ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಕುರುಕ್ಷೇತ್ರ ಬೆಲೆಗಿಂತಲೂ 8 ರುವದಂದು ಪಾರಶೀಭಾಷೆಯ ಉಕ್ಕಿಯಿರುವದು, ಅದ ನ್ನು ಮರೆಯ ಬೇಡ, ಮೋಸಗಾರರೂ, ವಿಶ್ವಾಸಘಾತಕರೂ ಆದವರ ಮೊರೆ ಗಳು ಕರ ಕಿಡಲಿ! ಖುದಾನು ನಿನಗೆ ಸದ್ಭುದ್ಧಿಯನ್ನು ಕೊಡಲಿ! ಮಿತ್ರಾ, ಇದ ಕ್ಕೂ ಹೆಚ್ಚಿಗೆ ನಾನೇನು ಬರೆಯಲಿ?”

  • ಮಾನಧನನಾದ ಭಾವುಸಾಹೇಬನು ಸುಜಾನಿಗೆ ಇಷ್ಟು ವಿನಯದಿಂದ ಕೊರಳಿಗೆ ಬಿದ್ದು ಪತ್ರ ಬರೆದದ್ದನ್ನು ನೋಡಿ ವಾಚಕರಿಗೆ ಆಶ್ಚರ್ಯವಾಗಬಹು ದು! ಆದರೆ ಪ್ರಸಂಗವು ಯಾರ ಮನೆ ದದು? ಜೀವ ಹೋಗುವ ಕಾಲದಲ್ಲಿಯೂ ಮನುಷ್ಯನು ಒದ್ದಾಡುವದನ್ನು ಬಿಡುವದಿಲ್ಲ. ಮನುಷ್ಯನ ಅಶಾಶಂಕುವು ಕಡೆ ತನಕ ಹರಿಯುವದಿಲ್ಲ. ಅದರಂತೆ, ಭಾವುಸಾಹೇಬನು ತನ್ನ ಸಂರಕ್ಷಣದ ಕಡೆ ಯ ಉಪಾಯವೆಂದು ೬ಳಿದು ಇಷ್ಟು ಅಭಿಮಾನ ತೊರೆದು ಸುಜಾನಿಗೆ ಪತ್ರ ಬರೆದಿದ್ದನು. ಅದನ್ನು ಓದಿ ಸುಜಾಉದಲನ ಮನಸ್ಸಿನಲ್ಲಿ ಆಶ್ಚರ್ಯ, ದು ರ್ಥರತಾ, ಕರುಣಾ, ಭಯ-ಭಾವಗಳು ಕ್ರಮವಾಗಿ ಹುಟ್ಟಿ, ಲಯ ಹೊಂದಿದವು. ಆತನು ಕಾಶೀರಾಜನೊಡನೆ ಆಲೋ ಚಿಸತೊಡಗಿದನು. ಅವರಿಬ್ಬರಲ್ಲಿ ಬಹಳ ಹೊತ್ತು ಅರೆದಾಟವಾಯಿತು. ಬಳಿಕ ಸ್ಥಿತಿ ಉದ್ಲನು ಕಾಶೀರಾಜನ ಅನುಮ

Jಯಿಂದ ಭಾವುಸಾಹೇಬನಿಗೆ ಉತ್ತರಬರೆದನು, ಆದರ ತಾತ್ಪರ್ಯವೇನಂದರೆ ಭಾವುಸಾಹೇಬ, ನಿಮ್ಮೊಡನೆ ನನ್ನ ಮಿತ್ರತ್ವವು ಸ್ಥಿರವಾಗಿರುವದು. ಅದರ ವಿಷಯವಾಗಿ ತಾವು ನಿಶ್ಚಿಂತರಾಗಿರಬೇಕು. ನಿಮ್ಮ ಈ :ನ ಮಸಲತ್ತನ್ನು ನಾವು ಎರಡನೆಯವರಿಗೆ ಸರ್ವಥಾ ತಿಳಿಸುವದಿಲ್ಲ. ನೀವು ದುರಾಣಿಯ ಛಾವಣಿಯಮೇ ಆ ಏರಿ ಬರುವದಾದರೆ, ಹೀಗೆ ಪ್ರಸಿದ್ದವಾಗಿ ಆರವುಗೆಟ್ಟ: ಸೌತಣೆಯಿಂದ ಬರ ಬಾರದು; ಇದರಿಂದ ನಿಮಗೆ ತಪ್ಪದೆ ಹಾನಿಯಾಗುವದೆಂದು ನನಗೆ ತೋರು ತದೆ. ನೀವು ಗುಪ್ತ ರೀತಿಯಿಂದ ಜಾಗರೂಕವಾದ ಸಿದ್ಧತೆಮಾಡಿಕೊಂಡು ಏರಿ ಬರತಕ್ಕದ್ದು, ಹೀಗೆ ಏರಿಬ೦ದರೆ ಕದಾಚಿತ್ ನಿಮಗೆ ಲಾಭವಾದೀತಂದು ನಾನು ಸೂಚಿಸುವೆನು, ನಿತ್ರದ ಸಂಬಂಧದಿಂದ ನಾನು ಹೀಗೆ ತಿಳಿಸುತ್ತೇನೆ. ಇದರಮೇಲೆ ನಿಮಗೆ ಸರಿದೊರಿದಂತೆ ಮಾಡಬಹುದು, ಈ ಪ್ರಸಂಗದಲ್ಲಿ ನಾನು ಹೀಗೆಯೇ ನಡೆದುಕೊಂಡನೆಂದು ಹೇಳಿ, ನಿಮಗೆ ವಚನಬದ್ದನಾಗಲು ಬರುವ ಹಾಗಿಲ್ಲ. ನೀವು ನನ್ನ ಬಂಧುಗಳಿರುವಿರೆಂಬದು ನನ್ನ ಲಕ್ಷದಲ್ಲಿ ಸಂಪೂರ್ಣವಾ ಗಿರುವದರಿಂದ, ನನಗೆ ಸ್ವಲ್ಪ ಹಾದಿ ಸಿಕ್ಕರೆ ಸಾಕು, ನಿಮ್ಮ ಹಿತವನ್ನು ಸಾಧಿಸಿದೆ ನೆಂದು ತಿಳಿಯಿರಿ. ಮಲ್ದಾರರಾಯನಮೇಲೆ ಮಾತ್ರ ನಿಮ್ಮ ಪೂರ್ಣ ಲಕ್ಷವಿರಬೇ ಕು, ಆತನು ಮನಃಪೂರ್ವಕ ನಿಮಗೆ ಸಹಾಯ ಮಾಡಿದರೆ, ಇನ್ನೂ ನಿಮ್ಮ ಕೈ ಯೆಮೇಲಾಗುವ ಸಂಭವವಿರುತ್ತದೆಂದು ನನಗೆ ತೋರುತ್ತದೆ, ಹೀಗೆ ಸುಜಾನು ತನ್ನ ಕೈ ಮುಟ್ಟಿ ಪತ್ರಬರೆದು ಮೊಹರು-ಮುದ್ರೆಗಳನ್ನು ಮಾಡಿ, ಅದನ್ನು ಮಿರ್ಝಾ -ಜಾನ-ವಾಝನಿಗೆ ಮುಟ್ಟಿಸೆಂದು ಕಾಶೀರಾಜನ ಕೈ ಯಲ್ಲಿ ಕೊಟ್ಟನು ; ಆದರೆ ಮತ್ತೇನು ತಿಳಿಯಿತೋ ಏನೋ, ಆ ಧೂರ್ತ ಸುಜಾ ನು ಆ ಲಕ್ಕೂಟಿಯನ್ನು ಇಸಕೊಂಡು ತಾನೇ ಮಿರ್ಝಾನ ಕೈಯಲ್ಲಿ ಕೊಡಬೇ