ಅನ್ಯಾಯವಂತರಾದ ಉದ್ಯೋಗಸ್ಥರಿರು ಪರಂಬುದು ತಿಳಿದುಬಂದರೆ, ಅವರನ್ನು ತೆಗೆದುಹಾಕಿ ಅವರಿಗೆ ತಕ್ಕ ಶಿಕ್ಷೆ ಯನ್ನಿತ್ತು, ಗೌರವಸ್ಥರಾದವರಿಗೆ ಬಹುಮಾನಮಾಡಿ, ಉತ್ತಮರಾದವ ರನ್ನು ಕಾರ್ಯದಲ್ಲಿ ನಿಯೋಗಿಸಬೇಕಾಗಿರುವುದು. ಆದುದರಿಂದ ಈದಿನ ರಾತ್ರಿ ನಗರಸಧನೆಗೆ ಹೊರಡಲು ಸಿದ್ಧನಾಗಿರಬೇಕೆಂದು ಹೇಳಲು ಮಂ ತ್ರಿಯು, ರಾಜಾಜ್ಞೆಯಂತೆ ಕಾಲಕ್ಕೆ ಸರಿಯಾಗಿ ರಾಜನ ಬಳಗ ಬಂದು ಸೇರಿದನು. ಬಳಿಕ ಕವರೂ ಗಯವರನೆಂಬ ಮಂತ್ರಿಯ, ಚೈಜೆಸರ ದಾರನಾದ ಮಸೋದು, ಎಂಬುವರು ಸಹ ತಮ್ಮ ವೇದಗಳನ್ನು ಮರೆಸಿ ಕೊಂಡು ಹೊರಟರು. ಅವರು ನಾನಾ ಬೀದಿಗಳನ್ನು ತರಿಸಿಕೊಂಡು ಕಟ್ಟ ಕಡೆಗೆಬಂದ, ಸಣ್ಣಸಂದಿಗೆ ಬಂದರು. ಅಲ್ಲೊಬ್ಬ ಮುದುಕನು, ತಲೆಯ ಮೇಲೆ ಬಲೆಯನ್ನು ಹೊತ್ತು, ಕೈಯಲ್ಲೊಂದು ಗಾಳದ ಬೆತ್ತವನ್ನು ಹಿಡಿದುಕೊಂಡು, ಮುಂದೆ ಹೋಗುತ್ತಿರುವ ಬೆಳದಿಂಗಳ ಬೆಳಕಿನಲ್ಲಿ ಕರೀಫರು ಈತನು ತುಂಬ ದರಿದ್ರನಂತೆ ಕಾಣುತ್ತದೆ. ಇವನ ಯೋಗಕ್ಷೇಮವನ್ನು ವಿಚಾರಿಸಬೇಕೆಂದು ನುಡಿಯಲು, ಗಯವರು ಆತನ