ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಮೂಕನಾಗಿದ್ದೇನೆ

ಸಂಮಾನ ಸ್ವೀಕಾರ, ಕೃತಜ್ಞತಾ ಭಾಷಣ ಸಂಕ್ಷೇಪ

ಡಾ. ಎಂ. ಪ್ರಭಾಕರ ಜೋಶಿ

ಕಲಾತ್ಮ ಬಂಧುಗಳೆ,
ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ ।
ಸರ್ವಶೂನ್ಯ ನಿರಾಕಾರಂ ನಿಶ್ಯಬ್ದಂ ಬ್ರಹ್ಮ ಉಚ್ಚತೇ ॥

(ಯಕ್ಷಗಾನ ಸಭಾಲಕ್ಷಣ)


ಯಕ್ಷಗಾನ ಸಭಾಲಕ್ಷಣದ ಈ ನುಡಿಯಂತೆ - ನಾನಿಂದು ನಿಮ್ಮ ಪ್ರೀತಿ ಅಭಿಮಾನದ ವರ್ಷಧಾರೆಯಲ್ಲಿ ಮುಳುಗಿ ಮೂಕನಾಗಿದ್ದೇನೆ. ಆದರೂ ಮಾತಾಡಲೇಬೇಕಾಗಿದೆ. ಅದು ನನ್ನ ಕರ್ತವ್ಯ. ಮಾತಿನ ಮಾಣಿಕ್ಯವಲ್ಲವಾದರೂ, ಎಸಳನ್ನಾದರೂ ಅರ್ಪಿಸ ಬೇಕಲ್ಲವೇ?

ಕಳೆದೆರಡು ದಿನಗಳಲ್ಲಿ ಇಲ್ಲಿ ಜರಗಿದ ಗೋಷ್ಠಿ, ಸಂಮಾನ, ಸಂತಸ ನನಗಿದು ವಿಸ್ಮಯ. ನನ್ನ ಸಪ್ತತಿ ಸಂಮಾನ ಮೈಸೂರಲ್ಲಾಗುತ್ತದೆ ಎಂದು ಎಂದೂ ಊಹಿಸಿದವನಲ್ಲ.