ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೫೦ ನೋವು
ಮನೆಗೆ ಹಿಂದಿರುಗಿದಾಗ, ಅತ್ತೆಮ್ಮ ದೀಪ ಹಚ್ಚುತ್ತಿದ್ದರು.
ರಂಗಣ್ಣನ ಕೊಠಡಿಯಲ್ಲಿ ಬೆಳಗ್ಗೆಯೇ ಅಣಿಗೊಳಿಸಿದ್ದ ಟ್ರಂಕು ಪ್ರಯಾಣ ಸಿದ್ದತೆಯನ್ನು ಸಾರುತಿತ್ತು . ನಗರಕ್ಕೆ ಹೊರಡುವ ತನ್ನ ಅಪೇಕ್ಷೆಯನ್ನು ರಂಗಣ್ಣ ವ್ಯಕ್ತಪಡಿಸಿದ್ದೇ ತಡ, ಶಾಮೇ ಗೌಡರು ಒಪ್ಪಿಗೆ ಕೊಟ್ಟಿದ್ದರು. ಅದರಲ್ಲೂ ಹೊಸಳ್ಳಿಗೆ ಹೋಗಿ ಬಂದ ಮೇಲೆ ಅವರ ಮನಸ್ಸು ಪ್ರಸನ್ನವಾಗಿತ್ತು. ಅವರು ಕೇಳಿದ್ದರು : " ಯಾವಾಗ ಓಗ್ತೀಯಾ ?" "ನಾಳೆ. " " ಸರಿ. ಚಂದ್ರಣ್ಣನೂ ಇನ್ನೊಂದು ವಾರದೊಳಗೆ ನಗರಕ್ಕೆ ಓಗ್ತಾವ್ನ೦ತೆ ." " ನೀವು ಹೋದದ್ದು ಏನಾಯ್ತು ಅಪ್ಪ?" " ಒಪ್ಪಿದ್ರು , ರಂಗ." " ಒಪ್ಪಿದ್ರೆ? ಒಳ್ಳೆದಾಯ್ತು. " " ನವರಾತ್ರಿಗುಂಚೆ ಒಂದು ಲಗ್ನ ಐತೇಂತ ಅವರ ಜೋಯಿಸರು ಯೋಳವ್ರೆ.. ಆ ಟೇಮಿಗೆ ನಿನಗೂ ರಜಾ ಸಿಗಬೌದು. ಅಲ್ಲವಾ ?" " ಹೂಂ, ದಸರಾ ರಜಾ ಹಾಗೂ ಇರುತ್ತಲ್ಲ." " ಅದಕ್ಕೂ ಮುಂಚೇನೇ ಆದ್ರೆ ವಾಸೀಂತಿದ್ದೆ. ಮಳೆ ಶುರು ಆದ್ಯೆಕೆ ಒಲದ ಕೆಲಸ; ಅದು ಮುಗಿದೇ ಎ೦ಗಾಯ್ತದೆ ಅಂದ್ರು ನಿಜ ಅನ್ನಿಸ್ತು " " ಚಂದ್ರಣ್ಣ ಒಪ್ಪಿಗೆ ಕೊಟ್ನ ?" " ಆಗೋದಾದ್ರೆ ಈಗ್ಲೇ ಆಗ್ವೇಕು: ಇಲ್ವೇ ಓದ್ರೆ ಬೇರೆ ಕಡೆ ಗಂಡು ನೋಡ್ತೀನಿ–ಅಂದೆ.” " ಹುo." "ಚಂದ್ರಣ್ಣ ನಗರದಾಗೆ ನಿನಗೆ ಸಿಗ್ತಾನೆ, ಅಲ್ಲವಾ ?” " ಹೂಂ.. ಲಾ ಕಾಲೇಜ್ ಹಾಸ್ಟೆಲ್ನಾಗಿರುತ್ತಾನೆ." " ಅಲ್ಲಿಗೆ ಓಗೋದು ಬರೋದು ಮಾಡ್ತಾ ಇರು." " ಹೂಂ." –ಆ ಸಂಭಾಷಣೆಯಿಂದ ರಂಗಣ್ಣನಿಗೆಷ್ಟೋ ಸಮಾಧಾನವಾಗಿತ್ತು, ಚಿಕ್ಕವನು ಎಂದು ಉಪೇಕ್ಷೆ ಮಾಡದೆ ಅಷ್ಟೊಂದು ಆತ್ಮೀಯವಾಗಿ ತಂದೆ ಮಾತನಾಡಿದರಲ್ಲ. ಪದ್ಮನ ಅನುಚಿತ ವರ್ತನೆ ಅಲ್ಲದೆ ಹೋಗಿದ್ದರೆ ತನ್ನ ತಂಗಿಯ ಮದುವೆ ಇನ್ನೂ ಮುಂದಕ್ಕೆ ಹೋಗುತ್ತಿತ್ತೇನೋ. ಗುಡಿಯಿಂದ ತಾನು ವಾಪಸು ಹೊರಟಾಗ ಆ ಕಡೆಗೆ ಪದ್ಮ ಬಂದ. ತನ್ನನ್ನು ನೋಡಿಯೂ ನೋಡದಂತೆ ಮಾಡಿದ ಆ ದೈವಭಕ್ತ, ಮಾತನ್ನಾದರೂ ಯಾವ ಮುಖದಿಂದ ಆಡಬಲ್ಲ ಆತ ತನ್ನೊಡನೆ ? ತಾನು ಅಲ್ಲಿ ನಿಲ್ಲದೆ ನೇರವಾಗಿ ಇಳಿದು ಬಂದುದು ಒಳ್ಳೆಯದೇ
ಆಯಿತು .
...ಮನೆಗೆ ಬಂದ ರಂಗಣ್ಣ, ಟ್ರಂಕಿಗೆ ತುಂಬಿಸಿ ಉಳಿದುದನ್ನೆಲ್ಲ ಸರಿಯಾಗಿ ಜೋಡಿಸಿ