ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨೨ ನೋವು
ಮನೆಯಲ್ಲಿ ದೀಪ ನಮಸ್ಕಾರಕ್ಕೆಂದು ಕುಳಿತಿದ್ದ ತಾಯಿಯಲ್ಲಿಗೆ ಬಂದರು.
ಆಕೆ ತಲೆ ಎತ್ತಿ ನೋಡಿದಾಗ ಶ್ರೀನಿವಾಸಯ್ಯ ಅಂದರು : " ನಾನು ಹೇಳಿದ್ದನ್ನೇ ಶಾಸ್ತ್ರಿಗಳೂ ಹೇಳಿದ್ರು." ದೇವರ ಮುಂದೆ ಕುಳಿತು ಮನಸ್ಸು ಶಾಂತವಾಗಿದ್ದ ದೊಡ್ಡಮ್ಮ ನುಡಿದರು : " ಇಬ್ಬರೂ ನೋಡಿಯಾಯ್ತು, ಮೂರನೆಯವರೂ ಒಬ್ಬರು ನೋಡ್ಲಿ. ನಾಳೆ ಹುಡುಗರ ಜತೆ ನಗರಕ್ಕೆ ಹೋಗಿ ಬಾ, ಶೀನ." " ನಾನೇ ? ನಗರಕ್ಕೆ ಹೋಗಿಬರಲೆ ?" ಭಾಗ್ಯನಗರವೆಂದೂ ಶ್ರೀನಿವಾಸಯ್ಯನವರ ಆಕರ್ಷಿಸಿರಲಿಲ್ಲ. ಮಕ್ಕಳ ದೃಷ್ಟಿಯಿಂದ ಪಟ್ಟಣವಾಸಿಗಳೊಡನೆ ಸಂಬಂಧ ಬೆಳೆಸಲು ಅವರು ಒಪ್ಪಿದ್ದರೇ ಹೊರತು– ಸುತ್ತಮುತ್ತಲ ಹಳ್ಳಿಗಳಿಂದಲೋ ತಮ್ಮ ಪೂರ್ವಜರು ವಾಸವಾಗಿದ್ದ ಮಲೆನಾಡಿ
ನಿಂದಲೋ ಸೋಸೆಯರನ್ನು ಹುಡುಕಿ ತರುವುದು ಸಾಧ್ಯವಿದ್ದಿದ್ದರೆ–
ದೊಡ್ಡಮ್ಮ ಅಂದರು : "ಗೋವಿಂದ ಈ ರೀತಿ ಹಟ ಮಾಡ್ತಿರುವಾಗ, ನಿಮ್ಮ ಸಂಬಂಧ ಬೇಡ ಅಂತ
ವಿಷ್ಣುಮೂರ್ತಿಗೆ ಹೇಳಿ ಕಳಿಸೋದು ಚೆನ್ನಾಗಿರೋಲ್ಲ, ಶೀನ. ಇವನು ಅಲ್ಲಿ ಏನೇನು ಮಾಡ್ಕೊಂಡಿದಾನೋ ಯಾರಿಗೆ ಗೊತ್ತು ? ಇವನ ಜತೆಗೆ ನೀನೂ ಹೋಗು. ಆಗ ನಿನೆಗೇ ವಿಷಯ ಗೊತ್ತಾಗುತ್ತల్ల ?"
ಮುಖವನ್ನು ಅಂಗೈಯಿಂದ ಒರೆಸಿ, ಶ್ರೀನಿವಾಸಯ್ಯ, " ಆಗಲಿ ಹೋಗ್ತೀನಿ"
ಎ೦ದರು.
...ಅಡುಗೆ ಮನೆಯಲ್ಲಿದ್ದ ಭಾಗೀರಥಿ, ದೇವರ ಮನೆಯಿಂದ ಕೇಳಿಸಿದ ಮಾತುಗಳನ್ನು
ಮೆಲುಕು ಹಾಕಿ, ' ಬೀಸುತ್ತಿರುವ ಈ ದೊಣ್ಣೆಯಿಂದ ನಾನು ತಪ್ಪಿಸಿಕೊಳ್ಳೋದುಂಟೆ ? ' ಎಂದು ಮನಸ್ಸಿನೊಳಗೇ ಗೋಳಾಡಿದಳು.
...ರಾತ್ರೆ ಸೀಮೆ ಎಣ್ಣೆಯ ದೀಪವನ್ನು ಆರಿಸಿದ ಮೇಲೆ, ಗಂಡನ ಹತ್ತಿರಕ್ಕೆ ಸರಿದು,
ಭಾಗೀರಥಿ, “ ರೀ. ಮಾವ ನಾಳೆ ನಗರಕ್ಕೆ ಹೋಗ್ತಾರಂತೆ," ಎಂದಳು.
" ಹೋಗಲಿ. ಏನೀಗ ? ಎಂದ, ಗೋಪಾಲ. " ಅಯ್ಯೋ..." ಎಂದು ಭಾಗೀರಥಿ ನಿಟ್ಟುಸಿರುಬಿಟ್ಟಳು.
೧೬
ರಾತ್ರೆ ಆ ಹೋಟೆಲಿನ ಮನುಷ್ಯ ಗಜಾನನ ಪದ್ಮನಾಭನ ಕೊಠಡಿಯಲ್ಲಿ ಮಲಗಿದ್ದ.
ಮೊಮ್ಮಗನೊಡನೆ ಮದುವೆಯ ಪ್ರಸ್ತಾಪ ಮಾಡಲು ದೊಡ್ಡಮ್ಮ ಅಳುಕಿರಬಹುದು. ಆದರೆ, ಸಂಚೋಚಪಡುವ ಅಗತ್ಯ ಗಜಾನನನಿಗೆ ಇಲ್ಲವಲ್ಲ.
ಅವನೆ೦ದ : " ಮೋಹನರಾಯರು ನಿಮ್ಮ ವಿಷಯ ಬಹಳ ಕೇಳ್ತಾ ಇದ್ರು ಪದ್ಮನಾಭರಾವ್."