ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೦ ಯವನ ಯಾಮಿನೀ ವಿನೋದ ವಿಂಬ, ಮೋಹವನ್ನು ಇಂದಿಗೆ ತೀರಿಸುವೆನೆಂದು ನುಡಿದು ತನ್ನ ಕೈಯಲ್ಲಿದ್ದ ಕತ್ತಿಯಿಂದವರನ್ನು ಕಡಿಯುವುದಕ್ಕೆ ಉದ್ಯುಕ್ಯನಾಗಲು ಆತನ ಮಾವ ನಾದ ಅರೆನಾಸನು ಆತನನ್ನು ಬಹಳವಾಗಿ ಸಮಾಧಾನವಾಡಿ ಅಯಾ ! ನಿನ್ನ ಮಕ್ಕಳನ್ನು ನೀನೇ ಕೊಲ್ಲುತಿರುವೆಯಾ ! ಇದೇನಾಸ್ಟ್ರ? ನಾನು ಹೇಳುವ ಮಾತುಗಳನ್ನು ಕಳು. ಅವರು ಅಂತಹ ತಪ್ಪು ಕೆಲಸ ವನ್ನು ಮಾಡಿರುವರೋ ಇಲ್ಲವೋ ಅದನ್ನು ವಿಚಾರಿಸಿ ತಿಳಿದು ನಂತರ ಅವ ರಿಗೆ ತಕ್ಕ ಶಿಕ್ಷೆಯನ್ನು ಮಾಡಬಹುದೆಂದು ಹೇಳಿದುದರಿಂದ ಆತನು ಸಮಾ ಧಾನಮಾಡಿಕೊಂಡು ತನ್ನ ಸಭಿಕರಲ್ಲಿ ಒಬ್ಬನಾದ ವಜೀರನನ್ನು ಕರೆದು ಈ ಮಕ್ಕಳನ್ನು ಅರಣ್ಯಕ್ಕೆ ಕರೆದುಕೊಂಡುಹೋಗಿ ನಿನಗಿಷ್ಯವಾದ ಬಣ್ಣ ಇವರ ಕುತ್ತಿಗೆಯನ್ನು ಕೆಯ್ಯು ಗುರುತಿಗಾಗಿ ಇವರ ಬಟ್ಟೆ Mಳನ್ನು ತೆಗೆದುಕೊಂಡ ಬಂದರೆ ಹೊರತು ಇಲ್ಲವಾದರೆ ನನ್ನ ಆಸ್ಥಾನಕ್ಕೆ ನೀನು ಬರಬೇಡವೆಂದು ಖಂಡಿತವಾಗಿ ನುಡಿಯಲು, ಆತನು ಆ ಬಾಲಕರನ್ನು ಕರೆದುಕೊಂಡು ಅರಣ್ಯವನು = ರಾಜಾಜ್ಞೆಯನ್ನು ಅವರಿಗೆ ತಿಳಿ ಸಲು, ರಾಜಕುಮಾರರು ಏನೂ ಹೆದರದೆ ಅಯಾ ! ದೈವಸಂಕಲ್ಪ ವಿದ್ಯ೦ತ ಆಗಲಿ, ನಮ್ಮಗಳ ಕೊಲೆಗೆ ನೀನು ಕಾರಣನಲ್ಲವೆಂಬುದು ನನಗೆ ತಿಳಿವುದು, ಆದ.ದರಿಂದ ನೀನು ಧೈರ್ಯವಾಗಿ ರಾಜೆಯಂತೆ ನಡಿಸ ಬಹುದೆಂದು ಹೇಳಿದರು. ಬಳಿಕ ಆತನು ತನ್ನ ಕಾರ್ಯವನ್ನು ಜರಗಿಸಲುದುಕನಾ ಗುವ ಸಮಯವನ್ನು ನೋಡಿ ಅಯಾ ! ನನ್ನನ್ನು ಮೊದಲು ಕಡಿದು ಹಾಕು, ಅಯ್ಯೋ ! ನನ್ನ ಮೊದಲು ಕಡಿದುಬಿಡು. ಹಾಗಾದರೆ ಬಾಲ್ಯದಿಂದಲA ಭಾತೃವಾತ್ಸಲ್ಯದಿಂದ ಬೆಳೆದಿರುವ ನಮ್ಮಗಳಿಗೆ ವ್ಯಸ ನವುಂಟಾಗಲೆಂದು ಪ್ರಾರ್ಥಿಸಿ, ಪುಣಾತನಾದ ನಜೀರನೆ ನಿನಗೆ ನಮ್ಮ ಗಳಮೇಲೆ ದಯವುಂಟಾಗಿದ್ದರೆ ನಮ್ಮಿಬ್ಬರನ್ನು ಒಂದಾಗಿಕ, ಒಂದೇ ವೆಟ್‌ನಲ್ಲಿ ನಮ್ಮಗಳ ತಲೆಯನ್ನು ಕಡಿದುಹಾಕಿದರೆ ಯಾರಿಗೂ ತಂದರೆ ಯುಂಟಾಗದೆಂದು ನುಡಿಯಲು, ಆತನು ಅವರನ್ನು ಬಂಧಿಸಿ ಕೈಗತಿ ಯಿಂದ ಅವರನ್ನು ಕತ್ತರಿಸಲುದುಕನಾಗುವ ಕಾಲಕ್ಕೆ ಸರಿಯಾಗಿ, ಕುದುರೆಯು ಕಿತ್ತುಕೊಂಡು ಉತ್ತಮವಾದ ಬೆಲೆ ಬಾಳುದ ಸವಿನು ಗಳ ಸಹಿತವಾಗಿ ಅರಣಮಾರ್ಗವನ್ನು ಕುರಿತು ತೆರಳತು. ಅದನ ನೋಡಿ ಡಿ : ೨ +4 + H