ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

99

- ಹೊಂದಿರುವ ಕಲೆ. ಇದರಲ್ಲಿ ಈಗ ಒಂದೆಡೆ ಜನಪ್ರಿಯತೆಯ ಹೊಯ್ಲು, ಮತ್ತೊಂದೆಡೆ ಕಲಾ ಶೈಲಿ, ಸೌಂದಯ್ಯಗಳ ಕುರಿತು ಹೊಸ ಎಚ್ಚರ ಎರಡೂ ಕಾಣಿಸಿವೆ. ಈ ಎಚ್ಚರಕ್ಕೆ ಚಾಲನೆ ನೀಡುವುದು ಹೊಣೆಯುಳ್ಳ ಸಂಘಟನೆ, ಮೇಳ, ಸಮ್ಮೇಳನಗಳ ಕೆಲಸವಾಗಿದೆ.
ಒಡ್ಡೋಲಗದಲ್ಲಿ ಶೈಲಿ ಸ್ಪುಟತೆ ಮುಖ್ಯ. ಅಂತೆಯೆ ಒಂದಕ್ಕಿಂತ ಹೆಚ್ಚು ವೇಷಗಳಿದ್ದಾಗ ಪರಸ್ಪರ ಸಮನ್ವಿತ ಚಲನೆ (coordinated movement) ಅತಿ ಮುಖ್ಯ. ನಾಲ್ಕಾರು ವೇಷವಿರುವ ಒಡ್ಡೋಲಗ ನಾಟ್ಯದಲ್ಲಿ ಅವುಗಳ ನಾಟ್ಯವು ಪೂರಕವಾಗಿ, ಹಸ್ತಭಾವ, ಭಂಗಿ, ದಿಕ್ಕು, ಚಲನೆ ಏಕರೂಪಿಯಾಗಿಲ್ಲದಾಗ ಆ ಒಡ್ಡೋಲಗವನ್ನು ನೋಡುವವನಿಗೆ ಕಷ್ಟವಾಗುತ್ತದೆ. ಪ್ರಾತ್ಯಕ್ಷಿಕೆಯು ಕಲಾವಿದನಿಗೆ ಈ ಪ್ರಜ್ಞೆಯನ್ನು ಕೊಡಲು ಸಹ ಕಾರಣವಾಗುತ್ತದೆ.
ದೀರ್ಘವಾಗಿರುವ ಒಂದು ಒಡ್ಡೋಲಗ ವಿಧಾನ. ಉದಾ : ತೆಂಕು ತಿಟ್ಟಿನ ದೇವೇಂದ್ರ ದಿಕ್ಪಾಲಕರ ಪ್ರವೇಶದ ರೀತಿ. ಇದರಲ್ಲಿ ಎರಡೆರಡು ತೆರೆ ನಾಟ್ಯಗಳೂ, ಮೂರು ಬಾರಿ 'ಧಿಗಿಣ'ಗಳೂ ಇವೆ. ಇಂತಹದನ್ನು, ಅದರ ರೂಪವನ್ನು ಪುನರಾವರ್ತನೆ ಇಲ್ಲದೆ ಕಾಣಿಸುವಂತೆ ಸಂಕ್ಷೇಪಿಸುವ ಅಗತ್ಯವಿದೆ ; ಹಾಗೆ ಮಾಡಿರುವರು ಕೂಡ. ಒಡ್ಡೋಲಗಗಳಲ್ಲಿ ಇರುವ ಬಡಿತ, ಕುಣಿತಗಳಲ್ಲೆ ಹೊಸ ರೀತಿಗಳೂ ಸಾಧ್ಯವಿದೆ.
ಪ್ರದರ್ಶನ, ಪ್ರಾತ್ಯಕ್ಷಿಕೆಗಳ ವಿಚಾರದಲ್ಲಿ ಸಿದ್ಧತೆ, ಅಚ್ಚುಕಟ್ಟುಗಳ ಕುರಿತು ಗಮನ ಅಗತ್ಯ. ಎರಡೂ ತಿಟ್ಟುಗಳಲ್ಲಿ ಕಲಾಸಂಪತ್ತು, ಪ್ರಾವೀಣ್ಯ ಚೆನ್ನಾಗಿದೆ. ಆದರೆ ಸಿದ್ಧತೆ, ಸಮನ್ವಯಗಳ ವಿಚಾರದಲ್ಲಿ ಬಡಗುತಿಟ್ಟಿನ ಕಲಾವಿದರು ಹೆಚ್ಚು ಕ್ರಿಯಾಶೀಲರು ಎಂಬುದು ನಮ್ಮ ಅನೇಕರ ಅನುಭವ. ಈ ಕುರಿತು ತೆಂಕುತಿಟ್ಟಿನ ಕಲಾವಿದರೂ, ಸಂಘಟಕರೂ ಚಿಂತಿಸಬೇಕೆಂದು ವಿನಂತಿಸುತ್ತೇನೆ. ಇಂದಿನ ಸಂಘಟನೆಯಂತಹ ಉಭಯ ತಿಟ್ಟುಗಳ ಮಿಲನ, ಇದಕ್ಕೆ ಪ್ರೇರಕವಾಗಲಿ, ಸಮ್ಮೇಳನವನ್ನು ಚಿಂತನೆಯ ಒಂದು ದಿಕ್ಕಾಗಿ, ಸಾಧ್ಯತೆಯಾಗಿ ರೂಪಿಸಿರುವ ಈ ಸಂಘಟನೆಯು ಮುಂದಿನ ವರ್ಷಗಳಲ್ಲಿ ಅರ್ಥಪೂರ್ಣವಾದ ಮುಂದುವರಿಕೆಗಳನ್ನು ತೋರಿಸಲಿ. ಅದಕ್ಕೆ ಕಲಾವಿದ, ಪೋಷಕ, ಸಂಘಟಕರ, ಆಸಕ್ತರ ಬೆಂಬಲ ದೊರೆಯಲಿ, ಶ್ರೀಗಳವರ ಆಸಕ್ತಿ ಸಾರ್ಥಕವಾಗಿ ಮುಂದುವರಿಯಲಿ.

• ಡಾ. ಎಂ. ಪ್ರಭಾಕರ ಜೋಶಿ