ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೫೪ ನೋವು ಅಡುಗೆಯವನು ಟ್ರೇಯಲ್ಲಿ ಉಪಾಹಾರದ ತಟ್ಟೆಗಳನ್ನು ತಂದ. ಹೇಳಲೋ ಬೇಡವೋ ಎಂದು ಎರಡು ಮೂರು ಸಲ ಯೋಚಿಸಿದ ಬಳಿಕ ಧೈರ್ಯ ತಂದುಕೊಂಡು. " ವಿಷ್ಣುಮೂರ್ತಿಗಳೇ, ನೀವು ಎರಡು ತಪ್ಪುಗಳು ನಿಮ್ಮಿಂದ ಆಗಿವೆ ಅಂದಿರಿ. ಇನ್ನೊಂದನ್ನೂ ಹೇಳಬೇಕಾಗಿತ್ತು!" ಎಂದರು ಶ್ರಿನಿವಾಸಯ್ಯ. ತಟ್ಟೆಗಳನ್ನು ನೋಡಿದೊಡನೆ ವಿಷ್ಣುಮೂರ್ತಿಯವರಿಗೂ ಅದು ಹೊಳೆದಿತ್ತು. "ಹೌದಲ್ಲ!ಶಕ್ತ್ಯನುಸಾರ ಭಕ್ತಿ ಅಂತ ಏನೋ ತಿಂಡಿತೀರ್ಥ ಮಾಡಿದ್ವಿ.ರಾಯರಲ್ಲೂ ಈ ಕಾರ್ಯಕ್ರಮ ಇದೆ ಅನ್ನೋದನ್ನ ಮರೀಬಾರದಾಗಿತ್ತು." ಮೋಹನರಾಯರು ನಸುನೆಕ್ಕು ಅಂದರು : "ದೊಡ್ತದಲ್ಲ ವಿಷ್ಣುಮೂರ್ತಿಗಳೇ. ಇದು ಅಲ್ಪೋಪಹಾರ. ಯಾವ ಲೆಕ್ಕಕ್ಕೆ ? ತಗೊಳ್ಳಿ ಶ್ರಿನಿವಾಸಯ್ಯನವರೇ. ತಗೊಳ್ಳಿ ಪದ್ಮನಾಭರಾವ್. ತಗೊಳ್ಳೀಪ್ಪಾ." ನೀಡಿದುದನ್ನು ಸ್ವೀಕರಿಸುವುದರ ಹೊರತು ಬೇರೆ ಧಾರಿ ಇರಲಿಲ್ಲ. ಮೋಹನರಾಯರ ಪತ್ನಿ ಮಗಳೊಡನೆ ಬಂದರು. ಆರತಿ ಈಗ ವಿಲಾಸಿನಿಯಲ್ಲ ವಧುಪರೀಕ್ಷೆಯಲ್ಲವೆ ಅದು? ಬಹಳ ಬೆಲೆಯ ರೇಷ್ಮೆ ಸೀರೆಯನ್ನು ಮೈತುಂಬ ಹೊದೆದ. ಕೊಂಡು,ಗಂಭೀರವಾಗಿ ಆ ಲತಾಂಗಿ ಬಂದ ರೀತಿ ಶ್ರಿನಿವಾಸಯ್ಯನವರಿಗೆ ಮೆಚ್ಚುಗೆಯಾಯಿತು ನಿರಾಶೆಯಾದುದು ಪದ್ಮನಾಭನಿಗೆ.ಅವನೆಂದುಕೊಂಡ. ಒಳ್ಳೆಯ ವಾಕಿಂಗ್ ಸ್ಟಿಕ್. ಪ್ರಮದೆ- ಸುಬ್ಬಿ-ಕನಕಲತೆಯರಿಗೂ ಈಕೆಗೂ ಧ್ರುವಗಳ ಅಂತರ... ಅದರೆ ಅ ಕಣ್ಣುಗಳು! ತುಟಿಗಳು! ಆರತಿ ಕಳ್ಳ ನೋಟದಿಂದ ಅವನನ್ನು ನೋಡುವುದರಲ್ಲಿ ನಿರತಳಾಗಿದ್ದಳು : ವುಲ್ಲನ್ ಪ್ಯಾಂಟ್ ಬುಶ್ ಶರ್ಟಿನ ಕೆಂಪನೆಯ ಹುಡುಗ... ಅವರ ನೋಟಗಳು ಸಂಧಿಸಿದಾಗ ಪದ್ಮನಾಭನಿಗೆ ರೋಮಾಂಚವಾಯಿತು. [ಅವಳಿಗೂ ಅಷ್ಟೆ.] ಅವನ ನಿರಾಶೆ ಸಮಾಧಾನಕ್ಕೆ ಎಡೆಮಾಡಿಕೊಟ್ಟಿತು. "ಆರತೀನ ಏನಾದರೂ ಕೇಳೋದಿದ್ದರೆ ಕೇಳಬಹುದು," ಎಂದರು ಮೋಹನರಾಯರು. ಲಾಯರ್ ರಾಯರು ಆ ಸನ್ನಿವೇಶದಲ್ಲಿ ವಿಚಾರಣೆಯನ್ನು ಮುನ್ನೆಡೆಸುವ ನ್ಯಾಯಾಧೀಶರಾಗಿದ್ದರು. ಆದರೆ ವಕೀಲರಾಗಿ ಪ್ರಶ್ನೆಗಳ ಮಳೆ ಸುರಿಸಲು ಶ್ರಿನಿವಾಸಯ್ಯ ಸಿದ್ಧರಿರಬೇಕುಲ್ಲ ? "ಛೆ ! ಛೆ ! ಕೇಳೋದು ಏನೂ ಇಲ್ಲ," ಎಂದರು. ಅಷ್ಟರತನಕ ಪ್ರಯಾಸದಿಂದ ತುಟಿಗಳನ್ನು ಬಿಗಿಹಿಡಿದಿದ್ದ ವಿಷ್ಣುಮೂರ್ತಿಯವರಿಗೆ ಮಾತಿನ ಆಕ್ಷಿ ಬಂತು. "ನಾನೊಂದು ಹೇಳ್ಲಾ ಶ್ರಿನಿವಾಸಯ್ಯನವರೇ. ಈಗಿನ ಕಾಲ್ದಲ್ಲಿ ಹುಡುಗ-ಹುಡುಗಿ ಮದುವೆಗೆ ಮುಂಚೆ ಪರಸ್ಪರ ಮಾತನಾಡೋದು ತಪ್ಪಲ್ಲ. ಬೇಕಿದ್ದರೆ ಪದ್ಮನಾಭರಾಯರೂ ಮೋಹನರಾಯರ ಮಗಳೂ ಒಂದೈದು ನಿಮಿಷ..." ಶ್ರಿನಿವಾಸಯ್ಯ ಅಂದರು : " ಛೆ ! ಛೆ ! ಅದರ ಅಗತ್ಯ ಏನು? ... ಅಲ್ಲಾ, ಅದೂ ಸರೀನೇ ಅನ್ನಿ." ತೀರ್ಪಿತ್ತರು ಮೋಹನರಾಯರು :