ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 86 ಕರ್ಣಾಟಕ ಕವಿಚರಿತೆ. [16 ನೆಯ

ಅಲಸದೆ ನಾಲ್ಕುಂ ಗತಿಯೊಳ್ | ಬಳಲಿಸಿದೆನ್ನೊಂದು ಚಿತ್ತವೃತ್ತಿಯ ಪರಿಯಂ | ತೊಲಗಿಸಿ ತನ್ನೊಳ್ ನಿಲಿಸುವ | ಸುಲಭತೆಯಂ ಬಿಡದೆ ನೆನೆವುದೆನಗೆಂದಹುದೋ || ಒಂದಿದ ವಿಷಯಕಷಾಯದ | ದಂದುಗಮಂ ಕಿಡಿಸಲಾರ್ಪ ಪರಮಾನಂದಂ|  ಬಂದು ನೆಲೆಗೊಳಿಸುವಂದದ | ಛಂದಂಗಳ ಬಿಡದೆ ನೆನೆವುದೆನಗೆಂದಹುದೋ ||
               5 ತತ್ವಭೇದಾಷ್ಟಕ 
   ಇದರಲ್ಲಿ 9 ಪದ್ಯಗಳಿವೆ. ಒಂದು ಪದ್ಯವನ್ನು ಉದ್ಧರಿಸಿ ಬರೆ ಯುತ್ತೇವೆ___
   ಕೂಡೆ ಬಾರದ ಪೂತಿಗಂಧದ ದೇಹದಂದವ ನೋಡು ನೀ। 
   ಗಾಡು ಬೇಗದಿ ಸಂಗಸಂಗವ ಬಿಟ್ಟು ತೊಟ್ಟನೆ ರಾಗದಿಂ || 
   ದಾಡುವಲ್ಲಿಯು ಪಾಡುವಲ್ಲಿಯು ನೋಡುವಲ್ಲಿಯು ನಿನ್ನನೇ | 
   ನೋಡಿ ನಿನ್ನೊಳು ಭಾವಿಸಾತ್ಮನ ಚಾರುತತ್ವದ ಭೇದಮಂ ||
                _________
               ಜಿನದೇವಣ್ಣ    1444 
   ಈತನು ಶ್ರೇಣಿಕಚರಿತ್ರೆಯನ್ನು ಬರೆದಿದ್ದಾನೆ. ಇವನು ಜೈನಕವಿ. ಈ ಗ್ರಂಥವನ್ನು ಶಕ 1366 ರಲ್ಲಿ, ಎಂದರೆ 1444ರಲ್ಲಿ, ಬರೆದಂತೆ ಹೇಳುತ್ತಾನೆ ಎಂದು ಮೆ|| ರೈಸ್ ಬರೆದಿದ್ದಾರೆ.

ಇವನ ಗ್ರಂಧ

                ಶ್ರೇಣೀಕಚರಿತ್ರೆ 
   ಇದರಲ್ಲಿ ಶ್ರೇಣಿಕರಾಜನ ಕಥೆ ಹೇಳಿರುವಂತೆ ತೋರುತ್ತದೆ.
               __________
                ವಿಜಯಣ್ಣ.    1448 
   ಈತನು ದ್ವಾದಶಾನುಪ್ರೇಕ್ಷೆಯನ್ನು ಬರೆದಿದ್ದಾನೆ. ಇವನು ಜೈನ ಕವಿ, ಕುಂತಳದೇಶದ ಬೆಳುವಲನಾಡೊಳಗಣ ವಮ್ಮನಭಾವಿಯ ಶಾಂತಿ ನಾಥಬಸದಿಯಲ್ಲಿ ಆ ಊರ ಪ್ರಭು ಹೊನ್ನಬಂದಿಯ ದೇವರಾಜನ ಆಜ್ಞಾನುಸಾರವಾಗಿ ಈ ಗ್ರಂಥವನ್ನು ಶಕ 1369ನೆಯ ವಿಭವಸಂವತ್ಸರದಲ್ಲಿ (1448) ಬರದಂತೆ ಕವಿ ಹೇಳುತ್ತಾನೆ. ಈತನ ಸ್ಥಳ ವೆಮ್ಮನಭಾವಿಯಾಗಿರಬಹುದು. ಈತನ ಗುರು ಪಾರ್ಶ್ವಕೀರ್ತಿ ಎಂದು ತೋರುತ್ತದೆ.  ದೇವ