ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧d ಕುರುಕ್ಷೇತ್ರ' ಗಳ ಆವಶ್ಯವಿಲ್ಲ. ಆತನು ಸಣ್ಣವರೆನ್ನನು-ದೊಡ್ಡವರೆನ್ನನು, ಉಚ್ಚರೆನ್ನನು-ನೀಚರೆ ನ್ಯನು, ಕಕಾಯಿಯೆನ್ನನು-ಹಣ್ಣೆನನು, ಮನೆಯವರೆನ್ನನು-ಹೊರಗಿನವರೆನ್ನನು, ಬಿರುಸೆನ್ನನು-ಮಿದುವೆನ್ನನು, ಶ್ರೀಮಂತರೆನ್ನನು-ಬಡವರೆನ್ನನು ಆತನು ಇದಾವ ದನ್ನೂ ಎಣಿಸದೆ, ಇಂದು ನಾಳೆನ್ನದೆ ಮನಸ್ಸಿಗೆ ಬಂದಕೂಡಲೆ ನುಂಗಿನೀರುಹಿಡಿಯುವನು? ಇಂಥ ಮಹಾಕಾಲನಿಗೆ ಕುರುಪಿತಾಮಹನಾದ ಭೀಷ್ಮಾಚಾರ್ಯನು “ ಸರ್ಗಪ್ರಲಯ ಲೋಕರ್ತಾ ತನ್ನೆ ಕಾಲಾತ್ಮನೇನಮಃ” ಎಂದು ನಮಸ್ಕರಿಸಿರುವನು; ಆದ್ದರಿಂದ ನಾವೂ ವಾಚಕರೇ, ನೀವೂ ಆ ಕಾಲಾತ್ಮನಾದ ಪರಮಾತ್ಮನನ್ನು ಈಗ ನಮಸ್ಕರಿಸೋಣ! ೨೧ನೆಯ ಪ್ರಕರಣ-ಸುಖಸೂಚನೆ. »-303 ನುಷ್ಯಮಾತ್ರರನ್ನು ಅಭಿಮಾನವು ಬಿಟ್ಟಿಲ್ಲ. ಸ್ವಾಭಿಮಾನ, ಸ್ವಜನಾಭಿಮಾನ, ಸ್ವದೇಶಾಭಿಮಾನ, ಸ್ವಧರ್ಮಾಭಿಮಾನ ಇತ್ಯಾದಿ ಹೆಸರುಗಳಿಂದ ಅದು ಸರ್ವಶ್ರುತವಾಗಿ ರುವದು. ಪೇಶೈಯರು ನಮ್ಮ ಹಿಂದೂಜನರಿಗೆ ಸ್ವದೇಶೀಯರು, ಸ್ವಧರ್ಮದವರು. ಅಂಥವರ ದುರ್ದಶಿಯ ಪರಾಭವದಿಂದ ನಮ್ಮೆಲ್ಲರಿಗೆ ವ್ಯಸನವಾಗುವದೂ, ನಮ್ಮ ಮನಸ್ಸು ಚಡಪಡಿಸುವದೂ ಸ್ವಾಭಾವಿಕವೇ ಸರಿ. ಅದರಲ್ಲಿಯೂ ಬ್ರಾಹ್ಮಣರು, ತತ್ರಾಪಿ ಚಿತ್ರ ವನ ಬ್ರಾಹ್ಮಣರು ಹೆಚ್ಚು ವ್ಯಸನಾಕ್ರಾಂತರಾದರೆ ಆಶ್ಚರ್ಯವಲ್ಲ ; ಆದರೆ ಸೃಷ್ಟಿ-ಸ್ಥಿತಿಲಯ ಕರ್ತೃಾಧಿಕಾರವು ಈಶ್ವರನ ಕಡೆಗಿರುವದರಿಂದ, ಈಶ್ವರೇಚ್ಛೆಯಹೊರತು ಒಂದು ಕಡ್ಡಿ ಕೂಡ ಕದಲುವದಿಲ್ಲೆಂಬದನ್ನು ಮನಸ್ಸಿನಲ್ಲಿ ತಂದರೆ, ಹೀಗೆ ಅಭಿಮಾನದಿಂದ ವ್ಯಸನ ಪಡುವದು ಗೌಣವೇಸರಿ! ಆ ಯಾ ಜಾತಿ ಯ ವ ರು, ಆ ಯಾ ಧ ನ ೯ ದ ವ ರು, ಆಯಾದೇಶದವರು ತಮ್ಮ ತಮ್ಮ ಜಾತಿ-ಧರ್ಮ-ದೇಶಗಳ ಹಿತವನ್ನು ಮಾತ್ರ ನೋಡಿ ಕೊಳ್ಳಬಹುದು; ಆದರೆ ವಿಶ್ವ ಪಾಲಕನು ವಿಶ್ವದೊಳಗಿನ ಎಲ್ಲ ಜಾತಿಯವರ, ಎಲ್ಲ ಧರ್ಮ ದವರ, ಎಲ್ಲ ದೇಶದವರ ಹಿತವನ್ನು ನೋಡಿಕೊಳ್ಳಬೇಕಾಗುವುದು. ಅಂದಬಳಿಕ ಆತನ ತಂತ್ರದ ಜ್ಞಾನವು ನಮಗೇನು ಆಗುವದು? ನಾವು ದೀನರು, ಈಶ್ವರನು ಸಮಸ್ತಲೋಕ ಗಳಿಗೂ ಇಪ್ಪಿತಾರ್ಥಗಳನ್ನು ಕೊಡುವದಾತೃವು; ನಾವು ಅಲ್ಪಜ್ಞರು, ಈಶ್ವರನು ಸರ್ವಜ್ಞನು. ಆದ್ದರಿಂದಲೇ ಜಗತ್ತಿನ ಆಗು-ಹೋಗುಗಳೆಲ್ಲ ಆತನ ತಂತ್ರದಿಂದ ಜಗತ್ತಿನ ಹಿತಕ್ಕಾಗಿಯೇ ಆಗುತ್ತವೆಂತಲೂ, ಒದಗಿದಪ್ರಸಂಗಗಳೆಲ್ಲ ಈಶ್ವರಪ್ರಸಾದಗಳೆಂತಲೂ ನಾವು ತಿಳಿದು ತಪ್ಪುಗಳನ್ನು ತಿದ್ದಿಕೊಳ್ಳುತ್ತ ನಮ್ಮನಮ್ಮ ಕರ್ತವ್ಯಗಳನ್ನು ಮಾಡುತ್ತಿರ ಬೇಕು. ಮನೆಯಜಾಣನಾದ ಯಜಮಾನನು ಮನೆತನದ ಹಿತಕ್ಕಾಗಿ ಒಮ್ಮೆಮನೆಯ ಜನರನ್ನು ಅವರವರ ತಪ್ಪುಗಳಿಗಾಗಿ ದಂಡಿಸುವನು, ಒಮ್ಮೆ ಅವರ ಸೌಜನ್ಯಕ್ಕಾಗಿ ಅವರನ್ನು ಪ್ರೋತ್ಸಾಹಿಸುವನು. ಆತನ ಆಶಿಕಾ ಪ್ರೊತ್ಸಾಹಗಳು - ಕುಟುಂಬದವರ