ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
51

ಉಳಿದುದಕ್ಕೆ ಹೊಂದುತ್ತದೆಯೇ ಎಂದು ಯೋಚಿಸಬೇಕು. ಯಕ್ಷಗಾನ ಎದೆಪದಕಗಳನ್ನುಎಣಿಸಿ ನೋಡಿ, ಅವುಗಳ ಮೇಲೆ ಪುನಃ ಹೂಮಾಲೆಯನ್ನೂ, ಕಾಗದದ ಮಾಲೆಗಳನ್ನೂ ಹಾಕಿಕೊಳ್ಳುವುದು ಎಷ್ಟು ಅರ್ಥಹೀನ. ಎಷ್ಟು ವಿಕಾರ ಎಂದು ಗೊತ್ತಾಗುತ್ತದೆ.

ಸುಧಾರಣೆ ಎಂಬುದು ವಿಸ್ತರಣೆ. ಅದು ಇರುವ ಅಂಶಗಳ, ಸಾಧ್ಯತೆಗಳ ಅರಳುವಿಕೆ.ಇದೇ ಸ್ವತ್ವವನ್ನುಳಿಸಿಕೊಂಡ ಸತ್ತ್ವದ ವಿಕಾಸ, ದಿ| ಕೆ. ಕೆ. ಹೆಬ್ಬಾರರು ನಿರ್ಮಿಸಿದ ಸ್ತ್ರೀವೇಷದ ಮಾದರಿ ನಮಗೆ ಯಕ್ಷಗಾನ ರಂಗದಲ್ಲಿ ಪ್ರಾಚೀನ ಕಾಲದಿಂದಲೇ ಇದ್ದ ಒಂದು ವೇಷ ವಿಧಾನ ಎಂದು ಕಾಣಲು ಕಾರಣವೇನು ? ಕಾರಣ ಇಷ್ಟೆ, ಆ ಮಾದರಿಯು ಯಕ್ಷಗಾನದ ಒಟ್ಟು ವೇಷವಿಧಾನದೊಳಗಿನಿಂದಲೇ ಮೂಡಿದ ಸೃಷ್ಟಿಯಾಗಿದೆ. ಈ ಮಾತನ್ನೆ ಒಳ್ಳೆಯ -ಪ್ರಸಂಗ ಸೃಷ್ಟಿಗಳ ಕುರಿತು ಹೇಳಬಹುದು.

ಯಕ್ಷಗಾನದಲ್ಲಿ ಏಸುಕ್ರಿಸ್ತನ ಪಾತ್ರವನ್ನು ಚಿತ್ರಿಸುವಾಗ ಅವನು ಬಡ, ಬಡಗಿಯ ಮಗನೆಂಬ ಬಡತನವೇ ಮುಖ್ಯವಾಗಿರಬೇಕಾದ ಲಕ್ಷಣವನ್ನು ಬಿಟ್ಟು, ಆತನು ದೇವಪುತ್ರನೆಂದೂ, ಸಂತನೆಂದೂ ಮುಖ್ಯವಾಗಿರಿಸಿ ಚಿತ್ರಿಸಬೇಕು. ಮಹಾಭಾರತದ ದ್ರೋಣನ ವೇಷವು ಸೇನಾಪತಿಯಂತೆ ಇರಬೇಕು ಹೊರತು, ಸಾಮಾನ್ಯ ಬ್ರಾಹ್ಮಣ ವೇಷವಾಗಬಾರದು.ಹೀಗೆ ಪುರಾಣದ ಕಥೆಯಾದರೂ ಕೂಡ ಕಲೆಯು ಸ್ವತ್ವದ ಭಾಷೆಯಲ್ಲಿ ಅಭಿವ್ಯಕ್ತಿಯನ್ನು ಸಾಧಿಸಬೇಕು. ಇಲ್ಲಿ ಸ್ವತ್ವವನ್ನು ಅರ್ಥೈಸುವಾಗ ಯಕ್ಷಗಾನವು ವಾಸ್ತವಿಕ ಕಲೆಯಲ್ಲ ಅದು ರಮ್ಯಾದ್ಭುತ ಪ್ರಧಾನ ಮತ್ತು ಶೈಲಿಬದ್ಧ ಕಲೆ ಎಂಬುದನ್ನು ಜ್ಞಾಪಕದಲ್ಲಿಟ್ಟರೆ ಮಾತ್ರ ಆ ಪದಕ್ಕೆ ವ್ಯಾಪ್ತಿ ಖಚಿತವಾಗುತ್ತದೆ.

ಕಲೆಯ ಸತ್ತ್ವ ಅರ್ಥಾತ್ ಯೋಗ್ಯತೆ ಮತ್ತು ಸಾಮರ್ಥ್ಯ ಎರಡು ಬಗೆಯಾಗಿದೆ.ಒಂದು ಕಲೆಯು ತನ್ನ ಬೆಳವಣಿಗೆಯ ಮೂಲಕ ಸಾಧಿಸಿರುವ ಯೋಗ್ಯತೆ. ಇದು ಆ ಮಾಧ್ಯಮದ ಯೋಗ್ಯತೆ. ಇನ್ನೊಂದು ಕಲಾವಿದನ ಪಾಂಡಿತ್ಯ, ಪ್ರತಿಭೆ, ಸಾಧನೆಗಳಿಂದ ಗಳಿಸಿದ ಸತ್ತ್ವ ಅರ್ಥಾತ್ ಕಲಾವಿದನ ಸಾಮರ್ಥ್ಯ. ಆದರೆ, ಇದು ಕೂಡ ಸ್ವತಂತ್ರವಲ್ಲ.ಅದು ಆ ಕಲೆಯ ಮೂಲಕವೇ ಅಭಿವ್ಯಕ್ತಗೊಳ್ಳುತ್ತದೆ. ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಸಂಗೀತ ಪ್ರತಿಭೆ ನಮಗೆ ಮುಖಾಮುಖಿಯಾಗುವುದು ದಕ್ಷಿಣಾದಿ ಸಂಗೀತವೆಂಬ ಶೈಲಿಯ, ಪ್ರಕಾರದ ಮೂಲಕವೇ ಆಗಿದೆಯಷ್ಟೆ ?

ಈ ಕಲೆಯ ಸ್ವಯಂ ಶಕ್ತಿಯನ್ನೇ ನಾವು ಕೆಲವೊಮ್ಮೆ ಕಲಾವಿದರ ಶಕ್ತಿಯಾಗಿ ಭಾವಿಸುವುದುಂಟು. ಕಲೆಯು ತಾನು ಗಳಿಸದ ಸಾಮರ್ಥ್ಯದಿಂದ ಅರ್ಥಾತ್ ಅದರ ಐತಿಹಾಸಿಕ

* ಡಾ. ಎಂ. ಪ್ರಭಾಕರ ಜೋಶಿ