ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾನು ಅನೇಕ ಗ್ರಂಥಗಳನ್ನು ಓದಿ ನೋಡಿ, ಅವುಗಳ ಸಾರಾಂಶ ವನ್ನೆಲ್ಲ ಗುಹಿಸಿ ಸಂಕ್ಷೇಪವಾಗಿ ಈ ಗ್ರಂಥವನ್ನು ರಚಿಸಿರುವೆನು. ವಾಚಕರು ಇದರಲ್ಲಿರುವ ನ್ಯೂನಾತಿರೇಕಗಳನ್ನು ತೋರಿಸಿಕೊಟ್ಟಲ್ಲಿ ಅವರ ಸಲಹೆಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಿ ಮುಂದಣ ಮುದ್ರಣದಲ್ಲಿ ಸರಿಪಡಿಸುವೆನು. ಈ ಸಣ್ಣ ಪುಸ್ತಕದಿಂದ ನಮ್ಮ ದೇಶ ಬಾಂಧವರಾದ ಮಹಮ್ಮದೀಯರಿಗೂ ಹಿಂದೂಗಳಿಗೂ ಪರಸ್ಪರ ಪ್ರೀತಿ ವಿಶ್ವಾಸಗಳು ಅಭಿವೃದ್ಧಿಯಾಗಲು ಸ್ವಲ್ಪ ಮಟ್ಟಿಗಾದರೂ ಸಹಾಯ ವಾದಲ್ಲಿ ನನ್ನ ಶ್ರಮವು ಸಾರ್ಥಕವಾಯಿತೆಂದೂ ನಾನು ಕೃತಾರ್ಥ ನಾದೆನೆಂದೂ ಭಾವಿಸುವೆನು. ಗುಂಥವನ್ನು ಸಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟುದಕ್ಕಾಗಿ ಬೆಂಗಳೂರು ಪ್ರೆಸ್ಸಿನವರಿಗೆ ಕೃತಜ್ಞನಾ ಗಿರುವೆನು. ಬೆಂಗಳೂರು ಪ್ರಮೋದೂತ ಸಂವತ್ಸರದ ವೈಶಾಖ ಶುದ್ಧ ೫ || ಇತಿ ಕನ್ನಡಿಗರ ಪಾದ ಸೇವಕ ಸಿ. ಕೆ. ವೆಂಕಟರಾಮಯ್ಯ