ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರುಳತನ , ಚೌಕಿಯ ಮುಖ್ಯವಾದ ಕುತುಫಖಾನನು 'ಇದನ್ನು ನೋಡಿ ತನ್ನ ಕೈಯೊಳಗಿನ ಛಯಂ ಕರವಾದ ಚಪಗೊಡಲಿಯನ್ನು ಎತ್ತಿಕೊಂಡು ಗದ್ದರಿಸುತ್ತ ಧಾವಿಸಿ ಅಲ್ಲಿಗೆ ಬರಲು, ಜನರು ಅತ್ತಿಂದತ್ತ ಹಿಂದಕ್ಕೆ ಸರಿದು ನಿಂತುಕೊಂಡು, ಹೊಡೆದಾಟವು ನಿಂತು ಗದ್ದಲವು ಕಡಿ ಮೆಯಾಯಿತು. ಆದರೂ ಹೊಡದಾಡಲಿಕ್ಕೆ ನಿಂತವರು ಒಬ್ಬರನ್ನೊಬ್ಬರು ಕೆಟ್ಟ ಕಣಿ, ನಿಂದ ನೋಡುತ್ತಿದ್ದರು. ಹೀಗೆ ಲುತುಫಖಾನನ ಗದ್ದಲವ ನಿಲ್ಲಿಸಿ ಗದರಿಸಿ- “ಏನು ಗದ್ದಲವಿದು? ನಿಮ್ಮನ್ನು ಯಾರೂ ಕೇಳುವವರಿಲ್ಲವೆ? ಖುದಾಯಾರ, ಚಾವುದ, ಪುಂಡಾಟಿಕೆಯೇನಿದು? ಈ ತರುಣಿ ಯಾರು? ಯಮದೂತರಂತೆ ಈವಿಯನ್ನು ಹೀಗೆ ಯಾಕೆ ಎಳೆದಾಡುವಿರಿ? ಹೆಂಗಸರನ್ನು ಛಾವಣಿಯಲ್ಲಿ ಕರತರಲಾಗದೆಂದು ಶಹಾನು ನಿರ್ಬಂಧಿಸಿದ್ದು ನಿಮಗೆ ಗೊತ್ತಿಲ್ಲವೆ?”ಎಂದು ನುಡಿಯುತ, ಬೈರಾಗಿಣಿಯಕಡೆಗೆ ನೋಡಿದನು. ಆಕೆಯ ಮೋಹಕಸ್ವರೂಪವು ಲುತು ಫನ ಮನಸ್ಸನ್ನು ಆಕರ್ಷಿಸಿತು, ಆತನು ಎವೆಯಿಕ್ಕದೆ ಆಕೆಯನ್ನು ನೋಡತೊಡಗಿ ದನು. ಜನರು ಸುತ್ತು ಮುತ್ತು ನೆರೆದಿದ್ದರು. ದಾವುದನು ಬೈರಾಗಿಣಿಯ ರಟ್ಟಿಯನ್ನು ಹಿಡಿದಿದ್ದನ್ನು, ಆಗ ಲುತುವನು ಆತನನ್ನು ಕುರಿತು-ದಾವುದ, ಈ ರಾಗಿಣಿಯ ಕೈಬಿಡು ಇಳೆಯ ಬಾಧ್ಯತೆಗೆ ನೀನು ಸಂಬಂಧಪಡುವದಿಲ್ಲ. ಶಹಾನ ಅಪ್ರಣೆಯನ್ನು ಮೀರಿದ್ದರಿಂದ ನೀನು ಕಠಿಣಶಿಕ್ಷೆಗೆ ಪಾತ್ರನಾಗಿರುವೆ. ಈ ಸುದ್ದಿಯು ಶಹಾನ ಕಿವಿಗೆ ಮುಟ್ಟಿದರೆ, ಆತನು ನಿನ್ನನ್ನು ತೊ ಫಿನಬಾಯಿಗೆ ಕೊಡಬಹುದು. ಸರಿಹಿಂದಕ್ಕೆ ತೊಂಟ ತನ ಮಾಡಿದರೆ ನಿನ್ನ ಮುಸುಕೆ ಬಿಗಿಸಿ ಸೆರೆಮನೆಯಲ್ಲಿ ಚಲಿಸೇನು.” ಎಂದು ಬೆದರಿಕೆಹಾ ಕಲು, ದಾವುದು ಸಂತಾಪದಿಂದ ತಲೆಯಲ್ಲಾಡಿಸುತ್ತ-ಮಿಯಾಸಾಬ , ಇದನ್ನೆಲ್ಲ ನಾನುಬಿನು, ತಪಾನಅಪ್ಪಣೆಯು ನಮ್ಮಂಥ ಬಡಸಿಪಾಯಿಗಳಿಗೆ; ನಿಮ್ಮಂಥ ಅಮಿ ರ-ಉಮರಾವರಿಗಲ್ಲ. ಅವರು ಬತ್ತಲೆ ಕುಣಿದರೂ ಯಾರೂ ಕೇಳುವದಿಲ್ಲ. ನನ್ನ ಕಾಯ ದೆಯೇ ಬೇರೆ, ನಿಮ್ಮ ಕಾಯದೆಯೆ? ಬೇರೆಯಲ್ಲವೆ? ಆದರೆ ಮಿಯಾಸಾಹೇಬ, ಬಹು ಚೋಣಿ, ನಮ್ಮಂಥ ಸಿಪಾಯಿಗಳಿರುವದರಿಂದಲೆ? ನಿಮ್ಮಂಥ ಅವಿದ-ಉಮರಾವರ, ಹಾಗು ಸರದಾರರ ಪರಿಣಾಮವಾಗಿದೆ. ಇಲ್ಲದಿದ್ದರೆ ಕಾಫರರು ಇಷ್ಟು ಹೊತ್ತಿಗೆ ನಿಮ್ಮನ್ನೂ, ಶಹಾನ ತಿಂದುಬಿಡುತ್ತಿದ್ದರು. ನಮ್ಮಗೊಡವಿಗೆ ನೀವು ವಿಶೇಷವಾಗಿ ಬರಬಾರದು. ನಮ್ಮನ್ನು ಹೀಗೆ ಛಲಿಸುವದು ಸರಿಯಲ್ಲ. ಇಂಥ ಸಣ್ಣಪ್ರಟ್ಟ ಕೆಲ ಸದಲ್ಲಿ ನೀವು ಕೈಹಾಕುವದು ಭೂಷಣವಲ್ಲ. ಇದರಿಂದ ಸರ್ವರಾ ಹಿತವಾಗದು. ಇಂಥ ಸಣ್ಣ ಕೆಲಸಗಳ ವ್ಯವಸ್ಥೆಯನ್ನು ನಮ್ಮೊಳಗೆ ನಾವು ಮಾಡಿಕೊಳ್ಳುವೆವು. ಇಷ್ಟು ಅನುಕೂಲತೆಯನ್ನು ನೀವು ನನಗೆ ಮಾಡಿಕೊಡಲೇಬೇಕು; ಅಂದರೆ ನಿಮ್ಮ ಸಲುವಾಗಿ ಯುದ್ದದಲ್ಲಿ ನಮ್ಮ ಚಂಡುಕೊಡಲು ನಾವು ಸಿದ್ಧರಾಗುವೆವು. ವೈರಿಗಳಾದ ಕಾರು ರುಂಡಗಳ ಚಂಡಾಡಲಿಕ್ಕೆ ನಾವು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಮಿಯಾಸಾಹೇಬ , ಇದರಮೇಲೆ ನೀವು ನಮ್ಮ ಬೇಟೆಯ ಆಶೆಮಾಡಿದರೆ, ಇಗೋ, ಈ ಶಸ್ತ್ರದಿಂದ ಈ ತರುಣಿಯನ್ನು ಇಲ್ಲಿಯೇ ತುಂಡರಿಸಿಚಲ್ಲುವೆನು, , ನಿಮ್ಮ ಕೈಗೆ ಹತಗೊಡಲಿಕ್ಕಿಲ್ಲ!