ಈ ಪುಟವನ್ನು ಪ್ರಕಟಿಸಲಾಗಿದೆ

೧೯೮ / ಕುಕ್ಕಿಲ ಸಂಪುಟ

ಕನ್ನಡ ಯಕ್ಷಗಾನ ಸಂಶೋಧನೆಯ ಭರದಲ್ಲಿ ಇನ್ನೇನೇನು ಅಪಶ್ರುತಿಗಳು ಹೊರಟಿವೆ ಎಂಬ ವಿಷಯಗಳನ್ನೆಲ್ಲ ನಾನು ಸಿದ್ಧಪಡಿಸುತ್ತಿರುವ 'ಯಕ್ಷಗಾನ ಸುದರ್ಶನ' ಎಂಬ ಗ್ರಂಥದಲ್ಲಿ ವಿಸ್ತಾರವಾಗಿ ನಿರೂಪಿಸಲಿಕ್ಕಿದ್ದೇನೆ.

ಕನ್ನಡ ಯಕ್ಷಗಾನದ ಪ್ರಾಚೀನತೆಗೆ ಆಧಾರವಾಗಿ ದಿ| ಪಂಡಿತ ತಿಮ್ಮಪ್ಪಯ್ಯನವರೂ ಶ್ರೀಯುತ ಕಾರಂತರೂ ಅವಲಂಬಿಸಿರುವ 'ಎಕ್ಕಲಗಾಣ' ಎಂಬುದರ ಅರ್ಥವಿಚಾರದಲ್ಲಿ ಬರದ ನನ್ನ ಲೇಖನವನ್ನು ಈಗ ಅಚ್ಚಿನಲ್ಲಿರುವ 'ರಾಷ್ಟ್ರಮತ' ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸುವ ಬಗ್ಗೆ ಕೊಟ್ಟಿರುತ್ತೇನೆ.



(ರಾಷ್ಟ್ರಮತ : ೨೬ನೇ ಆಗಸ್ಟ್ ೧೯೬೦.)