ನೋವು ೧೨೭
"ನೂರು ವರ್ಷ ಬಾಳು, ಪದ್ಮ. ನನ್ನ ಆಯುಸ್ಸೂ ನಿನಗಿರಲಪ್ಪ." ...ಅಡ್ಡಮಳೆ, ಹಳ್ಳಿಯವರ ಓಡಾಟ-ಸಡಗರ ರಂಗಣ್ಣನಲ್ಲಿ ಸ್ವಲ್ಪಮಟ್ಟಿಗೆ ಹೊಸ ಚೇತನ
ವನ್ನು ತುಂಬಿದುವಾದರೂ, ಅವನೊಳಗೆ ದಟ್ಟೈಸುತ್ತಿದ್ದ ಬೇಸರದ ಕಾರ್ಮೋಡವನ್ನು ಚೆದರಿ ಸಲು ಅವು ಶಕ್ತವಾಗಲಿಲ್ಲ.
ತರಗತಿಗಳು ಆರಂಭವಾಗುವ ತನಕ ಇಲ್ಲಿಯೇ ಯಾಕಿರಬೇಕು ? ವಸತಿ-ಗೃಹವಂತೂ
ತೆರೆದೇ ಇರುತ್ತದೆ. ಸ್ವಲ್ಪ ದಿನ ಮುಂಚಿತವಾಗಿಯೇ ಅಲ್ಲಿ ಬೀಡು ಬಿಡುವುದಲ್ಲವೆ ಮೇಲು? ಎಂದು ರಂಗಣ್ಣ ಯೋಚಿಸಿದ. ಮನಸ್ಸಿಗೆ ಒಪ್ಪಿಗೆಯಾಗುವ-ನಾಲಿಗೆಗೆ ರುಚಿಸುವ- ಒಂದಿಷ್ಟು ಕಾಫಿ ತಿಂಡಿ. ಹೊಗೆ ಕಾಣುವರೆಂಬ. ವಾಸನೆ ಹಿಡಿಯುವರೆಂಬ ಯಾವ ಭಯವೂ ಇಲ್ಲದೆ ಧೂಮಪಾನ; ಗೆಳೆಯರ ಒಡನಾಟ. ಚಲಚ್ಚಿತ್ರ ಮಂದಿರಗಳಿಗೆ ಭೇಟಿ. ನಿರಾತಂಕವಾಗಿ ಅಧ್ಯಯನ...
ಅಂತಹ ವಿಚಾರ ಸರಣಿ ಬಲಗೊಳ್ಳಲು ಹೆಚ್ಚಿನ ಕಾರಣಗಳು ಬೇಕೆ? ಆದರೆ ತಂದೆಯ ಅನುಮತಿ ಪಡೆದು ರಂಗಣ್ಣ ಹೊರಡಬೇಕು. ಅವರಿಗೆ ತಿಳಿಸುವುದು
ಹೇಗೆ? ರಜಾ ಮುಗಿಯಿತು ಎಂದು ಸುಳ್ಳಾಡಲೆ? ತನ್ನಿಂದಾಗುವ ಕೆಲಸವೆ ಅದು ?
ವಿಚಿತ್ರ. ತಂದೆಗೆ ತಾನೆ ಅಚ್ಚುಮೆಚ್ಚಿನವನು, ಆದರೆ ತನ್ನೊಡನೆ ಅವರು ಮಾತನಾಡು
ವುದು ಕಡಮೆ. ಅವರ ವಾತ್ಸಲ್ಯ ತುಂಬಿದ ಧ್ವನಿ. ಮಗಳಿಗೇ ಮಿಾಸಲು. ಮೊನ್ನೆಯಷ್ಟೇ ಅನ್ನಲಿಲ್ಲವೆ ?
" ಸುಬ್ಬೀ..." " ಏನಪ್ಪ ?" " ಅರಿದಿರೋ ಸೀರೆ ಯಾಕ್ಮೊಗ ಉಟ್ಕೊಂತೀಯಾ ?" " ಅತ್ತೆಮ್ಮ ಒಲ್ಕೊಡ್ತೀನಿ ಅಂದವರೆ." "ಅದೇನು ಒಲೀತೀಯಮ್ಮ? ಆ ನಿಂಗಿ ಬಂದರೆ ಅವಳಿಗೆ ಕೊಟ್ಬುಡು. ರಂಗಣ್ಣ
ನಗರಕ್ಕೆ ಒಂಟಾಗ ಅವನ ಜತೆ ನಾನೂ ಓಗಿ, ನಿಂಗೆ ಎರಡು ಒಳ್ಳೇ ಸೀರೆ ತಕಂಬರ್ತೀನಿ."
"ಊನಪ್ಪ." ಮೊದಲಾಗಿದ್ದರೆ ಸುಭದ್ರೆ ಅಣ್ಣನ ಕೊಠಡಿಗೆ ಬಂದು ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದಳು : " ನನಗೆ ಸೀರೆ ಬತ್ತದೆ ! ಒಸ ಸೀರೆ ಬತ್ತದೆ !" [ಅದಕ್ಕೂ ಹಿಂದೆ : "ನಂಗೆ ಲಂಗ ಬತ್ತದೆ! ಒಸ ಲಂಗ ಬತ್ರದೆ !"] ತನ್ನಿಂದೇನಾದರೂ ಅಂತಹ ಪ್ರಮಾದ ಆಗಿದ್ದರೆ ಸುಮ್ಮನಿರುತ್ತಿದ್ದರೆ ತಂದೆ ?
ಆ ಜ್ವಾಲಾಮುಖಿ ಆರಲು ಬಹಳ ಕಾಲ ಬೇಕಾಗುತ್ತಿತ್ತು, ಬಹಳ ಕಾಲ.
ಆದರೆ ಸುಬ್ಬಿಯ ವಿಷಯದಲ್ಲಿ ಅವರು ದೂರ್ವಾಸನಾಗಲಿಲ್ಲ. ಹೆಣ್ಣುಮಕ್ಕಳು ಎಂದರೆ ಎಲ್ಲ ತಂದೆಯರೂ ಹೀಗೆಯೋ ಏನೋ. ಆ ದಿನದ ಬಳಿಕ ರಂಗಣ್ಣ—ಸುಭದ್ರೆಯರ ಸಂಬಂಧವೂ ಹೊಸ ರೂಪ ತಳೆದಿತ್ತು
ಮಾತು ಎಷ್ಟು ಬೇಕೋ ಅಷ್ಟು. ನೋಟದಲ್ಲಿ ನುಡಿಯಲ್ಲಿ ತ್ವೇಷ ದ್ವೇಷಗಳಿರಲಿಲ್ಲವಾದರೂ ಬಾಲ್ಯದಲ್ಲಿದ್ದ ಆತ್ಮೀಯತೆಯ ಹತ್ತು ತಂತುಗಳಲ್ಲಿ ಕೆಲವು ಕಡಿದು ಹೋದಂತಿತ್ತು.